Friday 3 March 2017

ಒಂದ್ ಕಥೆ 
ಒಬ್ಬ ದೊಡ್ಡ ಹುದ್ದೆಯಲ್ಲಿದ್ದ ವ್ಯಕ್ತಿ , ಕೈ ತುಂಬಾ ಸಂಬಳ , ಇರೋಕೆ ಮನೆ, ಹೆಂಡತಿ ಮಕ್ಕಳು.. ಎಲ್ಲಾ ಇದ್ರೂ ಅವನಿಗೇನೋ ಅಸಮಾಧಾನ , ಪ್ರತಿ ನಿತ್ಯದ ಸಮಸ್ಯೆಗಳಿಂದ ಮುಕ್ತಿಯೇ ಸಿಗದೇನೋ ಅನಿಸುವಂತೆ . ಬದುಕೇ ಬೇಸರ ಅನಿಸೋ ಹಾಗೆ .. 
ಒಮ್ಮೆ ಅವನ ಊರಿಗೆ ಒಬ್ಬ ಹಿರಿಯ ಗುರುಗಳು ಬರ್ತಾರೆ .. ತುಂಬಾ ತಿಳಿದವರು ಅಂತೆಲ್ಲ ಜನ ಹೇಳ್ತಾ ಇರ್ತಾರೆ . ಜನರೆಲ್ಲಾ ಅವರ ದರ್ಶನಕ್ಕೆ ಹೋಗೋದನ್ನ ಕಂಡು ಈ ವ್ಯಕ್ತಿ ಕೂಡ ತನಗೇನಾದ್ರು ಪರಿಹಾರ ಸಿಗಬಹುದೇನೋ ಅಂತ ಗುರುಗಳ ದರ್ಶನಕ್ಕೆ ಹೋಗ್ತಾನೆ ,, ವಿಪರೀತ ಜನಗಳ ಮಧ್ಯೆ ಅವನಿಗೆ ದರ್ಶನ ಸಿಕ್ಕಾಗ ರಾತ್ರಿ ಆಗಿರುತ್ತದೆ . ಅವನು ಗುರುಗಳಿಗೆ ತನ್ನ ಸಮಸ್ಯೆ ಹೇಳ್ತಾನೆ , ಒಂದಲ್ಲ ಒಂದು ಸಮಸ್ಯೆಗಳಿಂದ ಬೇಸೆತ್ತ ಬಗ್ಗೆ ಹೇಳ್ತಾನೆ . ಗುರುಗಳು ಹೇಳ್ತಾರೆ 'ಈಗ ಹೇಗೂ ರಾತ್ರಿ ಆಗಿಹೋಗಿದೆ , ನಿನ್ನ ಸಮಸ್ಯೆಗೆ ನಾಳೆ ಪರಿಹಾರ ಹೇಳ್ತಿನಿ , ನಮ್ಮ ದನಗಳ ಕೊಟ್ಟಿಗೆಯಲ್ಲಿ ಒಂದಷ್ಟು ದನಗಳಿವೆ , ಅವುಗಳನ್ನ ನೋಡಿಕೊಳ್ಳುವವ ಈವತ್ತು ಹುಷಾರು ತಪ್ಪಿದ್ದಾನೆ . ನೀನು ತುಂಬಾನೇ ದೊಡ್ಡ ಕೆಲ್ಸದಲ್ಲಿದ್ದೀಯ ಅಂತ ಗೊತ್ತು ಆದರು ಇವತ್ತೊಂದು ರಾತ್ರಿ ನೀನು ಆ "ಎಲ್ಲಾ " ದನಗಳು ರಾತ್ರಿ ಮಲಗಿದ ಮೇಲೆ ಮಲಗಬೇಕು , ಅವೇ ಮಲಗಿದರೂ ಸರಿ, ನೀನೆ ಕುಳ್ಳಿರಿಸಿದರೂ ಸರಿ , ಎಲ್ಲಾ ಮಲಗಿದ ಮೇಲೆ ಮಲಗಬೇಕು ' ಅಂತಾನೆ . ಇವನಿಗೆ ಇದ್ಯಾಕೋ ಅತಿಯಾಯ್ತು ಅನಿಸಿದರೂ ಅವರ ಮೇಲಿನ ಗೌರವಕ್ಕೆ ಒಪ್ಪಿಕೊಳ್ತಾನೆ
ಬೆಳಗಾಗುತ್ತೆ .. ಇವನೂ ಗುರುಗಳ ಮುಂದೆ ಬಂದು ನಿಲ್ತಾನೆ . ಗುರುಗಳು ಕೇಳ್ತಾರೆ 'ಏನಪ್ಪಾ, ರಾತ್ರಿ ಮಲಗಿದ್ಯಾ"?
"ಅಯ್ಯೋ , ಎಲ್ಲಿಯ ನಿದ್ರೆ ಗುರುಗಳೇ , ಒಂದು ದನವನ್ನ ಕುಳ್ಳಿರಿಸಿದರೆ ಮತ್ತೊಂದು ಎದ್ದು ನಿಲ್ತಾ ಇತ್ತು .. ಇಡೀ ರಾತ್ರಿ ಇದೇ ಆಯ್ತು ' ಅಂತಾನೆ
ಗುರುಗಳು ನಗ್ತಾರೆ ' ಕೆಲವು ದನಗಳು ಅವುಗಳಷ್ಟಕ್ಕೆ ಅವು ಕುಳಿತವೇನೋ, ಕೆಲವನ್ನ ನೀನು ಒತ್ತಾಯದಿಂದ ಕುಳ್ಳಿರಿಸಿದೆಯೇನೋ , ಕೆಲವು ಕುಳಿತುಕೊಳ್ಳಲೇ ಇಲ್ಲವೇನೋ ಅಲ್ವೇ??! ಬದುಕಿನಲ್ಲೂ ಹಾಗೇನೇ , ಸಮಸ್ಯೆಗಳು ಇದ್ದೆ ಇರುತ್ತವೆ ..... ಕೆಲವು ಸಮಯ ಕಳೆದಂತೆ ತಾವೇ ಸರಿದು ಹೋಗುತ್ತವೆ, ಕೆಲವು ಸಮಸ್ಯಗಳನ್ನ ನಾವೇ ಕಷ್ಟ ಪಟ್ಟು ಪರಿಹರಿಸಿಕೊಳ್ಳಬೇಕು , ಕೆಲವಕ್ಕೆ ಪರಿಹಾರವೇ ಸಿಗೋದಿಲ್ಲ , ಕೆಲವು ಸಮಸ್ಯೆಗಳು ಸಮಸ್ಯೆಗಳೇ ಅಲ್ಲ .... ನಿನಗೆ ಎಲ್ಲವೂ ಇದೆ , ಅನಗತ್ಯವಾಗಿ ನಿನ್ನನ್ನು ನೀನು ಹಿಂಸಿಕೊಳ್ಳಬೇಡ , ಬದುಕು ಸುಂದರವಾಗಿದೆ ಸುಂದರವಾಗು ಬದುಕು; ಅಂತಾನೆ ...
ಸಮಸ್ಯೆಯನ್ನ ಸಮಸ್ಯೆಯಾಗಿಯೇ ಉಳಿಸಿಕೊಂಡರೆ ಸಮಸ್ಯೆಯೇ ..... ಸಮಸ್ಯೆಯಲ್ಲದ್ದನ್ನ ಸಮಸ್ಯೆ ಎಂದುಕೊಂಡರೆ ಕೂಡ ಸಮಸ್ಯೆಯೇ
ಹಂಚಿಕೊಳ್ಳಬೇಕು ಅನಿಸ್ತು :))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...