Friday 3 March 2017

ಶ್ರೀಪಾದಣ್ಣ ಆಸ್ತಿಕ ನಾಸ್ತಿಕನ ಬಗ್ಗೆ ಒಂದು ಸಾಲು ಬರೆದಿದ್ದಾರೆ (ಆಸ್ತಿಕ ಒಂದನ್ನೇ ನಂಬಿದರೆ.......... ನಾಸ್ತಿಕ ಎಲ್ಲವನ್ನೂ ಸಂದೇಹಿಸುತ್ತಾನೆ).. ಅದು ನನಗೆ ಈ ಕಥೆ ನೆನಪಿಸಿತು .. ಹಿರಿಯರೊಬ್ಬರು ಹೇಳಿದ್ದ ಕಥೆ. 
ಒಬ್ಬ ಗುರು ಒಂದು ಆಶ್ರಮದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡ್ತಾ ಇರ್ತಾನೆ. ಪ್ರತಿದಿನ ಪಾಠಕ್ಕೆ ಮೊದಲು ಪೂಜೆ ಮಾಡಿ ನೈವೇದ್ಯವಿಟ್ಟು ಮತ್ತೆ ಪ್ರಸಾದ ಹಂಚಿ ಪಾಠ ಶುರು ಮಾಡ್ತಾ ಇರ್ತಾನೆ. 
ಒಮ್ಮೆ ಒಬ್ಬ ಹುಡುಗ ಗುರುಗಳನ್ನ ಕೇಳ್ತಾನೆ "ಗುರುಗಳೇ, ನೀವು ಇಡೋ ನೈವೇದ್ಯದಲ್ಲಿ ಒಂಚ್ಚೂರು ಕಮ್ಮಿ ಆಗಿರೋದಿಲ್ಲ ಅದನ್ನೇ ದೇವರು ತಿಂದಿರ್ತಾನೆ ಅಂತ ಹ್ಯಾಗೆ ಹೇಳ್ತೀರಾ , ಅದು ಹೀಗೆ ಪ್ರಸಾದವಾಯ್ತು "? ಅಂತಾನೆ .. ಗುರುಗಳು ಉತ್ತರಿಸದೆ ನಕ್ಕು ಬಿಡ್ತಾರೆ .
ಮತ್ತೆ ಪಾಠ ಮಾಡಿ ಒಂದು ಇಡೀ ಶ್ಲೋಕವನ್ನ ಹೇಳಿಕೊಟ್ಟು ಎಲ್ಲರೂ ಬಾಯಿಪಾಠ ಮಾಡಿ ಹೇಳುವಂತೆ ಹೇಳುತ್ತಾರೆ . ಎಲ್ಲಾ ಮಕ್ಕಳು ಕಲಿತು ಒಪ್ಪಿಸುತ್ತಾರೆ . ಗುರುಗಳು ನೈವೇದ್ಯದ ಬಗ್ಗೆ ಪ್ರಶ್ನೆ ಕೇಳಿದ ಹುಡುಗನನ್ನ ಕರೀತಾರೆ. ಅವನ ಪುಸ್ತಕ ತರುವಂತೆ ಹೇಳುತ್ತಾರೆ. " ನೀನು ಈ ಪುಸ್ತಕದಿಂದ ತಾನೇ ಶ್ಲೋಕ ಕಲಿತದ್ದು ?" ಎಂದು ಕೇಳುತ್ತಾರೆ . ಹೌದೆನ್ನುತ್ತಾನೆ ಹುಡುಗ.. ನೀ ಕಲಿತ ಮೇಲೆ ಕೂಡ ಒಂದಕ್ಷರ ಕೂಡ ಕಡಿಮೆಯಾಗಿಲ್ಲ , ಪುಸ್ತಕದಲ್ಲಿನ ಶ್ಲೋಕ ಹಾಗೇ ಇದೆಯಲ್ಲ ಮಗು " ಎನ್ನುತ್ತಾರೆ "ಪುಸ್ತಕ ಸ್ಥೂಲಸ್ಥಿತಿ (ಕಣ್ಣಿಗೆ ಕಾಣುವ ಹಾಗೆ) ಕಲಿಕೆ ಸೂಕ್ಷ್ಮ ಸ್ಥಿತಿ (ಕಣ್ಣಿಗೆ ಕಾಣದ ಹಾಗೆ) .. ದೇವರೂ ಕೂಡ ಹಾಗೆ "ಸೂಕ್ಷ್ಮ ಸ್ಥಿತಿ" , ನಾವು ಇಡುವ ನೈವೇದ್ಯ "ಸ್ಥೂಲಸ್ಥಿತಿ" ಅವನು ಅದನ್ನ ನೋಡಿ ಮುಟ್ಟಿ ಹರಸುದರೆ ಅದೇ ಪ್ರಸಾದ" ಎನ್ನುತ್ತಾನೆ ...
ನಂಬಿಕೆಯೇ ನಂದಾ ದೀಪ ಅಷ್ಟೇ .....
ಸುಂಸುಮ್ನೆ ಹಂಚಿಕೊಳ್ಳಬೇಕು ಅನಿಸ್ತು :)))))))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...