Wednesday 5 April 2017

ಕಥೆ ಅಂದ್ರೆ ರಾತ್ರಿನೇ ಕೇಳಬೇಕು ಅನ್ನೋದೇನು ಇಲ್ಲ ಅಲ್ವ.. ಇಲ್ಲೊಂದು ಸಣ್ಣ ಕಥೆ ಇದೆ ನೋಡಿ. ಕೇಳಿದ ಮೇಲೆ ಎಂದಿನಂತೆ ಹಂಚಿಕೊಳ್ಳಬೇಕು ಅನ್ನಿಸಿತು.....
ಒಮ್ಮೆ ಒಂದು ದೊಡ್ಡ ಆನೆ ನದಿಯಲ್ಲಿ ಆನಂದದಿ೦ದ ಈಜಿ ಸ್ವಚ್ಛವಾಗಿ ಹೊರಗೆ ಬರ್ತಾ ಇತ್ತು. ಹಾಗೆ ರಸ್ತೆಯಲ್ಲಿ ಬರ್ತಾ ಇರೋವಾಗ ಒಂದು ಹಂದಿ ಹೊಲಸಲ್ಲಿ ಹೊರಳಾಡಿ ಎದ್ದು ಬರ್ತಾ ಇತ್ತು. ಆನೆ ಹಂದಿಗೆ ಹಾದಿ ಬಿಟ್ಟು ರಸ್ತೆ ಬದಿಯಿಂದ ಹೋಯ್ತು . ಹಂದಿ ವ್ಯಂಗ್ಯವಾಗಿ ನಕ್ಕು 'ನೋಡು ಎಷ್ಟ್ ದೊಡ್ಡ ಪ್ರಾಣಿ ನನಗೆ ಹೆದರಿ ದಾರಿ ಬಿಡ್ತು' ಅಂತು. ಉಳಿದ ಆನೆಗಳು ಈ ದೊಡ್ಡ ಆನೆಗೆ ಬೈದ್ವು' ನೋಡು ನಿನ್ನಿಂದ ನಮ್ಮ ಕುಲಕ್ಕೇ ಅವಮಾನ , ಹೆದರಿ ದಾರಿ ಬಿಟ್ಟೆಯಲ್ಲ' ಈ ಆನೆ ಹೇಳ್ತು 'ಅಣ್ತಮ್ಮ ಅಕ್ತಂಗಿಯರ, ಆ ಹಂದಿಯ ಮೇಲೆ ಕಾಲಿಟ್ಟು ಹೊಸಕಿ ಹಾಕೋದು ಎಷ್ಟ್ ಹೊತ್ತು ? ನಾನೇನು ಹೆದರಿ ದಾರಿ ಬಿಟ್ಟಿಲ್ಲ , ನಾ ಆಗಷ್ಟೇ ಸ್ವಚ್ಛವಾಗಿ ಖುಷಿಖುಷಿಯಿಂದ ಬರ್ತಾ ಇದ್ದೆ , ಸುಂಸುಮ್ನೆ ಮೈ ಮನಸ್ಸು ಮೈಲಿಗೆ ಯಾಕೆ ಅಂತ ಸುಮ್ನಾದೆ'
ಬದುಕು ನಾಟಕಗಳ ಹೊರತಾಗಿಯೂ ಚೆಂದ . ಅಗತ್ಯವಿಲ್ಲದ ಕಡೆ ನಾವೇನು ಅಂತ ಸಾಬೀತು ಪಡಿಸೊ ಅಗತ್ಯವೇ ಇಲ್ಲ ಅಲ್ವೇ :))))


No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...