Thursday 23 March 2017

ಒಬ್ಬ ಸಾಧು ಒಂದುಸಮುದ್ರ ದಂಡೆಯಲ್ಲಿ ಬೆಳಿಗ್ಗೆಬೆಳಿಗ್ಗೆ ಧ್ಯಾನ ಮಾಡಲು ಹೋಗ್ತಾನೆ . ತಟದಲ್ಲಿ ಒಬ್ಬ ವ್ಯಕ್ತಿ ಒಂದು ಹೆಂಗಸಿನ ತೊಡೆಯ ಮೇಲೆ ತಲೆಯಿಟ್ಟು ಮಲಗಿರ್ತಾನೆ , ಪಕ್ಕದಲ್ಲಿ ಒಂದೆರಡು ಬಾಟಲಿಗಳು ಇರ್ತಾವೆ.
ಸನ್ಯಾಸಿ ಅದನ್ನು ನೋಡಿ ' ಛೆ ಎಷ್ಟು ಕೆಟ್ ಹೋಯ್ತು ಪ್ರಪಂಚ . ಬೆಳಿಗ್ಗೆಬೆಳಿಗ್ಗೆ ಕುಡಿದು ಹೆಣ್ಣಿನ ತೊಡೆಯಲ್ಲಿ ಮಲಗಿದ್ದಾನಲ್ಲ' ಅಂತ ಹೇವರಿಸುತ್ತಾನೆ. 
ಅಷ್ಟ್ರಲ್ಲಿ ಒಬ್ಬಾಕೆ 'ಕಾಪಾಡಿ ಕಾಪಾಡಿ, ಮಗು ಮುಳುಗ್ತಾ ಇದೆ' ಅಂತ ಕೂಗುತ್ತಾಳೆ . ಮಲಗಿದ್ದ ವ್ಯಕ್ತಿ ಎಚ್ಚೆತ್ತು ಸಾಗರದೊಳಗೆ ಇಳಿದು ಮಗುವನ್ನ ಉಳಿಸುತ್ತಾನೆ .. 
ಈಗ ಸನ್ಯಾಸಿ ಗೊಂದಲಕ್ಕೊಳಗಾಗುತ್ತಾನೆ 'ಇವನ್ನನ್ನ ಒಳ್ಳೆಯವನು ಎನ್ನಲೋ ಕೆಟ್ಟವನು ಎನ್ನಲೋ !?'
ಆ ವ್ಯಕ್ತಿಯನ್ನೇ ಕೇಳಿಬಿಡೋಣ ಅಂತ ಹೋಗ್ತಾನೆ 'ಯಾರಪ್ಪ ನೀನು? ಏನ್ ಕೆಲಸ ಮಾಡ್ತೀಯ?ಇಷ್ಟ್ ಬೆಳಿಗ್ಗೆಬೆಳಿಗ್ಗೆ ಇಲ್ಲೇನು ಮಾಡ್ತಾ ಇದ್ದೀಯ' ಅಂತಾನೆ ..
ಆ ವ್ಯಕ್ತಿ ಹೇಳ್ತಾನೆ 'ಅಯ್ಯಾ , ನಾನೊಬ್ಬ ಬೆಸ್ತರವ , ಸುಮಾರು ತಿಂಗಳೇ ಆಗಿತ್ತು ಮನೆ ಬಿಟ್ಟು . ಇಂದಷ್ಟೇ ಸಾಗರನ ಮಡಿಲಿಂದ ಹೊರ ಬಂದೆ . ಅದೆಷ್ಟೋ ದಿನಗಳ ನಂತರ ನೆಲ ಕಂಡ ಸಂತಸಕ್ಕೆ , ಈಕೆ ತಂದ ನೀರು ಆಹಾರ ಸೇವಿಸಿ ಹಾಗೆ ಒರಗಿದ್ದೆ ಅಷ್ಟೇ .. ಯಾರೋ ನೀರಲ್ಲಿ ಮುಳುಗಿದ್ದ ಕಂಡು ಎಚ್ಚರಗೊಂಡು ರಕ್ಷಿಸಿದೆ ಅಷ್ಟೇ .. ಈಕೆ ನನ್ನ ತಾಯಿ '
ಸನ್ಯಾಸಿ ತಾ ಯೋಚಿಸಿದ ಪರಿಗೆ ನಾಚುತ್ತಾನೆ ....
ನರಸಿಂಗ ರಾವ್ ಸರ್ ಅವ್ರ ಗೋಡೆಯಲ್ಲಿತ್ತು , ಭಾವಾನುವಾದ ನನ್ನದು ಅಷ್ಟೇ
ಹಂಚಿಕೊಳ್ಳಬೇಕು ಅನಿಸ್ತು :))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...