Sunday 29 September 2013

'ಬದಲಾದೆಯ ರಾಧೆ??, 
ಹೆಜ್ಜೆಯ ಸದ್ದಿಗೆ ನಸುನಗುತ್ತ ಬಂದು 
ಕೇಳುವ ಮುನ್ನವೇ ನಗೆಯ ಸ್ವಾಗತ ಅರ್ಪಿಸಿ 
ಮುರಳಿಯ ನಾದಕ್ಕೆ ತಲೆದೂಗುವ ನನ್ನ ರಾಧೆ
ಬದಲಾದಳೇ.'...???ಕೇಳಿದ ಮಾಧವ ನಸುನಗುತ್ತಾ ..........
ರಾಧೆಯದು ಅದೇ ಸ್ಥಿರ ಭಾವ...
ಕಣ್ಣ ತುಂಬಾ ತುಂಟತನ.....
'ಇಲ್ಲ ಮಾಧವ...
ಇರುವಿಕೆಯ ಬಯಸದೆ ನಿನ್ನ ಬಯಸಿದ,...
ನುಡಿಸದೆ ಇದ್ದರು ನಿನ್ನ ವೇಣುನಾದವ ಆಲಿಸಿದ,...
ನಿನಗಾಗೆ ನಗುವ ರಾಧೇ....
ನೀ ಬಂದರೂ ,ಬಾರದಿದ್ದರೂ ಬದಲಾಗಳು...
ಇದ ಅರಿತ ಮೇಲೆ ತಾನೇ ನೀ
ನಾ ಕರೆಯದಿದ್ದರೂ ಬಂದು ನನ್ನ ಸೆರಗ ಹಿಡಿಯುವುದು'......:)))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...