Sunday 29 September 2013

ಆ ವರ್ಷ ಬರಗಾಲ....ಇದ್ದ ಹಿಟ್ಟು ಬಳಸಿ ಅಮ್ಮ ಒಂದು ರೊಟ್ಟಿ ಮಾಡಿದ್ಲು.
ಅವಳಿಗೆ ಗೊತ್ತು ಆ ರೊಟ್ಟಿ ನನಗೆ ಸಾಲದು ಎಂದು... ನಾ ಮತ್ತೊಂದು ರೊಟ್ಟಿ ಕೇಳಿಬಿಟ್ಟರೇ ಇಲ್ಲ ಅನ್ನಬೇಕಲ್ಲ .. ಎನ್ನೋ ನೋವೂ ಇತ್ತು ..
'ಮಗ ಒಂದು ಪ್ರಶ್ನೆ ಕೇಳ್ತೀನಿ ಸರಿ ಉತ್ತರ ಕೊಟ್ರೆ ನಿನ್ನ ಉತ್ತರದ ಅಷ್ಟೂ ರೊಟ್ಟಿ ..ನಿನಗೆ ತಪ್ಪು ಉತ್ತರ ಕೊಟ್ರೆ ಒಂದು ರೊಟ್ಟಿ ಮಾತ್ರ ನಿನಗೆ' ಅಂದ್ಲು....
'ಸರಿ ಅಮ್ಮ ಕೇಳು" ಅಂದೇ ..
'ಖಾಲಿ ಹೊಟ್ಟೆಯಲ್ಲಿ ನೀನು ಎಷ್ಟು ರೊಟ್ಟಿ ತಿನ್ನಬಲ್ಲೆ' ಎಂದಳು...
'ಆರು ರೊಟ್ಟಿ ಅಮ್ಮ" ಅಂದೆ ....
'ತಪ್ಪು ಮಗ, ಒಂದು ರೊಟ್ಟಿ ತಿಂದ ಮೇಲೆ ನಿನ್ನ ಹೊಟ್ಟೆ ಖಾಲಿ ಹೇಗೆ ' ಅಂದ್ಲು...'ತಗೋ ಇವತ್ತು ನಿಂಗೆ ಒಂದೇ ರೊಟ್ಟಿ ಮತ್ತೆ ಕೇಳೋಹಾಗಿಲ್ಲ ' ಅಂದ್ಲು.......ಒಳಮನೆಗೆ ಹೋಗುತ್ತಾ ನನಗೆ ಕಾಣದಂತೆ ಕಣ್ಣು ಒರೆಸಿಕೊಂಡಳು ..........................

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...