Wednesday 2 March 2016

ಮೈಸೂರಲ್ಲಿ ಬಿಸಿಲು ಯಾರ ಮೇಲಿನ ಸಿಟ್ಟಿಗೋ ಸುಡುವಂತೆ ಸುಡ್ತಾ ಇದೆ. ಹೊರಗೆ ಹೋಗೋದೇ ಕಷ್ಟ ಅನಿಸೋ ಹಾಗೆ. ಮೊನ್ನೆ ಒಂದಷ್ಟು ಕೆಲಸಗಳು ಇದ್ವು ಅಂತ ಇಬ್ಬರೂ ಹೊರಟ್ವಿ.. ಬೆಳಿಗ್ಗೆ ೧೦ ಗಂಟೆಗೇ ಬಿಸಿಲು..ಅದರ ಮೇಲೆ ಈ ಹೆಲ್ಮೆಟ್ ಬೇರೆ! ಒಂದಷ್ಟು ಆಫೀಸ್ಗಳ ಕೆಲಸ ಮುಗಿಸಿ ಹಾಗೆ ಬಂದು ನಂದಿನಿ ಪಾರ್ಲರ್ ಬಳಿ ಮಜ್ಜಿಗೆ ಕುಡಿದ್ವಿ. ಹಾಗೆ ಒಂದು ಪ್ಯಾಕೆಟ್ ಮೊಸರು ತಗೊಂಡು ದುಡ್ಡು ಕೊಟ್ರೆ ಅಲ್ಲಿನ ಹುಡುಗ ಒಂಚ್ಚೂರು ಚಿಲ್ಲರೆ ಕೊಟ್ಟು ಉಳಿದ ೮ ರೂಪಾಯಿ ಚಿಲ್ಲರೆ ಇಲ್ಲ ಅಂತ ಒಂದು ಕೂಪನ್ ಕೊಟ್ಟ. 'ಈ ಕಡೆ ಬಂದಾಗ ಏನಾದ್ರೂ ತಗೋಳಿ ಸರ್' ಅಂದ. ನನ್ ಗಂಡ 'ಲೋ ಅಣ್ಣ, ಈ ಕಡೆ ಬರೋದು ಮತ್ ಯಾವಾಗ್ಲೋ, ಅದೆಷ್ಟ್ ಇದೆ ಅಷ್ಟೇ ಚಿಲ್ಲರೆ ಕೊಡೊ ಮಹರಾಯ' ಅಂದ್ರು. ಆ ಹುಡುಗ "ಇಲ್ಲ ಸರ್ ಚಿಲ್ಲರೆ ಇಲ್ಲ' ಅಂದ. 'ಸರಿ ಇನ್ನೊಂದು ಮಜ್ಜಿಗೆ ಬರುತ್ತೆ ಅಲ್ವ ಅದ್ನೆ ಕೊಟ್ಬಿಡು' ಅಂತ ಒಂದು ಮಜ್ಜಿಗೆ ತಗೊಂಡ್ರು. ನಾನೂ ಬೈತಾ ಬಂದೆ. 'ಕೆಲಸ ಇಲ್ಲ ನಿನಗೆ, ಮನೇಲೂ ಮೊಸರು ಇತ್ತು , ಜೋರಾಗಿ ಕೇಳಿದ್ರೆ ಚಿಲ್ಲರೆ ಕೊಡ್ತಾ ಇದ್ದ ಯಾರಿಗೋ ಉಪಕಾರ ಮಾಡೋಕೆ ಹೋಗ್ತೀಯ ... etc etc" . 'ಅಯ್ಯೋ ಬಿಡು ತಾಯಿ, ಅದಕ್ಕ್ಯಾಕೆ ಇಷ್ಟ್ ಕೋಪ, ನಾನೇ ಡ್ಯೂಟಿಗೆ ಹೋಗೊ ಮೊದ್ಲು ಕುಡಿದು ಹೋಗ್ತೀನಿ' ಅಂದ್ರು. ಲಾಯಲ್ ವರ್ಲ್ಡ್ ಹತ್ತಿರ ಬಂದ್ವಿ ಸ್ವಲ್ಪ ಸಾಮಾನು ತೆಗೆದುಕೊಳ್ಳೋದಿತ್ತು. ಸರಿ ಗಾಡಿ ನಿಲ್ಸಿ ಹೆಲ್ಮೆಟ್ ಇಟ್ಟು , ಸಾಮಾನು ತೆಗೆದುಕೊಂಡು ಬಂದ್ವಿ. ಯಾವಾಗ್ಲೂ ಇರೋ ಸೆಕ್ಯೂರಿಟಿಯವರು ಹೆಲ್ಮೆಟ್ ಕೊಟ್ರು. 'ಇದ್ಯಾಕ್ ಸರ್ ಈ ಬಿಸ್ಲಾಗೆ ಬರೋಕೋದ್ರಿ ಅಮ್ಮವ್ರನ್ನೂ ಕರ್ಕೊಂಡು ? ಯಾವಾಗ್ಲೂ ಬರಂಗೆ ಸಂಜೆ ಮೇಲೆ ಬಂದಿದ್ರೆ ಆಗ್ತಿತ್ತಲ್ವ " ಅಂದ್ರು. ಮಂಜು 'ಇಲ್ಲ ಕಣಣ್ಣ ಸ್ವಲ್ಪ ಕೆಲ್ಸ ಇತ್ತು, ಹೊರಟು ಬಿಡ್ತಿವಿ ಮನೆಗೆ' ಅಂತ ಗಾಡಿ ಹತ್ತಿರ ಬಂದು ಗಾಡಿಯಲ್ಲಿ ಇದ್ದ ಮಜ್ಜಿಗೆನ ತಗೊಂಡ್ರು .' ಅವ್ರಿಗೆ ಕೊಟ್ಬಿಡ್ತಿನಿ ಸುನಿ' ಅಂದ್ರು.'ಬೇಡ ಮಂಜು, ತಪ್ ತಿಳ್ಕೊಳ್ತಾರೆನೋ' ಅಂದೆ. ಮಂಜು 'ಬಿಸ್ಲು ಕುಡ್ಕೋಳ್ಳಣ್ಣ ' ಅಂತ ಕೊಟ್ಟ ಮಜ್ಜಿಗೆನ ಆ ವ್ಯಕ್ತಿ 'ದಾವ ಆಗ್ಬಿಟ್ಟಿತ್ತು ಸರ್' ಅಂತ ನಗುತ್ತಾ ಕುಡಿದರು. ಮಂಜು ಬಂದು ಗಾಡಿ ತೆಗೆದ ಮೇಲೆ 'ಅಲ್ಲ ಅವ್ರೆನಾದ್ರು ತಗೊಳ್ಳದೆ ತಪ್ಪು ತಿಳ್ಕೊಂಡಿದ್ರೆ ಏನ್ ಮಾಡ್ತಿದ್ದೆ ಮಾರಾಯ' ಅಂದೆ . 'ಎಲ್ಲರೂ ಒಂದೇ ತರ ಇರೋದಿಲ್ಲ ಕಣಮ್ಮ. ಅವರಿಗೆ ಬದುಕು ನಡಿಬೇಕು ಅಷ್ಟೇ. ಅಮೇಲು ಏನಾದ್ರೂ ಅಂದಿದ್ರೆ ಆ ಮಗನ ಮುಂದೆ ನಾನೇ ಕುಡಿದು ಬರ್ತಾ ಇದ್ದೆ ಅಷ್ಟೇ . ದಾಹ ನನಗೂ ಅದೇ ಅವನಿಗೂ ಅದೇ' ಅಂದು ಸ್ವಲ್ಪ ಸುಮ್ಮನಿದ್ದು ಮತ್ತೆ 'ಹಂಗಂತ ಇನ್ ಮೇಲೆ ಎಲ್ಲಾ ಕಡೆ ಚಿಲ್ಲರೆ ಬೇಡ ಅಂತ ಹಿಂಗ್ ಮಾಡ್ಬಿಟ್ಟೀಯ ನಮಗಿಬ್ಬರಿಗೂ ಬರೋದು ತಿಂಗಳಿಗೆ ಒಂದ್ ಸಲ ಮಾತ್ರ ಸಂಬಳ' ಅಂತ ರೇಗಿಸಿದ ಪುಣ್ಯಾತ್ಮ... ಅದೇ ಹುಸಿಕೋಪದ ನಗೆ ತರಿಸಿದ .... ಪುಟ್ಟ ಪುಟ್ಟ ವಿಷಯ ಆದರೆ ಬದುಕಿನ ಅಗಾಧ ಪಾಠ. ... and I have learn a lot from him....:)))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...