Wednesday 2 March 2016

ಪುಸ್ತಕ ಮುಚ್ಚಿಟ್ಟು ಬರಬಾರದೆ ಎಂದ ಆವ.....
ಬರೆದು ಮುಗಿದ ಕೊಡಲೇ ಬಂದು ಬಿಡುವೆ
ಸ್ವಲ್ಪ ಕಾಯಬಾರದೆ ಎಂದಳು ...
ಕಾಯುವ ಕೆಲಸ ಅವನಿಗೂ ಬೇಸರವಂತೆ....
ಕಾಯದೆ ಇದ್ದರೂ ಕೆಲವರ ಕರೆದೊಯ್ಯುವ ..
ಕೆಲವರು ಕಾದು ಕುಳಿತಿದ್ದರೂ ಬರದೆ ಸತಾಯಿಸುವವ ಆವ
ನಾ ಅವನಿಗೆ ಹೆದರಲಾರೆ ಎಂದಳು ಅವಳು.....
ಪದೇ ಪದೇ ಹೊತ್ತಿಗೆ ಮುಚ್ಚಲು ಕರೆ ನೀಡುವವ ..
ಬರವಣಿಗೆ ಮುಗಿಯದೆ ಹೊತ್ತಿಗೆ ಮುಚ್ಚಲಾರಳಿವಳು ಎಂದರಿತು
ಮತ್ತೆ ಗಡುವು ನೀಡಿ ಹೋಗುತ್ತಾನೆ....
ಅವಳು ಮತ್ತೆ ಬರೆಯ ತೊಡಗುತ್ತಾಳೆ
ನಗುತ್ತಾ , ನಗಿಸುತ್ತಾ.........:)))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...