Sunday 6 March 2016

ಒಂದೆರಡು ಕವಿತೆಗಳು

ಕವಿತೆಯಾಗುವ
ಬಯಕೆಯಿತ್ತು ಗೆಳತಿ ....
ಕಥೆಯಾಗುವ ಆಸೆಯಿರಲಿಲ್ಲ ...
ಎಂದ ಅವಳ ಕಂಗಳಲ್ಲಿ
ಕವಿತೆ ಕರಗಿ ಕಥೆ ಮಡುಗಟ್ಟಿತ್ತು ....


ಪ್ರೀತಿ ಸಿಗದೆಂದು ಅರಿತ ಮೇಲು
ಪ್ರೀತಿಸುವುದು
ರಾಧೆಯಾದಂತೆ ಅಲ್ಲವೇ ನಲ್ಲ
ಮನದ ನೋವಿಗೆ ಮುಸುಕೆಳೆದು
ಮೊಗದಲ್ಲಿ ನಲಿವ ಅರಳಿಸುವ
ಕಲೆ ಬಲ್ಲವಳವಳು
ನೀನೆ ಅವಳಿಗೆಲ್ಲ....:


ಶಿಶಿರದಲ್ಲಿ ಎಲೆಗಳ ಉದುರಿಸಿ
ವಿರಹಿಯಂತೆ ನಿಂತಿದ್ದ
ಮನೆಯ ಮುಂದಿನ ಹೊಂಗೆ
ಈಗ
ಹಸಿರುಟ್ಟು
ಅಣಿಯಾಗುತ್ತಿದ್ದಾಳೆ
ಅಭಿಸಾರಿಕೆಯಂತೆ ...............
ವಸಂತನೆಂಬ ಇನಿಯನ
ಆಗಮನಕೆ ....

ಮೊನ್ನೆ ಮೊನ್ನೆ ನೆಟ್ಟ
ಪುಟ್ಟ ಬೀಜದ ಬಸಿರಿನಿಂದ
ಇಂದಾಗಲೇ ಮೊಳಕೆಯೊಡೆದ ಹಸಿರು....
ಅಷ್ಟು ಪುಟ್ಟ ಬೀಜದ ಒಡಲೊಳಗೆ
ಆ ಬೃಹತ್ ವೃಕ್ಷದ ಉಸಿರು
ಅಡಗಿಸಿದ ನಿನ್ನ ರಹಸ್ಯವನ್ನೊಮ್ಮೆ
ಹೇಳಿ ಬಿಡೇ ಪ್ರಕೃತಿ.....!!

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...