Wednesday 2 March 2016

ಅಂದು ಸಣ್ಣವಳಿದ್ದಾಗ 
ಕಾಲಿಗೆ ಚುಚ್ಚಿದ್ದ ಸಣ್ಣ ಮುಳ್ಳ ತೆಗೆಯಲು 
ಅಮ್ಮನ ಸೆರಗಿನೊಳಗೆ ಕೈ ಹಾಕಿ
ಸರದಲ್ಲಿ ಚುಚ್ಚಿದ್ದ ಪಿನ್ನು ಹುಡುಕಿದರೆ
ಮಗಳ ಮುದ್ದು ಕಾಲು ನೋಯುವುದೆಂದು 
ಕಣ್ಣ ಹನಿ ಬೀಳುವ ಮೊದಲೇ
ಅವಳ ಮನವ ಎತ್ತಲೋ ತಿರುಗಿಸಿ
ಕಾಲಿನ ಮುಳ್ಳು ತೆಗೆಯುತ್ತಿದಳು ಅಮ್ಮ ..
ಈಗಲೂ ಹಾಗೆ .....
ಮನೆಗೆ ಹೋದ ಮಗಳ
ಕಣ್ಣ ಹನಿ ಬೀಳುವ ಮೊದಲೇ
ಅವಳ ಮನವ ಎತ್ತಲೋ ತಿರುಗಿಸಿ
ಮನದ ಮುಳ್ಳು ತೆಗೆಯುತ್ತಾಳೆ ಅಮ್ಮ
ಅಮ್ಮನ ಸೆರಗಲ್ಲಿ ,ಸರದಲ್ಲಿ
ಈಗಲೂ ಪಿನ್ನುಗಳು ಸಿಗುತ್ತವೆ
ಮುಳ್ಳು ತೆಗೆವ ಪಿನ್ನು .....
ಅಮ್ಮ ಹಾಗೆ ಇದ್ದಾಳೆ ...
ಈಗಲೂ....ಹಾಗೆಯೇ ......

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...