Wednesday 2 March 2016

ಒಂದೂರು. ಅಲ್ಲಿ ಒಬ್ಬ ರಾಜ. ಅವನು ಪ್ರೀತಿಯಿಂದ ಒಂದು ಗಿಡುಗ ಹಕ್ಕಿಯ ಸಾಕಿರ್ತಾನೆ . ತುಂಬಾ ಪ್ರೀತಿಸ್ತಾ ಇರ್ತಾನೆ. ಅದೂ ಕೂಡ ಇವನನ್ನ ಅಷ್ಟೇ ಪ್ರೀತಿಸ್ತಾ ಇರ್ತದೆ. ಒಂದು ದಿನ ರಾಜ ಬೇಟೆಗೆ ಹೋಗ್ತಾನೆ. ಎಂದಿನ ಅದೇ ಕಾಡು ಹಾದಿ. ಒಂದಷ್ಟು ದೂರ ಹೋದ ಮೇಲೆ ಎಲ್ಲಾ ಕಥೆಗಳಲ್ಲಿ ಆಗುವಂತೆ ರಾಜ ಹಾದಿ ತಪ್ಪಿ ಎಲ್ಲರಿಂದ ಬೇರೆ ಆಗ್ತಾನೆ. ಹಕ್ಕಿ ಮಾತ್ರ ಅವನೊಟ್ಟಿಗೆ ಉಳಿತದೆ. ಹಾಗೆ ಹಾದಿ ಹುಡುಕ್ತಾ ಹುಡುಕ್ತಾ ರಾಜನಿಗೆ ದಣಿವಾಗಿ ಬಾಯಾರುತ್ತಾನೆ. ಪ್ರೀತಿಯ ಹಕ್ಕಿಗೆ ಹೇಳ್ತಾನೆ 'ಎಲ್ಲಾದರು ನೀರು ಇದ್ಯಾ ನೋಡು ಇಲ್ಲಾ ಅಂದ್ರೆ ಈ ಬಾಯಾರಿಕೆಯಿಂದ ನಾ ಸತ್ ಹೋಗ್ತೀನಿ". ಸರಿ ಹಕ್ಕಿ ನೀರು ಹುಡುಕೋದಕೆ ಹಾರುತ್ತೆ. ರಾಜ ಹಾಗೆ ಬರ್ತಾ ಇರುವಾಗ ಒಂದೆಡೆ ಬಂಡೆಯ ಸಂಧಿಯಿಂದ ಹನಿ ನೀರು ತೊಟ್ತಾ ಇರುತ್ತೆ. ರಾಜ ಅಲ್ಲೇ ಇದ್ದ ಒಂದು ಎಲೆಯನ್ನ ಒಂದು ಸಣ್ಣ ಬಟ್ಟಲಂತೆ ಮಾಡಿ ಆ ನೀರನ್ನ ಹಿಡಿಯುತ್ತಾನೆ. ಒಂದಷ್ಟು ಸಂಗ್ರಹಿಸಿ ಇನ್ನೇನು ಕುಡಿಯಬೇಕೆಂದಾಗ ಅವನ ಪಕ್ಷಿಮಿತ್ರ ಆ ಎಲೆಯನ್ನ ಬಡಿದು ಬೀಳಿಸುತ್ತಾನೆ!! "ನಾ ಸಾಯೊ ಅಷ್ಟು ಬಾಯರಿರುವಾಗ ನಿನ್ನದೇನು ಹುಡುಗಾಟ' ರಾಜ ಬೈತಾನೆ. ಮತ್ತೆರಡು ಬಾರಿ ಹಿಡಿದು ಕುಡಿಯಲು ಹೋದಾಗ ಮತ್ತೆ ಇದೇ ಆದಾಗ ರಾಜ ಬಾಯರಿದ್ದ ಸಂಕಟದ ಜೊತೆಗೆ ಹಕ್ಕಿಯ ವರ್ತನೆಗೆ ಕೋಪಗೊಂಡು ಖಡ್ಗ ಬೀಸುತ್ತಾನೆ. ಹಕ್ಕಿ ಗಾಯಗೊಂಡು ಕೆಳಗೆ ಬೀಳುತ್ತದೆ!! ಹಕ್ಕಿ ಬಿದ್ದಾಗ ಅದು ಬೀರಿದ ನೋಟಕ್ಕೆ ನೊಂದ ರಾಜ ಇದ್ಯಾಕೆ ಹೀಗೆ ಅಡ್ತು, ತಾಳು ನೀರಿನ ಒರತೆ ಯಾವುದು ನೋಡೋಣ' ಅಂತ ಬಂಡೆಯನ್ನೇರಿ ಹೋಗ್ತಾನೆ. ಅಲ್ಲೊಂದು ವಿಷಸರ್ಪ ವಿಷವನ್ನ ಕಕ್ಕುತ್ತಾ ಕುಳಿತಿರುತ್ತದೆ !!! ರಾಜ ತನ್ನ ನಡವಳಿಕೆ ತಾನೇ ನೊಂದು ನಾಚಿ ಹಕ್ಕಿಯ ಬಳಿ ಕ್ಷಮೆ ಯಾಚಿಸುತ್ತಾನೆ ... ಇದು ಕಥೆ..ಓದಿದ ಮೇಲೆ ಹಂಚಿಕೊಳ್ಳಬೇಕು ಅನಿಸ್ತು
ಕೆಲವೊಮ್ಮೆ ಅದೆಷ್ಟೇ ತಿಳುವಳಿಕೆ ಇದ್ರೂ, ಅದೆಷ್ಟೇ ದೊಡ್ದವರಾದ್ರು , ಸಣ್ಣ ಸಣ್ಣ ಮಾತುಗನ್ನ ವಿಷಯಗಳನ್ನ ಅರ್ಥ ಮಾಡಿಕೊಳ್ಳೋಕೆ ಸೋತು ಹೋಗ್ತೀವಿ .. ದುಡುಕಿ ಮತ್ತೆ ಹಿಂದಕ್ಕೆ ಬರಲಾರದ ಹಾದಿ ತಲುಪಿಬಿಡ್ತೀವಿ ಅಥವ ಹಿಂದಕ್ಕೆ ಪಡೆಯಲಾಗದ ಗೆಳೆತನವನ್ನ ಕಳೆದುಕೊಂಡು ಬಿಡ್ತೀವಿ ಅಲ್ವೇ ...

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...