Wednesday 2 March 2016

ಹೀಗೊಂದು ಕಥೆ.... 
ಒಂದು ರೈಲಿನ ಫಸ್ಟ್ ಕ್ಲಾಸ್ ಬೋಗಿಯಲ್ಲಿ ಒಬ್ಬ ಶ್ರೀಮಂತ ತನ್ನ ಹೆಂಡತಿ ಮಗುವಿನ ಜೊತೆ ಹೋಗ್ತಾ ಇದ್ದ. ಜೊತೆಗೆ ಒಂದಿಬ್ಬರು ಆಳುಗಳು ಕೂಡ. ಸಿರಿವಂತನಾದರೂ ಸಂಯಮಿ, ವಿಚಾರವಂತ. ತನ್ನ ಸಹಪ್ರಯಾಣಿಕರ ಜೊತೆ ಹೊಂದಿಕೊಂಡು ಪ್ರಯಾಣ ಮುಂದುವರೆಸಿದ್ದ. ಸುಮಾರು ನಡು ರಾತ್ರಿ, ರೈಲು ಕಾಡುಕಣಿವೆಗಳ ನಡುವೆ ಸಾಗ್ತಾ ಇತ್ತು. ಮಗು ಎಚ್ಚರಗೊಂಡಿತು. ಶ್ರೀಮಂತನ ಹೆಂಡತಿ ಮಗುವನ್ನ ಕಿಟಕಿಯ ಬಳಿ ಕುಳಿತು ರಮಿಸುತ್ತಾ ಬಾಟಲಿಯಲ್ಲಿ ಹಾಲು ಕುಡಿಸ ತೊಡಗಿದಳು. ಕೈ ಕಾಲು ಆಡಿಸುತ್ತಾ ಹಾಲು ಕುಡಿಯುತ್ತಿದ್ದ ಮಗುವಿನ ಕೈ ತಗುಲಿ ಬಾಟಲಿ ಕಿಟಕಿಯಿಂದ ಹೊರಗೆ ಬಿದ್ಹೊಯ್ತು !! ಮಗು ಅಳೋಕೆ ಶುರುಮಾಡ್ತು!! ಶ್ರೀಮಂತ ತಕ್ಷಣ ಚೈನ್ ಎಳೆದ. ಗಾಡಿ ನಿಲ್ತು. ಅವನು ಅವನ ಆಳುಗಳು ಹಳಿಗಳ ಬಳಿ ಹಿಂದಕ್ಕೆ ಹೋಗಿ ಬಾಟಲಿ ಹುಡುಕಿ ತಂದ್ರು. ತೊಳೆದು ಬಾಟಲಿಯಲ್ಲಿ ಮಗುವಿಗೆ ಹಾಲು ಹಾಕಿ ಕೊಟ್ರು. ಅಷ್ಟರಲ್ಲಿ ಅಲ್ಲಿಗೆ ಬಂದ ರೈಲು ಅಧಿಕಾರಿ ಅನಗತ್ಯವಾಗಿ ಸಣ್ಣ ವಿಷಯಕ್ಕೆ ತೊಂದರೆ ಕೊಟ್ಟ ಎಂಬ ತಪ್ಪಿಗೆ ಒಂದಷ್ಟು ಫೈನ್ ಹಾಕಿ ದುಡ್ಡು ವಸೂಲಿ ಮಾಡಿ ಹೋದರು. ಸಹಪ್ರಯಾಣಿಕನೊಬ್ಬ ಹೇಳ್ದ 'ದುಡ್ಡಿರೋರೆ ಹೀಗೆ, ಅರ್ಥವೇ ಆಗೋದಿಲ್ಲ ಹಣದ ಮದ..ಒಂದೈವತ್ತು ರೂಪಾಯಿ ಕೂಡ ಬಾಳದ ಆ ಬಾಟ್ಲಿಗೆ ಸುಮ್ಸುಮ್ನೆ ಅಷ್ಟೊಂದೆಲ್ಲ ದಂಡ ಕಟ್ತಾರೆ. ಹೋದರೆ ಹೋಯ್ತು ಅಂತ ಸುಮ್ಮನಿದಿದ್ರೆ ಆಗ್ತಾ ಇತ್ತು' ಅಂದ. ಆ ಸಿರಿವಂತ ಒಂದು ಕಟ್ಟು ಹಣ ತೆಗೆದ ಆ ಪ್ರಯಾಣಿಕನ ಮುಂದೆ ಹಿಡಿದು 'ಸರ್, ಇದರಲ್ಲಿ ೫೦೦೦ ಇದೆ. ಹೋಗಿ ಒಂದು nipple ತಂದ್ಬಿಡಿ ಮತ್ತೆ' ಅಂದ. 'ಹಣ ಎಷ್ಟು ಹೋಯ್ತು, ಎಷ್ಟು ಬಂತು ಅನ್ನೋದು ಮುಖ್ಯವಲ್ಲ, ಆ ಹೊತ್ತಿನ ಉಪಯೋಗ ಅಷ್ಟೇ ಮುಖ್ಯ! ನನ್ನ ಮಗುವಿಗೆ ಈ ಸರಿ ರಾತ್ರಿಯಲ್ಲಿ ಈ ಕಾಡಿನ ನಡುವೆ nippleಸಿಗೋದು ಎಷ್ಟು ದುರ್ಲಭ ಅಲ್ವೇ . ಅದಕ್ಕೆ ಹಾಗೆ ಮಾಡಿದೆ .. ಹಣದ ಮದ ಅಲ್ಲ ' ಅಂದ ...
ಮೊನ್ನೆ ಅನಗತ್ಯ ಅಗತ್ಯಗಳ ವಿಷಯದ ಬಗ್ಗೆ ನಾನು ಮಂಜು ಮಾತಾಡ್ತಾ ಇದ್ದಾಗ ಮಂಜು ಹೇಳಿದ ಕಥೆ :)))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...