Friday 11 March 2016

ಮೊನ್ನೆ ಹೋದ ಶನಿವಾರ ದೇವಸ್ಥಾನಕ್ಕೆ ಹೋಗಿದ್ದೆ. ೯ನೆ ತಾರೀಕು ಗ್ರಹಣ ಅಂತ ಬರೆದಿದ್ರು. ಒಂದಷ್ಟು ರಾಶಿಯ ಹೆಸರು ಹಾಕಿ ದೋಷ, etc, etc ಬರೆದು ದೋಷ ಪರಿಹಾರಕ್ಕೆ ಶಾಂತಿ ಪೂಜೆ,ಇತ್ಯಾದಿ ಇತ್ಯಾದಿ ಬರೆದಿದ್ದರು. ದೇವರು ಅನ್ನೋ ಶಕ್ತಿಯನ್ನ ತುಂಬಾನೇ ನಂಬುವ ನನಗೆ ಈ ಗ್ರಹಣ ದೋಷ-ಪರಿಹಾರ ಅಂತದರಲ್ಲಿ ನಂಬಿಕೆ ಇಲ್ಲ. ಅದೊಂದು ಪ್ರಾಕೃತಿಕ ವಿದ್ಯಾಮಾನ ಅಂತ ಅರಿವಿದೆ. ದಿನಾ ದೇವರಿಗೆ ಹೂ ಹಾಕಿ ಪೂಜೆ ಮಾಡುವುದು, ಮನಸ್ಸಾದಾಗ ದೇವಸ್ಥಾನಗಳಿಗೆ ಹೋಗೋದು, ನನ್ನ ಇಷ್ಟದ ಕೆಲಸಗಳು. ಅದು ನನ್ನ ಖುಷಿಗಾಗಿ. ಅದೇನೋ ಒಂದ್ ತರ ಸೆಕ್ಯೂರ್ ಅನಿಸುತ್ತದೆ. ಮನಸ್ಸಿಗೆ ಶಾಂತಿ ಅನಿಸುತ್ತದೆ. 
ಆದರೂ ದೇವಸ್ಥಾನದಲ್ಲಿ ಕುಳಿತಾಗ ಕಣ್ಣಿಗೆ ಕಾಣುವ ಈ ಗ್ರಹಣ ದೋಷ-ಪರಿಹಾರ ಇತ್ಯಾದಿಗಳ ಪೋಸ್ಟರ್ರಲ್ಲಿ ನನ್ನ ರಾಶಿ ಕಂಡರೆ ಏನೂ ಅನಿಸದ ನನಗೆ... ಅಪ್ಪಿತಪ್ಪಿ ಮಂಜುವಿನ ಅಥವಾ ಮಕ್ಕಳ ರಾಶಿ ಅಲ್ಲಿ ಕಂಡರೆ ಅದ್ಯಾಕೋ ಒಂದ್ ತರ ತಲ್ಲಣ ಅನಿಸಿಬಿಡುತ್ತದೆ!! ಅವರ ಹೆಸರಲ್ಲಿ ಒಂದಷ್ಟು ಕಾಣಿಕೆ ಹಾಕಿ ಒಳ್ಳೆಯದು ಮಾಡಪ್ಪ ಅಂತ ಕೇಳಿ, ಒಂದು ಅರ್ಚನೆಯನ್ನೂ ಮಾಡಿಸಿ ಬಿಡುತ್ತೇನೆ !!! ಹಾಗೆ ಮಾಡಿದರೆ ಏನೋ ಒಂದ್ ತರ ಸೆಕ್ಯೂರ್ ಅನಿಸೋ ಹಾಗೆ!!
ಮನಸ್ಸಿನ ಈ ವೈಪರಿತ್ಯದ ಬಗ್ಗೆ ನನಗೆ ಅಚ್ಚರಿ ! ನನ್ನ ರಾಶಿಯ ದೋಷದ ಬಗ್ಗೆ ಇರದ ಕಾಳಜಿ ಅಥವ ಭಯ ಅದ್ಯಾಕೆ or rather ಅದ್ಹೇಗೆ ನಾವು ಪ್ರೀತಿಸುವವರ ರಾಶಿಯ ದೋಷದ ಬಗ್ಗೆ ಉಕ್ಕಿ ಬರುತ್ತದೆ ? ಹಾಗಾದರೆ ನನ್ನದು ಮೂಢನಂಬಿಕೆಯಾ ? ಅಥವ ನನಗೆ ಏನೂ ಆಗದು ಅನ್ನೋ ವಿಶ್ವಾಸವೋ? ಅಥವ ನನಗೆ ಏನಾದ್ರೂ ಪರವಾಗಿಲ್ಲ ಅನ್ನೋ taken for granted ಫೀಲಾ?? ಅಥವ ಏನೇ ಅದರೂ ನಾನೇ ನೋಡಬೇಕು, ನೋಡಿಕೊಳ್ಳಬೇಕು ಅನ್ನೋ ಸ್ವಾರ್ಥವೋ? ಅಥವಾ ಅವರಿಗೆ ಏನಾದ್ರೂ ಆದ್ರೆ ನೋಡೋ ಶಕ್ತಿ ಇಲ್ಲ ಅನ್ನೋ ನನ್ನ ದೌರ್ಬಲ್ಯವೋ !? ಗೊತ್ತಿಲ್ಲ ... ಆದರು ಒಂದಷ್ಟು ಕಾಣಿಕೆ ಹಾಕಿ ಒಳ್ಳೆಯದು ಮಾಡಪ್ಪ ಅಂತೀನಿ... ಆಮೇಲೆ ಮನಸ್ಸು ಒಂದ್ ತರ ನೀಲಿ ಬಾನಿನಂತೆ.. ಏನೂ ಆಗೋದೇ ಇಲ್ಲ ಅನ್ನುವಂತೆ . ಅವರು safe ಅನಿಸೋ ಹಾಗೆ!
ಓ ಮನಸ್ಸೇ ನೀನೆಷ್ಟು ವಿಚಿತ್ರ !!

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...