Tuesday 14 February 2017

ಆ ಮರದ ಕೆಳಗಿನ 
ಆ ದೇವರ ನೋಡಿದೆಯ ಗೆಳೆಯ 
ಅದ್ಯಾರ ಮನೆಯಲ್ಲಿ 
ಅದೆಷ್ಟು ದಿನ 
ಅದೆಷ್ಟು ವಿಜೃಂಭಣೆಯಿಂದ 
ಪೂಜೆಗೊಳಗಾಗಿದ್ದನೋ
ಅದೆಷ್ಟು ವರ ನೀಡಿದ್ದನೋ
ಅದೆಷ್ಟು ನೈವೇದ್ಯ ತಿಂದಿದ್ದನೋ ಏನೋ
ಭಿನ್ನಗೊಂಡಿದ್ದಾನೆ ಎಂದು
ತಂದು ಇಲ್ಲಿ ಬಿಟ್ಟಿದ್ದಾರೆ ನೋಡು
ನಾವು ಜೋಪಾನವಾಗಿರಬೇಕೆನಿಸುತ್ತಿದೆ ಗೆಳೆಯ
ಭಿನ್ನವಾಗಿ ಬಿಟ್ರೆ
ನಮ್ಮ ಗತಿಯೂ ದೇವರದೇ ಗತಿ ಅಲ್ವೇ :)))))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...