Wednesday 1 February 2017

ಅಮ್ಮ ಮಗ ಜಗಳ ಆಡಿದರು .. ತಮ್ಮದಲ್ಲದ ವಿಷಯಕ್ಕೆ, ಸಲ್ಲದ ಪ್ರತಿಷ್ಠೆಗೆ ಬಿದ್ದು ಜಗಳ ಆಡಿದರು .... ಮಾತು ನಿಂತು ಹೋಗಿತ್ತು .. ಸರಿ ಗೊತ್ತೇ ಇದೆಯಲ್ಲ ತಪ್ಪು ಯಾರದೇ ಇದ್ದರೂ ಅದು ಬೀಳೋದು ಸೊಸೆಯ ಮೇಲೆಯೇ.. ಸೊಸೆಯ ಜೊತೆ ಕೂಡ ಮಾತು ನಿಂತು ಹೋಯ್ತು .. ಅಮ್ಮ ಮಗನ ಮನೆಗೆ ಬರೋದು ನಿಂತು ಹೋಯ್ತು .. ವಾರಕ್ಕೆ ಒಂದೆರಡು ಬಾರಿ ಅಮ್ಮನನ್ನ ನೋಡಿ ಬರುತ್ತಿದ್ದ ಮಗ ಕೂಡ ತನ್ನದಲ್ಲದ ತಪ್ಪಿಗೆ ತಾನೇಕೆ ಬಗ್ಗಲಿ ಎಂದು ಹೋಗೋದೇ ಬಿಟ್ಟ ...ಸುಮ್ಮನೆ ಬೇಡದ ವಿರಸ ಬೇಡ ಎಂದ ಹೆಂಡತಿಗೆ ತಲೆ ಕೆಡಿಸಿಕೊಳ್ಳದೆ ಇರಲು ಸಲಹೆ ನೀಡಿದ... !! ಹಿರಿಯರ ಪ್ರತಿಷ್ಠೆಗೆ ನಲುಗಿದ್ದು ಪುಟ್ಟ ಮಕ್ಕಳ ಮನಸ್ಸುಗಳು ...ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಸಿಕ್ಕಾಗ ಮಾತಾಡುವುದು ಬಿಟ್ಟರೆ ಶಾಲೆ, ಆಟ ಪಾಠ ಇಷ್ಟೇ ಬದುಕು ಎಂಬಂತೆ ಆಗಿಹೋಯ್ತು ..... ಹಬ್ಬಕ್ಕೆ ಒಂದಾಗಲಿಲ್ಲ ... ನೆಂಟರ ಸಾವಿಗೆ ಹೋದರೂ ಅಮ್ಮ ಮಗ ಮಾತಾಡಲಿಲ್ಲ .... ಇಬ್ಬರ ಮನದಲ್ಲೂ ನೋವಿನ ಗೆರೆಗಳು .... ಮಾತನಾಡಲು ಹುಂಬ ಪ್ರತಿಷ್ಠೆ .....ಮಾತಾಡಲು ವೇದಿಕೆಗಾಗಿ ಕಾದೇ ಕಾದರು ....ಕಡೆಗೊಮ್ಮೆ ಮೌನ ಮುರಿದು ಮಾತಾಡಿದರು .... ಅಮ್ಮ ಮಗ ಒಂದಾದರು ..ಅಮ್ಮ ಅತ್ತಳು, ನಕ್ಕಳು , ಮಗ ಅಮ್ಮನನ್ನ ತಬ್ಬಿ ಸಂತೈಸಿದ ... ಮಕ್ಕಳು ನಕ್ಕರು ... ಎಲ್ಲರಿಗೂ ಖುಷಿ .............'ಮನೆಗೆ ಬಾಮ ' ಸೊಸೆಯನ್ನ ಕರೆದಳು ಅತ್ತೆ .... ಸೊಸೆ ಮುಖ ನೋಡಿದಳು .....ಆ ನೋಟದ ನೋವಿಗೆ ಆ ನೋಟದ ಪ್ರಶ್ನೆಗಳಿಗೆ ಅತ್ತೆ ಉತ್ತರಿಸದಾದಳು .... 'ಒಂದೆರಡು ಮಾತಿದೆ ಆ ಮಾತಿಗೆ ಉತ್ತರ ಸಿಕ್ಕರೆ ನಾ ಮನೆಗೆ ಬರುವೆ ಅಮ್ಮ .." ಅಂದ್ಲು .... ಗಂಡನ ಮೊಗದಲ್ಲಿ ಈಗ ಇದೆಲ್ಲ ಬೇಕಾ ಎಂಬ ಪ್ರಶ್ನೆ ... ಮಕ್ಕಳ ಮೊಗದಲ್ಲಿ ಅಮ್ಮ ಏನ್ ಹೇಳ್ತಾಳೋ ಅನ್ನೋ ಭಯ ... ವಾರಗಿತ್ತಿಯ ಮಕ್ಕಳ ಮೊಗದಲ್ಲಿ ಮತ್ತೆ ದೊಡ್ಡಮ್ಮ ಅಕ್ಕ ಅಣ್ಣನನ್ನ ಕರೆದುಕೊಂಡು ಹೋಗಿಬಿಡ್ತಾಳೇನೋ ಅನ್ನೋ ನೋವು .......... 'ಅಮ್ಮ ನೀವು ಅಮ್ಮ ಮಗ ಅಲ್ಲದೆ , ನಾನು ನೀವು ಜಗಳ ಆಡಿದ್ದರೆ ; ನಿಮ್ಮ ಮಗನ ಜೊತೆ ಮಾತಾಡೋದು ಬಿಡ್ತಾ ಇದ್ರಾ ?? .....ಅವರದಲ್ಲದ ತಪ್ಪಿಗೆ ನನ್ನ ಮಕ್ಕಳು ನೋವು ಅನುಭವಿಸಿದ್ದು ಸರಿನಾ ??? ... ಈಗ ಕೂಡ ನೀವು ನಿಮ್ಮ ಮಗನಿಗಾಗಿ ಕರಿತಾ ಇದ್ದೀರಾ ಹೊರತೂ ................ " ಅನ್ನೋ ಪ್ರಶ್ನೆಗಳೆಲ್ಲಾ ಮನದ ಮೂಲೆಯಲ್ಲೇ ಹುದುಗಿಸಿ ಬಿಟ್ಟಳು .......... ಮತ್ತೊಮ್ಮೆ ಭೂಮಿಯಾಗಿ ಬಿಟ್ಟಳು ............ಅಭಿಮಾನ!!!....... ನಕ್ಕು ಬಿಟ್ಟಳು ...ನಗುವಿನ ಜೊತೆ ಬಂದ ಕಣ್ಣ ಹನಿ ಯಾರಿಗೂ ಕಾಣಲೇ ಇಲ್ಲ ............... !!

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...