Tuesday 25 October 2016

ನೆನ್ನೆ ಕೃತಿ ಕಾಲೇಜ್ ಅಲ್ಲಿ ಪೇರೆಂಟ್ಸ್ ಮೀಟಿಂಗ್ ಇತ್ತು. ಹೊಸದಾಗಿ ಕಾಲೇಜ್ ಮೆಟ್ಟಲು ಹತ್ತಿದ್ದಕ್ಕೊ, ಇಲ್ಲ ಆಟಆಟ ಅಂತ ಥ್ರೋಬಾಲ್ ಅಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಸಂಭ್ರಮಕ್ಕೋ, ಇಲ್ಲಾ ಮೊಬೈಲ್ ಅಲ್ಲಿ ಸಿನಿಮಾ ನೋಡೋ ಹುಚ್ಚಿಗೋ, ಅಂತೂ ಸ್ವಲ್ಪ ಕಡಿಮೆ ಅಂಕಗಳು ಬಂದಿದ್ವು. ಸರಿ ಒಂದಷ್ಟು ಬುದ್ದಿ ಹೇಳಿದೆ. 
ಸಂಜೆ ಕಾರ್ತಿ ಬಂದ .ಅವನಿಗೂ ಅವಳ ಅಂಕಗಳನ್ನ ಹೇಳಿದ್ಳು. ಅವ್ನು ಅವನ ಎಂದಿನ ಧಾಟಿಯಲ್ಲಿ 'ಬಿಡ್ ಕೃತಿ ಟೆನ್ಶನ್ ಮಾಡ್ಕೋಬೇಡ , ನಿನಗೆ ಇಷ್ಟೇ ಸಾಕು ಅಂತ ಅನಿಸಿದರೆ ಫೈನ್, ನಿನಗೆ ದೊಡ್ಡ ಏಮ್ ಇದ್ರೆ ಚೆನ್ನಾಗಿ ಓದು, ಆಟ ಇಷ್ಟ ಇದ್ರೆ ಕಂಟಿನ್ಯೂ ಮಾಡು ಅಷ್ಟೇ , ...ಇತ್ಯಾದಿ ' ಕಥೆ ಓದಿದ. ಅವನ ಮೇಲು ಸ್ವಲ್ಪ ರೇಗಿದೆ 'ಓದು ಅನ್ನೋದು ಬಿಟ್ಟು ಬರಿ ಸಿನಿಮ ಡೈಲಾಗ್ ಹೇಳು, ನಿನ್ ತರ ಅವ್ಲೂ ಮಂಡ್ಯಕ್ಕೆ ಅಪ್ ಅಂಡ್ ಡೌನ್ ಮಾಡ್ಬೇಕಾಗುತ್ತೆ ಕಡಿಮೆ ತೆಗೆದ್ರೆ ' ಅಂದೆ . 'ಮಾಡ್ಲಿ ಬಿಡು ಸ್ವಂತ ಬದುಕೋಕೆ ಕಲಿತಾಳೇ' ಅಂದ. 'ನಿಂದು ಬರೇ ವಿತಂಡ ವಾದ 'ಅಂತ ಬೈದು ಸುಮ್ಮನಾದೆ.
ಮಂಜು ಬಂದ ಮೇಲೆ ಕೇಳಿದ್ರು 'ಏನ್ ಮಗ್ಲೆ, ಎಲ್ಲಾ ಔಟ್ ಆಫ್ ಔಟಾ ?' 'ಇಲ್ಲ ಅಪ್ಪ , ಕಮ್ಮಿ ಬಂದಿದೆ ' ಅಂದ್ಳು ಮೆಲ್ಲಗೆ. ಮಂಜು ಇನ್ನು ಮಾತು ಶುರು ಮಾಡೇ ಇಲ್ಲ .. 'ನಾ ಎಲ್ಲಾ ಹೇಳಿದ್ದೀನಿ ಬಿಡಪ್ಪ, ನೀ ಇನ್ನೊಂದ್ ಸಾರಿ ಯಾಕೆ ಹೇಳ್ತೀಯ, ಪಾಪ ಓದ್ತಾಳೆ , ಒಂಚೂರು ಅಡ್ಜಸ್ಟ್ ಆಗೋಕೆ ಟೈಮ್ ಬೇಕು. ನಿಮ್ ಖಾಂದಾನ್ ಅಲ್ಲೇ ಯಾರೂ ತೆಗೆದಿಲ್ಲ ಅಷ್ಟ್ ಮಾರ್ಕ್ಸ್ ತೆಗಿತಾ ಇದ್ದಾಳಲ್ವಾ ಬಿಡು . ನನ್ ತಂಗಿಗೆ ನಾ ಹೇಳ್ಕೊಳ್ತೀನಿ , ನಾ ಓದಿಸ್ತೀನಿ ' ಅಂದ ಕಾರ್ತಿ. ಮಂಜು ಬಿಟ್ಟ ಕಣ್ಣು ಬಿಟ್ಟಂತೆ ಕೂತಿದ್ರು ..
ಈ ಅಣ್ಣತಮ್ಮಂದಿರಿಗೆ ತಾವು ಎಷ್ಟೇ ಕಿತ್ತಾಡಿದ್ರೂ ಬೈದ್ರೂ ತಮ್ಮ ಅಕ್ಕ ತಂಗಿಯರನ್ನ ಯಾರೂ ಬೈಬಾರದು ಅನ್ನೋ ಅಷ್ಟು possessiveness ... ಹಿಂದೆಲ್ಲ ಭಾನುವಾರದ ಸುತ್ತಾಟಕ್ಕೆ ಬಲಮುರಿ ಅಲ್ಲೆಲ್ಲಾ ಹೋದಾಗ ನೀರಲ್ಲಿ ಇಳಿದು ಆಟ ಆಡೋವಾಗ ತಮ್ಮ ಅಥವ ಕಸಿನ್ಸ್ ಅವರ ಶರ್ಟ್ ಬಿಚ್ಚಿಕೊಟ್ಟು ಹಾಕೊಳ್ಳೋಕೆ ಹೇಳ್ತಾ ಇದ್ದದ್ದು ನೆನಪಿಗೆ ಬಂತು !ಕಣ್ಣಲ್ಲಿ ಒಂದು ಹನಿ ನೀರು ಬಿದ್ರೆ ನೋಡೋಕೆ ಹಿಂಸೆ ಪಡ್ತಾ ಇದ್ರು.. .
ಮದ್ವೆ ಆದ ಮೇಲೆ ಅವರದೇ ಸಂಸಾರ ತಾಪತ್ರಯಗಳಲ್ಲಿ ಸಿಲುಕಿ ಅದ್ಯಾಕೋ ಬಹಳಷ್ಟು ಸಾರಿ ಅನಿವಾರ್ಯವಾಗಿ ಅನುದ್ದೇಶಪೂರ್ವಕವಾಗಿ ಈ ಅಣ್ತಮ್ಮ೦ದಿರು ಒಂದಷ್ಟು ದೂರ ಸರಿತಾ ಹೋಗ್ತಾರೆ ... ಆದ್ರೂ ಮನಸ್ಸಿನ ತುಂಬೆಲ್ಲಾ ಇರೋ ಆ ಪ್ರೀತಿ ಮಸುಕಾಗೋದೇ ಇಲ್ಲ ..ಆದ್ರೂ ಕಳೆದುಹೋದ ದಿನಗಳ ಅರಸುವಂತೆ ....
ಒಂದು ಜಾನಪದ ಮಾತಿನಂತೆ 'ಹೊಳೆದಂಡೆಯ ಗರಿಕೆ ಹಂಗ ಬೆಳೆಯಲಿ ತವರು ....... ಅನ್ನೋ ಹಂಗೆ ....
ಮನಸ್ಸು ನೀಲಿನೀಲಿ ...ಆ ಬಾನಿನಂತೆ ...

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...