Tuesday 25 October 2016

ಮಗಳ ಮದುವೆ ಫಿಕ್ಸ್ ಆಗಿತ್ತು . ಮುದ್ದಿನ ಮಗಳ ಮದುವೆ ಅವನಿಗೆ ಖುಷಿಯೇ ಆದರೂ ಅವಳು ತಮ್ಮನ್ನು ಬಿಟ್ಟು 'ಬೇರೆ' ಮನೆಗೆ ಹೋಗಿ ಸೇರುವುದು ಅವನಿಗೆ ನೋವು ತರುವ ವಿಷಯವಾಗಿತ್ತು .. 
ಹಾಗೆ ಮನೆಯ ಮುಂದಿನ ಗಿಡಗಳ ನೋಡುತ್ತಾ ಕುಳಿತ್ತಿದ್ದ ಅವನಿಗೆ ಮಗಳು ಕಾಫಿ ತಂದು ಕೊಟ್ಟಳು. ಕೊಟ್ಟು ಅಪ್ಪನ ಪಕ್ಕ ಹೆಗಲಿಗೆ ತಲೆಯಿಟ್ಟು ಕೂತಳು. ಅಪ್ಪ ತನ್ನ ತಲೆಯ ಅವಳ ತಲೆಗೆ ಒರಗಿಸಿದ. 
'ಖುಷಿಯಾಗಿದ್ದೀಯ ಮಗ ' ಅಂದ.. 'ಹ್ಮ್ , ಅಪ್ಪ ' ಅಂದ್ಲು.
ಒಂದಷ್ಟು ಹೊತ್ತಾದ ಮೇಲೆ 'ಅಪ್ಪ , ಇಲ್ಲಿ ಮುಂದೆ ಇದೆಯಲ್ಲ ಈ ದಾಳಿಂಬೆ ಮರ ಅದನ್ನ ಕಿತ್ತು ಹಿಂದೆ ಹಾಕೋಣವಾ ಅಪ್ಪ ' ಅಂದ್ಲು. 
ಅಪ್ಪ ಸ್ವಲ್ಪ ಚಕಿತನಾದ ' ಮಗ ಅದು ನಾಲ್ಕು ವರ್ಷದ ಗಿಡ ಮಗ. ಇನ್ನೇನು ಹಣ್ಣು ಬಿಡುತ್ತೆ . ಅದನ್ನ ಹಾಗೆ ಸ್ಥಳಾಂತರಿಸಿದರೆ ಹೊಸ ಮಣ್ಣು, ಹೊಸ ಜಾಗಕ್ಕೆ ಹೊಂದಿಕೊಳ್ಳೋಕೆ ತಡವಾಗುತ್ತೆ , ಕೆಲವೊಮ್ಮೆ ಗಿಡ ಹೊರಟು ಹೋಗುತ್ತೆ' ಅಂದ..
ಸುಮ್ಮನಿದ್ದ ಮಗಳು 'ಬರಿ ನಾಲ್ಕು ವರ್ಷದ ಗಿಡ ಸ್ಥಳಾಂತರ ಮಾಡಲು ಹೆದರುತ್ತೀಯಲ್ಲ ಅಪ್ಪ , ೨೨ ವರ್ಷ ನಿನ್ನ ಜೊತೆ ಇದ್ದ ನನ್ನನ್ನು ಹೇಗೆ ಕಳುಹಿಸುತ್ತೀಯಾ " ಅಂದ್ಲು !
ಅಪ್ಪ ಕಣ್ಣ ತುಂಬಾ ನೀರು ತುಂಬಿ ಉತ್ತರಿಸದೆ ಉಳಿದುಬಿಡುತ್ತಾನೆ .....
ಕಥೆ ಓದಿದ ಮೇಲೆ ........ ಏನೋ ಒಂದು ತರ ಮೂಕಭಾವ ... ಮನಸ್ಸು ಒದ್ದೆ ಒದ್ದೆ ....
felt like translating and sharing after reading....

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...