Tuesday 25 October 2016

ರಿಯರೊಬ್ಬರು ಹೇಳಿದ ಪತಿಪತ್ನಿಯರ ನಡುವಿನ ನಂಬಿಕೆಯ ಬಗ್ಗೆ ಗೆಳೆತನದ ವಿಶ್ವಾಸದ ಬಗ್ಗೆ ಹೇಳಿದ ಕಥೆ .. ಹಂಚಿಕೊಳ್ಳಬೇಕು ಅನಿಸ್ತು 
ಒಮ್ಮೆ ಕರ್ಣ ಹಾಗು ದುರ್ಯೋಧನನ ಪತ್ನಿ ಭಾನುಮತಿ ಅವಳ ಅಂತಃಪುರದಲ್ಲಿ ಪಗಡೆ ಆಡ್ತಾ ಇರ್ತಾರೆ . ಭಾನುಮತಿ ಸೋಲ್ತಾ ಇರ್ತಾಳೆ. ಕರ್ಣ ಆಟದಲ್ಲಿ ಮೇಲುಗೈ ಸಾಧಿಸ್ತಾ ಇರ್ತಾನೆ .. ಅಷ್ಟ್ರಲ್ಲಿ ದುರ್ಯೋಧನ ಅಂತಃಪುರಕ್ಕೆ ಬರ್ತಾನೆ. ಗಂಡ ಬಂದನಲ್ಲ ಎಂದು ಭಾನುಮತಿ ಏಳೋಕೆ ಹೋಗ್ತಾಳೆ .. ಬಾಗಿಲಿಗೆ ಬೆನ್ನು ಹಾಕಿ ಕುಳಿತ ಕರ್ಣ ಸೋಲುವ ನೆಪಕ್ಕೆ ಆಟದಿಂದ ಹೊರ ಹೋಗುತ್ತಾ ಇದ್ದಾಳೆ ಇವಳು ಎಂದುಕೊಂಡು ಸ್ವಾಭಾವಿಕವಾಗಿ ಕೈ ಹಿಡಿದು ಎಳೆಯೋಕೆ ಹೋಗ್ತಾನೆ .. ಭಾನುಮತಿಯ ಕೈ ಸಿಗದೇ ಅವಳ ಮುತ್ತಿನ ಹಾರ ಕೈಗೆ ಸಿಕ್ಕಿ ಮುತ್ತುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಹೋಗುತ್ತವೆ .. ಕ್ಷಮೆಕೇಳಲು ಎದ್ದ ಕರ್ಣನಿಗೆ ಹಿಂದೆ ನಿಂತ ದುರ್ಯೋಧನ ಕಾಣ್ತಾನೆ .. ಅಚಾತುರ್ಯದಿಂದ ಹಾರ ಕಿತ್ತುದ್ದಲ್ಲದೆ ಅಪಾರ್ಥಕ್ಕೆಡೆ ಮಾಡಿಕೊಡುವಂತ ಪರಿಸ್ಥಿತಿಯಿಂದ ಭಾನುಮತಿ ಹಾಗು ಕರ್ಣ ಇಬ್ಬರೂ ಮುಜುಗರಕ್ಕೆ ಒಳಗಾಗುತ್ತಾರೆ .... ದುರ್ಯೋಧನ 'ಮುತ್ತುಗಳ ಆಯ್ದರೆ ಮಾತ್ರ ಸಾಕೆ ಇಲ್ಲಾ ಹಾರವನ್ನೂ ಕಟ್ಟಿಕೊಡಬೇಕೆ ಮಹಾರಾಣಿ ' ಎಂದಂದು ಪರಿಸ್ಥಿತಿಯ ತಿಳಿಯಾಗಿಸುತ್ತಾನೆ .. ಕರ್ಣನ ಹೆಗಲ ಮೇಲೆ ಕೈ ಹಾಕಿ ನಗುತ್ತಾನೆ ....
ನಂಬಿಕೆ ವಿಶ್ವಾಸಗಳ ಮೇಲೆ ಕಟ್ಟಿದ ಸಂಬಂಧಗಳು ಬೃಹತ್ ವೃಕ್ಷಗಳಂತೆ ...... ಕಥೆ ಕೇಳಿದ ಮನಸ್ಸು ಆ ಮರದಂತೆ ಹಸಿರಸಿರು

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...