Friday 26 May 2017

ಮೆದುಳು ದೇಹದ ಅತಿ ಮುಖ್ಯ ಅಂಗ . ದೇಹ ಒಳಗೆ ತೆಗೆದುಕೊಳ್ಳುವ ಆಮ್ಲಜನಕದ ಶೇಕಡ ೨೦ ರಷ್ಟನ್ನ ಈ ಮಿದುಳೆ ಉಪಯೋಗಿಸಿಕೊಳ್ಳುತ್ತದೆ . (ಹಾಗೆಯೇ ಅದರ ಸರಿಯಾದ ಕೆಲಸಕ್ಕೆ ಅಧಿಕ ರಕ್ತದ ಹಾಗು ಆಹಾರದ ಅವಶ್ಯಕತೆ ಇರುತ್ತದೆ). ಇಲ್ಲವಾದರೆ hypoxia (ಆಮ್ಲಜನಕದ ಕೊರತೆ) ಎದುರಿಸಿ ಅನೇಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ .. ಆ ಆಮ್ಲಜನಕದ ಜನಕ ಗಿಡಮರಗಳು ... ಆಮ್ಲಜನಕ ನೀಡುವ ಗಿಡಗಳ ಸಂಖ್ಯೆ ಅಧಿಕವಾಗಲಿ ..ಅಕ್ಷಯವಾಗಲಿ ... 
ಮೆದುಳು ಎನ್ನುವ ಅಂಗಕ್ಕೆ ದೈಹಿಕವಾಗಿ ಆಮ್ಲಜನಕ ಹೇಗೋ ಹಾಗೆ ಅದರ ಸಮರ್ಪಕ ಕೆಲ್ಸಕ್ಕೆ ಪ್ರೀತಿ ಅನ್ನೋ ಆಮ್ಲಜನಕ ಕೂಡ ಅಗತ್ಯ .. ಮನಸಲ್ಲಿ ಪ್ರೀತಿ, ಮತ್ತೊಬ್ಬರೆಡೆಗೆ ಒಂದಷ್ಟು ಕಾಳಜಿ, ಸಹನೆ , ಅವರೂ ನನ್ನ ಹಾಗೆಯೆ ಎನ್ನುವ ಭಾವನೆಗಳ ಗಿಡ ನೆಟ್ಟರೆ ಮೆದುಳು ಭಾವನಾತ್ಮಕವಾಗಿ ಕೂಡ ಚೆಂದ ಕೆಲಸ ಮಾಡುತ್ತದೆ ....... ಪ್ರೀತಿ ಅಕ್ಷಯವಾಗಲಿ ... ಬದುಕು ಸಹನೀಯವಾಗಲಿ .......
ನಗು ವೈರಲ್ ಆಗಲಿ :))))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...