Friday 26 May 2017

ಆತ ಆಕೆ ಬೇರೆಯಾಗಿದ್ರು . ಅವರದೇ ಕಾರಣಗಳು ,, ಈಗ ಇಬ್ರು ಒಳ್ಳೆಯ ಗೆಳೆಯಗೆಳತಿಯರು .. ಒಬ್ಬ ಮಗಳು ಅಪ್ಪನೊಂದಿಗೇ ಇದ್ದಾಳೆ .. ಬೇರೆ ಇದ್ದರೂ ಮಾತನಾಡುತ್ತಾರೆ . ಮಗಳು ಕೂಡ ಅಮ್ಮನೊಂದಿಗೆ ಒಳ್ಳೆಯ ಟರ್ಮ್ಸ್ ಅಲ್ಲಿದ್ದಾಳೆ .. 
ಮೊನ್ನೆ ಮೊನ್ನೆ ಒಂದು ಮದುವೆ ಮನೆಗೆ ಆಕೆ ಬಂದಿದ್ಳು .. ಈತನೂ ಬಂದಿದ್ದ .. ಈಕೆಯನ್ನ ಕಂಡ ಈತನ ಮನೆಯ ಕೆಲವರು ಈಕೆಯನ್ನ ಚೆಂದ ಮಾತನಾಡಿಸಿದರು .. ಆಕೆ ಕೂಡ ವಿಶ್ವಾಸದಿಂದ ಮಾತನಾಡಿದಳು.. ಮದ್ವೆ ಮನೆಯಲ್ಲಿ ಕೆಲವರ ಮುಖದಲ್ಲಿ ಈ ವಿಶ್ವಾಸವನ್ನ ಕಂಡು ಹಲವು ಪ್ರಶ್ನೆಗಳು "ಒಂದ್ ತರಾ " ನಗು ಕೂಡ ಕಾಣ್ತು ..ಅದನ್ನ ಬಿಟ್ ಬಿಡೋಣ ಬಿಡಿ ... ಆದರೆ ಈತ ಅವನಾಗೆ ಯಾರನ್ನೂ ಮಾತನಾಡಿಸಲಿಲ್ಲ .. ಅವರೂ ಕೂಡಾ ಮಾತನಾಡಿಸಲಿಲ್ಲ . ಮದ್ವೆ ಮುಗಿತು .. 
"ಅವಳು ಎಲ್ಲರನ್ನೂ ಮಾತನಾಡಿಸಿದಳು ..ನೋಡು ಅಷ್ಟೆಲ್ಲಾ ಆಗಿದ್ರು ಅವಳು ಅವನ ಕಡೆಯವರನ್ನ ಎಷ್ಟ್ ಚೆನ್ನಾಗಿ ಮಾತನಾಡಿಸಿದ್ಲು . ಎಷ್ಟ್ ಒಳ್ಳೆಯವಳು ಇವ್ನೆ ಸರಿ ಇಲ್ಲವೇನೋ ' ಅಂದ್ಕೊಂಡ ಮಂದಿ ಒಂದಷ್ಟಾದ್ರೆ .. "ಇಂತಹ ನಾಟಕಕ್ಕೆ ಬೇರೆ ಆಗಿದ್ದ್ಯಾಕೆ" ಅಂದವರು ಮತ್ತೊಂದಷ್ಟು.. 
ಇಲ್ಲಿ ಒಳ್ಳೆಯವರು ಕೆಟ್ಟವರು ಅನ್ನುವ ಪ್ರಶ್ನೆ ಬರೋದಿಲ್ಲ ... ಐದು ಬೆರಳು ಸಮನಾಗಿರೋದಿಲ್ಲವಲ್ಲ .. ಜೊತೆಗೆ ಕೆಲವೊಮ್ಮೆ ಸಮಯ ಸಂಧರ್ಭ ಕೂಡ ಕಾರಣವಾಗಿಬಿಡುತ್ತದೆ !! ಗಂಡು ಮಾತ್ರ ತಪ್ಪು ಮಾಡೋದು ಹೆಣ್ಣು ತಪ್ಪೆ ಮಾಡೋದಿಲ್ಲ ಅಂತೇನು ಇಲ್ಲವಲ್ಲ !! ಹಾಗೆ ತಪ್ಪುಗಳಾದ ಮೇಲೆ ಮಾತೇ ಆಡಿಸಬಾರದು ಎಂಬ ನಿಯಮ ಕೂಡ ಇಲ್ಲ !! ಹೀಗೆ ಚೆನ್ನಾಗಿರ್ತಿವಿ ಅಂದ್ರೆ ಇರ್ಲಿ ಬಿಡಿ ಅನಿಸೋ ಹಾಗೆ ..ಮಾತಿನಿಂದ ಮತ್ತೊಬ್ಬರನ್ನ ನೋಯಿಸುವ ಹಕ್ಕು ದೇವರೂ ಕೂಡ ನೀಡಿಲ್ಲ .. ಒಬ್ಬರನ್ನ, ಒಂದು ಸಂಬಂಧವನ್ನ ವಿಶ್ಲೇಷಿಸುವ ಹಕ್ಕು ಅದಕ್ಕೆ ಸಂಬಂಧಪಟ್ಟವರಿಗೆ ಮಾತ್ರವಿರುತ್ತದೆ ಅಲ್ಲವೇ .. ಮಾತನಾಡುವ ಮುನ್ನ ಯೋಚಿಸಿದರೆ ಒಳ್ಳೆಯದೇನೋ ..ಬದುಕು ಅಂದ್ರೆ ಹೊಂದಾಣಿಕೆ .. ಕೆಲವ್ರು ತಮ್ಮವರಿಗಾಗಿ ಆರ್ಥಿಕ ಸ್ವಾಸ್ಥಕ್ಕಾಗಿ , ಸಾಮಾಜಿಕ ಸ್ಥಾನಕ್ಕಾಗಿ ಹೊಂದಿಕೊಂಡು ಹೋದರೆ ಕೆಲವರಿಗೆ ಅದರ ಅಗತ್ಯ ಕಾಣೋದಿಲ್ಲ... 
Feeling....ಒಂದೊಳ್ಳೆ ಮಳೆ ಬಂದು ಮನುಷ್ಯನ ಕೆಟ್ಟತನವೆಲ್ಲ ಕೊಚ್ಚಿಹೋಗಲಿ ಅನಿಸುವ ಹಾಗೆ ...

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...