Friday 26 May 2017

ಕಳೆದ ವಾರ ಮೈದುನನ ಮಗಳಿಗೆ ಹುಷಾರಿಲ್ಲ ಅಂತ ಆಸ್ಪತ್ರೆ ಸೇರಿಸಿತ್ತು . ನಾನು ಮಂಜು ದಿನಾ ಸಂಜೆ ಹೋಗಿ ನೋಡಿಕೊಂಡು ಬರ್ತಾ ಇದ್ವಿ . ಮಕ್ಕಳ ವಾರ್ಡು , ಒಂದ್ನಾಲ್ಕು ಮಕ್ಕಳು ಇರ್ತಾ ಇದ್ವು, ಒಂದು ದಿನ ಒಂದು ಡಿಸ್ಚಾರ್ಜ್ ಆದ್ರೆ ಮತ್ತೊಂದು ದಿನ ಒಂದು ಹೊಸ ಕಂದ ಸೇರಿರ್ತಾ ಇತ್ತು. ನಾವು ಹೋದ್ರೆ ಆ ಮಕ್ಕಳನ್ನ ಸುಂಸುಮ್ನೆ ಮಾತನಾಡಿಸಿ ನಗಿಸಿ ಬರ್ತಾ ಇದ್ವಿ. ಮೈದುನನ ಮಗಳು ಕೂಡ ನಾವ್ ಹೋದ್ರೆ ಒಂದಷ್ಟು ಹೊತ್ತು ನಗ್ತಾ ಇರ್ತಿತ್ತು . ಏನೂ ತೆಗೆದುಕೊಂಡು ಹೋಗಿ ಕೊಡದೆ ಇದ್ದರೂ (ಚಾಕಲೇಟ್, ಕೇಕ್ ಎಲ್ಲಾ ಆಸ್ಪತ್ರೆಯಲ್ಲಿರುವ ಮಕ್ಕಳಿಗೆ ಕೊಡುವುದು ಸಲ್ಲ ಎಂದು) ನಾವು ಹೋದ್ರೆ ಮಕ್ಕಳು ಖುಷ್ಖುಷಿಯಾಗಿ ನಗ್ತಾ ಇದ್ವು .. ಒಂದ್ನಾಲ್ಕು ದಿನ ಹೋದ್ವಿ ಐದನೇ ದಿನ ಸಂಜೆ ಮಂಜು ಒಂಚೂರು ಪೆಟ್ಟು ಮಾಡಿಕೊಂಡ್ರು. ಡಾಕ್ಟ್ರು ವಿಶ್ರಾಂತಿ ಬೇಕು ಅಂದ್ರು ಅಂತ ಆಸ್ಪತ್ರೆಗೆ ಹೋಗಲಿಲ್ಲ. ಫೋನ್ ಮಾಡಿ ಪುಟ್ಟಿ ಹೇಗಿದ್ದಾಳೆ ಅಂತ ಕೇಳ್ಕೊಳ್ತಾ ಇದ್ದೆ .. ಮತ್ತೆ ಆಕೆ ಡಿಸ್ಚಾರ್ಜ್ ಆಗೋವರೆಗೂ ಹೋಗಲಾಗಲಿಲ್ಲ..
ನೆನ್ನೆ ಫೋನ್ ಮಾಡಿದ ವಾರಗಿತ್ತಿ "ಅಕ್ಕ, ನೀವು ಮಂಜಣ್ಣ ಬರ್ಲಿಲ್ಲ ಅಂತ ಆ ಪಕ್ಕದ ಬೆಡ್ ಅಲ್ಲಿ ಇದ್ವಲ್ಲ ಆ ಎರಡು ಮಕ್ಳು ಮತ್ತೆ ಅವರಮ್ಮಂದಿರು ಡಿಸ್ಚಾರ್ಜ್ ಆಗ ದಿನಾನೂ ಕೇಳ್ತಾ ಇದ್ರು . ಅವ್ರು ಬಂದ್ರೆ "ಚೆಂದ" ಇರ್ತಿತ್ತು , ಮಕ್ಳು ಒಂಚೂರು ನಗ್ತಾ ಇದ್ವು ಅಂತ. ಹಿಂಗ್ ಹಿಂಗೇ ಏಟಾಗಿದೆ ಅಂದೆ. ತುಂಬಾನೇ ಬೇಜಾರ್ ಮಾಡಿಕೊಂಡ್ರು ..ಬೇಗ ವಾಸಿ ಆಗ್ಲಿ ಅಂತ ಹೇಳ್ತಿದ್ರು ಅಕ್ಕ.. ಟೈಮ್ ಆದ್ರೆ ಮನೆಗೆ ಬಂದು ಹೋಗಿ ಅಕ್ಕ " ಅಂದ್ಲು!!
ಯಾರೋ ಏನೋ ಒಂದೂ ಗೊತ್ತಿಲ್ಲ, ಒಂದೆರಡು ದಿನ ಒಂದು ಗಂಟೆಯಷ್ಟು ಮಾತನಾಡಿಸಿದ್ದು ಬಿಟ್ಟರೆ ಬೇರೇನೂ ಗೊತ್ತಿಲ್ಲ.. ಒಂದೆರಡು ಮಾತು ನಗು ಹಂಚಿಕೊಂಡದಷ್ಟೇ !!! ಅಷ್ಟಕ್ಕೇ ಇಷ್ಟೆಲ್ಲಾ ಹಾರೈಕೆ.. 
ಹಾಗಾದರೆ...ರೆ.....ರೆ.....ಪ್ರತಿ ದಿನ ನೋಡುವ , ಸಿಗುವ ನಮ್ಮವರೇ ಆದವರಿಗೆ ಒಂದೆರಡು ಒಳ್ಳೆಯ ಮಾತು ನಗು ಹಂಚಿದರೆ.... ಜಗದ ತುಂಬಾ ನಗುವೇ ಇರುತ್ತದ್ದೇನೋ ಅಲ್ವೇ !!! 
ಒಂದಷ್ಟು ದಿನಗಳಿಂದ ಮೋಡ ಮಡುಗಟ್ಟಿದ್ದ ಮನಸ್ಸಿನಲ್ಲಿ ವಾರಗಿತ್ತಿ ಆಡಿದ ಮಾತು ಹಸಿರು ಎರಚಿದಂತೆ :)))) 
Once again Life is beautiful.....:))))))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...