Monday, 27 July 2015

ಒಂದು ಸಣ್ಣ ಹೋಟೆಲ್ . ಒಬ್ಬ ವ್ಯಕ್ತಿ ಬಂದು ಟೀ ಕುಡಿತಾನೆ . ಸ್ವಲ್ಪ ಕುಡಿದು ಮತ್ತೆಲ್ಲ ಅಲ್ಲೇ ಬಿಟ್ಟು ದುಡ್ಡು ಕೊಟ್ಟು ಹೊರಡುತ್ತಾನೆ . ಮತ್ತೊಬ್ಬ ವ್ಯಕ್ತಿ ಅಲ್ಲೇ ಇದ್ದವನು ಅದನ್ನು ನೋಡುತ್ತಾನೆ. ಎಷ್ಟ್ ಟೀ ದಂಡ ಆಯ್ತಲ್ಲ ಅಂತ ಮರುಗುತ್ತಾನೆ .. ಟೀ ದಂಡ ಆಗುತ್ತದೆ ಅಂತ ಅವನು ಕುಡಿಯೋದಿಲ್ಲ .. ಯಾಕೆ ಅಂದ್ರೆ ಅವನಿಗೆ ಪ್ರೆಸ್ಟೀಜ್ ಇದೆ...ಮತ್ತೆ ಏನೂ ಮಾಡದೆ ಮರುಗುತ್ತಲೇ ಇರುತ್ತಾನೆ.. ಮತ್ತೊಬ್ಬ ವ್ಯಕ್ತಿ ಬರುತ್ತಾನೆ ಉಳಿದ ಟೀ ನೋಡುತ್ತಾನೆ ಸ್ವಲ್ಪವೂ ಬೇಸರಿಸದೆ ಎಂಜಲು ಅಂತ ಕೂಡ ಅನ್ನದೆ ಅದನ್ನ ಕುಡಿದು ಹೊರಟೇ ಬಿಡುತ್ತಾನೆ .. ಮೊದಲು ಕುಡಿದವ ದುಡ್ಡು ಹೆಚ್ಚಾದವ ...ಕಡೆಗೆ ಕುಡಿದವ ಬಡತನದವ.. ಮಧ್ಯೆ ನೋಡುತ್ತಾ ಮರುಗುತ್ತಾ ಕುಳಿತವ ಮಧ್ಯಮ ವರ್ಗದವರ ಪ್ರತಿನಿಧಿ .. ಇಲ್ಲಿ ಟೀ ಅನ್ನೋದು ಒಂದು ಪ್ರತೀಕ ಅಷ್ಟೇ .. ಅದು ಹಣ ಆಗಿರಬಹುದು, ದಾನ ಆಗಿರಬಹುದು, ಮತ್ತೊಂದು ಆಗಿರಬಹುದು ..ಮೊದಲಿಬ್ಬರು ಹೇಗೋ ಹೊಟ್ಟೆ ತುಂಬಿಸಿಕೊಂಡರೆ .. ಈ ಮಧ್ಯಮ ವರ್ಗದವರು ತಮ್ಮತನವನ್ನೂ ಬಿಡದೆ .. ತಮ್ಮದೇ ego ಇ(ಕಟ್ಟಿ)ಟ್ಟುಕೊಂಡು, ಹೊಟ್ಟೆ ತುಂಬಾ ತಿನ್ನದೇ , ತಿನ್ನುವವರ ನೋಡುತ್ತಾ , ನಾಳೆಗೆ ನಾಳೆಗೆ ಅಂತ ಮರುಗಿ, ಮನಸಾಕ್ಷಿಗೆ (!!)ಮೆಚ್ಚುವಂತೆ ನಡೆದೆ ಎಂದುಕೊಂಡು ಬದುಕುವವರು. ಕಡೆಗೊಮ್ಮೆ ಯಾರಿಗೂ ಕಾಣದೆ ಮರೆಯಾಗಿ ಹೋಗುವವರು .....
ಅಲ್ಲೆಲೋ ಒಂದು ಕಡೆ ಎಲೆಕ್ಷನ್ ನಡಿತಾ ಇದೆ .. ಅಲ್ಲಿ ನಡೆಯೋ ಹಣ ಚೆಲ್ಲಾಟದ ಬಗ್ಗೆ ನಡೆದ ಮಾತುಗಳು ....
ಒಂದಷ್ಟು ಕಥೆಗಳು ಅದೆಷ್ಟು ಪ್ರಭಾವ ಬೀರುತ್ವೆ ಅಂದ್ರೆ ಓದಿದ್ದು ಖಂಡಿತಾ ಹಂಚಿಕೊಳ್ಳಲೇ ಬೇಕು ಅನ್ನೋ ಅಷ್ಟು ... ಇಲ್ಲೊಂದು ಅಂತಹದೇ ಕಥೆ ಇದೆ ..ಗೆಳೆಯರೊಬ್ಬರು ಕಳಿಸಿದ್ದು. ಅದರ ಅನುವಾದ ಇದು .. ಒಂದ್ ಸಾರಿ ಓದಿಬಿಡಿ ..
ಶಿವ ಪಾರ್ವತಿ ಅವರ ಮಕ್ಕಳ ಜೊತೆ ಕೈಲಾಸದಲ್ಲಿ ಸಂತಸವಾಗಿ ಇರ್ತಾರೆ . ಎಲ್ಲಾ ಕಡೆ ಪ್ರೀತಿ, ನೆಮ್ಮದಿ, ನಗುವಿನ ಹೊಳೆಯೇ ಇರುತ್ತದೆ. ಧರ್ಮ ಇನ್ನು ತಲೆ ಎತ್ತಿ ಮೆರೆಯುತ್ತಾ ಇರ್ತಾನೆ. ಭೂಮಿ ಸಮೃದ್ಧವಾಗಿರುತ್ತದೆ .
ಆದರೆ ಸಿಕ್ಕೆಲ್ಲಾ ಉಪಯೋಗಿ ವಸ್ತುಗಳನ್ನ ಮನುಷ್ಯ ಬೇಕಾಬಿಟ್ಟಿ ಉಪಯೋ(ಬೋ!!!)ಗಿಸಿ ಭೂಮಿ ಮೇಲೆ ಮಳೆ ಇಲ್ಲದಂತೆ ಆಗುತ್ತದೆ .. ವರುಣ ವಾಯು ಕೋಪಿಸಿಕೊಂಡುಬಿಡ್ತಾರೆ .. ಭೂಮಿ ಮೇಲೆ ಬರ ಶುರುವಾಗಿ ಬಿಡುತ್ತದೆ. ಪ್ರಾಣಿ ಪಕ್ಷಿಗಳಿಗೆ ಆಹಾರ ಇಲ್ಲದಂತಾಗುತ್ತದೆ .. ಎಲ್ಲೆಲ್ಲು ಹಾಹಾಕಾರ .. ಇತ್ತ ಕೈಲಾಸದಲ್ಲೂ ಹಾಗೆ ಆಗುತ್ತದೆ . ಹಸಿವೆ ತಾಳದ ಶಿವನ ಸರ್ಪ ವಾಸುಕಿ ಗಣಪನ ಇಲಿಯನ್ನ ಹಿಡಿದು ನುಂಗಿಬಿಡುತ್ತದೆ . ಇದನ್ನ ಕಂಡ ಕಾರ್ತಿಕೇಯನ ನವಿಲು ಸರ್ಪವನ್ನ ಹಿಡಿದು ತಿಂದುಬಿಡುತ್ತದೆ , ನವಿಲನ್ನ ಪಾರ್ವತಿಯ ಸಿಂಹ ತಿಂದುಬಿಡುತ್ತದೆ ... ಪಾರ್ವತಿಯ ಮಾತೃ ಹೃದಯ ಮಕ್ಕಳ ಈ ಪರಿಯ ದೌರ್ಜನ್ಯ ಕಂಡು ಮರುಗುತ್ತದೆ . ಪಾರ್ವತಿಯ ನೋವಿಗೆ ಶಿವನ ತಪಸ್ಸು ಭಂಗವಾಗುತ್ತದೆ ..
ಶಿವ 'ದೇವಿ , ಹಸಿವಿನ ತೃಪ್ತಿ ಒಂದೇ ಧರ್ಮ ಕಾಪಾಡುವ ಸಾಧನ .. ಭೂಮಿಯಲ್ಲಿ ನೆಮ್ಮದಿ ಬೇಕೆಂದರೆ ಮೊದಲು ಹಸಿವು ತೃಪ್ತವಾಗಬೇಕು ' ಅಂತಾನೆ
'ಆದರೆ ...ಈ ಪರಿಯ ಹಾಹಾಕಾರ , ನಾ ನೋಡಲಾರೆ .' ಅಂತಾಳೆ ಪಾರ್ವತಿ.
ಶಿವ ಹೇಳ್ತಾನೆ 'ಪಾರ್ವತೀ, ಹಸಿವು ಪ್ರಕೃತಿದತ್ತ .. ಬರ ಮಾನವ ನಿರ್ಮಿತ .... ಇದನ್ನ ಎಲ್ಲಿಯರೆಗೂ ಮಾನವ ಅರಿಯನೋ ಅಲ್ಲಿಯವರೆಗೂ ಈ ಪ್ರಕೃತಿ ಮುನಿಸು ಅತಿವೃಷ್ಟಿ ಅನಾವೃಷ್ಟಿ ಇದ್ದೇ ಇರುತ್ತದೆ .. 'ಬುದ್ದಿ 'ಇರುವ ಮಾನವನಿಗೆ ಹೇಳುವವರಾರು ಹೇಳು '.... ಪಾರ್ವತಿ ನಿರುತ್ತರಳಾಗ್ತಾಳೆ ...
ಹೌದು ಅಲ್ವೇ , ಹಸಿವು ಪ್ರಕೃತಿದತ್ತ , ಬರ ಮಾನವ ನಿರ್ಮಿತ .... ಪರಿಹಾರ ......!!!!???
ಒಬ್ಬ ಕವಿಯ, ಲೇಖಕನ, ಸಾಹಿತಿಯ ಧನ್ಯತೆ ಎಲ್ಲಿ ಸಿಗಬಹುದು..?ಮೆಚ್ಚುಗೆ, ಕೀರ್ತಿ,ಹಣ...???
೧೯೨೦ ರಲ್ಲಿ ಕವಿ ಟಾಗೋರ್ ಇಂಗ್ಲೆಂಡ್ ಅಲ್ಲಿ ಇದ್ದರು. ಒಂದು ಪತ್ರ ಅವರಿಗೆ ಬಂತು..ಅದು ಇಂಗ್ಲಿಷ್ ಮಹಿಳೆಯೊಬ್ಬಳ ಪತ್ರ......ಒಕ್ಕಣೆ ಹೀಗಿತ್ತು.......
ಪ್ರಿಯ ರವಿಂದ್ರನಾಥ್ ಸರ್,
ನೀವು ಲಂಡನ್ನಲ್ಲಿ ಇದ್ದೀರಂತೆ , ನಿಮಗೆ ಪತ್ರ ಬರೆಯಬೇಕೆಂದು ಬಹಳ ದಿನಗಳಿಂದ ಅನ್ಕೊಂಡೆ . ಧೈರ್ಯ ಬಂದಿರಲಿಲ್ಲ..ಆದ್ರೆ ಈವತ್ತು ಬರೆಯಲೇಬೇಕು ಎಂದು ಬರೆಯುತ್ತ ಇದ್ದೇನೆ ..ಈ ಪತ್ರ ನಿಮ್ಮ ಕೈ ಸೇರಿದರೆ ನನ್ನ ಪುಣ್ಯ. ಯಾಕೆ ಅಂದ್ರೆ ನಿಮ್ಮ ವಿಳಾಸ ಕೊಡ ನಂಗೆ ಸರಿಯಾಗಿ ಗೊತ್ತಿಲ್ಲ..ನಿಮ್ಮ ಹೆಸರಿನ ಬಲದಿಂದ ಸೇರುತ್ತೆ ಅನ್ನೋ ನಂಬಿಕೆಯಿಂದ ಬರಿತಾ ಇದ್ದೇನೆ..
ಎರಡು ವರ್ಷದ ಹಿಂದೆ ನನ್ನ ಮಗ ಯುದ್ಧ ಭೂಮಿಗೆ ಹೊರಟಿದ್ದ . ಆಗ ನಾವಿಬ್ಬರು ಮುಳುಗೋ ಸೂರ್ಯನ ಸಮಕ್ಷಮದಲ್ಲಿ ಸಾಗರವ ನೋಡುತ್ತಾ ಮೌನವೇ ಮಾತಾಗಿ ನಿಂತಿದ್ದೆವು. .ಆಗ ನನ್ನ ಕವಿಮಗ ತನಗೆ ತಾನೆ ಎಂಬಂತೆ ಈ ಮಾತು ಹೇಳಿದ "When I go from hence ,let this be my parting words"
ಯುದ್ದಕ್ಕೆ ಹೋದ..ಅವನು ಮತ್ತೆ ಬರಲಿಲ್ಲ....
ಬಂದಿದ್ದು ಅವನ ಪಾಕೆಟ್ ಬುಕ್. ತೆರೆದು ನೋಡಿದೆ. ಅಕ್ಕರೆಯಿಂದ ಬರೆದ ಅದೇ ವಾಕ್ಯ ನನ್ನ ಸೆಳೆಯಿತು. ಕೆಳಗೆ ನಿಮ್ಮ ಹೆಸರು ಇತ್ತು....ನನಗೆ ನನ್ನ ಮಗನ ಮನಸೂರೆಗೊಂಡ ಈ ಕವನ ಇಡಿಯಾಗಿ ಓದೋ ಆಸೆ ದಯವಿಟ್ಟು ಆ ಕವಿತೆ ಇರೋ ಪುಸ್ತಕದ ಹೆಸರ ತಿಳಿಸುವಿರಾ?......ಹೀಗಂತ ಕೇಳೋದು ತಪ್ಪು ಅಲ್ಲ ತಾನೇ.?"
ಪತ್ರ ಬರೆದ ಮಹಿಳೆ ಸುಸಾನ್ ಓವೆನ್ ಅನ್ನುವವರು ..ವಿಖ್ಯಾತ ಕವಿ ವಿಲ್ಫ್ರೆಡ್ ಓವೆನ್ (Wilfred Oven)ನ ತಾಯಿ........(ಈ ಮೇಲಿನ ಪದ್ಯದ ಸಾಲು ಟಾಗೋರ್ ರ ಗೀತಾಂಜಲಿಯದು )
ಓದಿದ ಟಾಗೋರ್ ರ ಸ್ತಂಭಿಭೂತರಾದರು .
ಒಬ್ಬ ಕವಿಗೆ ಇದಕ್ಕಿಂತ ಮತ್ತೇನು ಬೇಕು ಅಲ್ವ ....
Felt Like sharing:))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...