Tuesday 9 January 2018

ಈವತ್ತು ಪುಟ್ಟಿ ಕಾಲೇಜ್ ಅಲ್ಲಿ ಪೇರೆಂಟ್ಸ್-ಟೀಚರ್ಸ್ ಮೀಟಿಂಗ್ ಇತ್ತು . ಅವ್ಳಿಗೆ ಸ್ವಲ್ಪ ಶೀತ ಕೆಮ್ಮು ಇತ್ತು ಅಂತ ಅವಳು ಕಾಲೇಜ್ಗೆ ಹೋಗಿರಲಿಲ್ಲ. ನಾ ಹೋದೆ. ಎಂದಿನಂತೆ ತುಂಬಾನೇ ಸ್ನೇಹದಿಂದ ಮಾತನಾಡಿಸಿದರು ಲೆಕ್ಚರರ್ಗಳು . ಎಂದಿಗಿಂತ ಒಂಚೂರು ಕಮ್ಮಿಅಂಕ ತೆಗೆದುಕೊಂಡಿದ್ಳು . ಸರಿ ಉತ್ತರ ಪತ್ರಿಕೆಗಳನ್ನ ನೋಡಿ ಮತ್ತೆ ಮನೆಗೆ ಬಂದೆ . 
ಇನ್ನೂ ಗಾಡಿ ನಿಲ್ಲಿಸ್ತಾ ಇದ್ದೆ. ಮಂಜುನಾಥ ಪ್ರಭುಗಳು ಫೋನ್ ಮಾಡಿದ್ರು ' ಏನಮ್ಮ ಬಂದ್ಯಾ, ಏನಂದ್ರು ಕಾಲೇಜ್ ಅಲ್ಲಿ?" "ನಿನ್ ಮಗಳು ಕಮ್ಮಿ ಮಾರ್ಕ್ಸ್ ತಗೊಂಡಿದ್ದಾಳೆ ಈ ಸಾರಿ ".. ಇನ್ನೂ ಮಾತೆ ಮುಗಿಸಿರಲಿಲ್ಲ ... ನೀನೇನು ಬೈಯೋಕೆ ಹೋಗ್ಬೇಡ ಅವಳನ್ನ , ಇನ್ನಾ ಟೈಮ್ ಇದೆ ! ಓದ್ಕೊಳ್ತಾಳೆ !' ಅಂದ್ರು. ಫೋನ್ ನನ್ನದಲ್ವಾ ಅದ್ಕೆ ಎಸಿಲಿಲ್ಲ . ಕಟ್ ಮಾಡಿದೆ .
ಒಳಗೆ ಬಂದೆನೋ ಇಲ್ವೋ ಅಲ್ಲೆಲ್ಲೋ ಊರು ಸುತ್ತೋಕೆ ಹೋಗಿರೋ ಮಗ ಕಾಲ್ ಮಾಡ್ದ. 'ಮಾ, ಪುಟ್ಟಿ ಹುಷಾರಾಗಿದ್ದಾಳಾ? ಮೀಟಿಂಗೇ ಹೋಗಿದ್ದಾ "? "ಹೊಂ, ಈಗ ಬಂದೆ...ಸ್ವಲ್ಪ ಕಮ್ಮಿ ಮಾರ್ಕ್ಸ್ ತಗೊಂಡಿದ್ದಾಳೆ .... " ಇನ್ನೂ ಮಾತೆ ಮುಗಿಸಿಲ್ಲ . 'ಏನೂ ಅನ್ಬೇಡ , ಅವ್ಳು ಓದ್ತಾಳೆ , ಇನ್ನಾ ಟೈಮ್ ಇದೆ, ನನ್ ತಂಗಿ ನನ್ನಂಗೆ ..." ಫೋನ್ ನನ್ನದಲ್ವಾ ಅದ್ಕೆ ಎಸಿಲಿಲ್ಲ . ಕಟ್ ಮಾಡಿದೆ !!
ಅಲ್ಲಾ, ನಾನೇನು ಇಲ್ಲಿ ವಿಲ್ಲನ್ನಾ ಇವರಿಗೆಲ್ಲಾ ...
ಅದ್ಕೆ ನಾ ಇನ್ಮೇಲೆ ಇವರ್ಯಾರ ವಿಷ್ಯಕ್ಕೂ ಹೋಗೋದಿಲ್ಲ ಅಂತ ತೀರ್ಮಾನ ಮಾಡಿಬಿಟ್ಟಿದ್ದೀನಿ .... ನಾಳೆ ಬೆಳಿಗ್ಗೆವರೆಗೂ ))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...