Tuesday 9 January 2018

ಮದ್ವೆಯಾದ ಹೊಸದರಲ್ಲಿ ನಾವೂ ತುಂಬಾನೇ ಕಿತ್ತಾಡ್ಕೋಳ್ತಾ ಇದ್ವಿ . ಮೊದ್ಲೇ ಪ್ರೀತಿಸಿ ಆದ ಮದುವೆ.. ಎರಡೂ ಮನೆಗಳ ನಡುವೆ ಅಗಾಧ ಅಂತರ ಎಲ್ಲದರಲ್ಲೂ . ಸಣ್ಣ ಸಣ್ಣ ವಿಷಯಗಳಿಗೂ ಆಕ್ಷೇಪಣೆ .. ಬದುಕು ಪ್ರೀತಿಸುವಾಗ ಕಾಣ್ತಾ ಇದ್ದಷ್ಟು ಸರಳ ಅಲ್ಲ ಅನಿಸೋ ಹಾಗೆ . ಬೇರೆ ಮನೆ ಮಾಡಿದ ಮೇಲೆ ಕೂಡ ತುಂಬಾ ಸಣ್ಣ ಸಣ್ಣ ವಿಷಯಗಳನ್ನೂ ದೊಡ್ಡದು ಮಾಡಿಕೊಂಡು ಮನಸ್ತಾಪ ಮಾಡಿಕೊಳ್ತಾ ಇದ್ದಿದ್ದೂ ಉಂಟು. ನಮ್ಮಿಬ್ಬರ ವಿಷಯಗಳಿಗಿಂತ ಜಗಳದಲ್ಲಿ ಮೂರನೆಯ (ನಮ್ಮಿಬ್ಬರ ಮನೆಗಳವರ, ಬಂಧುಗಳ ನೆಪ ಹಿಡಿದು !!) ವಿಷ್ಯಕ್ಕೆ ಮನಸ್ತಾಪಗಳಾಗತೊಡಗಿತು. ಕೋಪ, ಅಹಂ, ಅನಗತ್ಯ ವಾದಗಳು ಮನಸ್ಸಿನ ನಡುವೆ ಕಂದಕವನ್ನು ನಿರ್ಮಿಸತೊಡಗಿದಾಗ- One fine day-ಇಬ್ರೂ ತೀರ್ಮಾನ/ಸಂಧಾನ ಮಾಡಿಕೊಂಡ್ವಿ . ನಮ್ಮಿಬ್ಬರದಲ್ಲದೆ ಮೂರನೆಯ(!!) ವಿಷಯಕ್ಕೆ ಜಗಳಗಳು ಬೇಡ ಎಂದು.. ಬದುಕು ಅಂದರೆ ಅರ್ಥ ಮಾಡಿಕೊಳ್ಳುವಿಕೆ ಅಷ್ಟೇ ಅನಿಸತೊಡಗಿತು ಕೆಲವನ್ನ ಮರೆತು, ಕೆಲವನ್ನ ನೋಡಿಯೂನೋಡದೆ, ಕೆಲವನ್ನ ಕೇಳಿಯೂಕೇಳದೆ, ಕೆಲವನ್ನ ಬದಿಗೊತ್ತಿ ಬದುಕತೊಡಗಿದಂತೆಲ್ಲ ಬದುಕು ಪ್ರೀತಿಸುವಾಗ ಇದ್ದಷ್ಟೇ ಸುಂದರ ಅನಿಸತೊಡಗಿತು. ಮಕ್ಕಳು ದೊಡ್ಡವರಾದಂತೆಲ್ಲ, ಅವರೊಟ್ಟಿಗೆ ನಾವೂ ಬೆಳೆದೆವು . ಮಾಗಿದಂತೆಲ್ಲ ಬದುಕು ಹಸನು ಮಾಡಿಕೊಳ್ಳುತ್ತಾ ಸಾಗಿದೆವು . ಜಗಳಗಳೇ ಇಲ್ಲವೆಂದಲ್ಲ, ಆದರೆ ಅದನ್ನ ಮುಂದುವರಿಸುವ ಶಕ್ತಿ/ಇಚ್ಛೆ ಇಬ್ಬರಿಗೂ ಇರೋದಿಲ್ಲ! ಮತ್ತೆಲ್ಲಾ ಶುದ್ಧ..ನಿರ್ಮಲ ಅಷ್ಟೇ !
ಪುಟ್ಟ ಹೆಣ್ಣುಮಗಳೊಬ್ಬಳು ಒಂದಷ್ಟು ದಿನಗಳ ಹಿಂದಷ್ಟೇ ಮದುವೆಯಾದವಳು , ಮೊನ್ನೆ ಮೊನ್ನೆ ಮಗುವನ್ನ ಹೆತ್ತವಳು , ಮಾತಾಡ್ತಾ ಮಾತಾಡ್ತಾ ಎಲ್ಲರಿಗೂ ನಿಮ್ಮ ಹಾಗೆ ಬದುಕು ಸಿಗೋದಿಲ್ಲ ಅಮ್ಮ, ಅತ್ತೆ ಮನೆಯಲ್ಲಿ ಕಷ್ಟ ಎಂದು ನೊಂದುಕೊಂಡಳು .... ಮನಸ್ಸಿಗೆ ನೋವಾಯತು .
ಬದುಕು ಯಾರಿಗೂ ಹಾಗೆ ಪುಕ್ಕಟೆ ಸಿಗೋದಿಲ್ಲ , ಕಟ್ಟಿಕೊಳ್ಳಬೇಕು, ಪಡೆದುಕೊಳ್ಳಬೇಕು , ಕೆಲವಕ್ಕೆ ಬೆಲೆ ತೆತ್ತು, ಕೆಲವನ್ನ ಪ್ರೀತಿಯಿಂದ, ಕೆಲವನ್ನ ಹಠದಿಂದ , ಕೆಲವನ್ನ ಛಲದಿಂದ !
ಬದುಕು ಬಾನಿನಂತೆ . ಆಗಾಗ ಮೋಡ ಕವಿದು ಮಳೆ ಸುರಿದರೂ ಮತ್ತೊಮ್ಮೆ ನೀಲಿ ಮೂಡುವಂತೆ 
I smile with everything Not because I am strong, because I know the value of MY tears ))
ಸುಂಸುಮ್ನೆ ಬರೀಬೇಕು ಅನಿಸ್ತು )

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...