Sunday, 24 July 2011

ಮುಂಜಾವು


ನಸುಬೆಳಕಿನ
ತುಸುಕತ್ತಲ ...
ಇಳೆಗೆ ರವಿಯ ಉಸಿರು ಸೋಕೋ ವೇಳೆ

ಮನೆಯ ಮುಂದಿನ ಮರದ ಮೇಲೆ ..
ಪುಟ್ಟ ಹಕ್ಕಿಗಳ ಪ್ರಣಯ ಲೀಲೆ...

ಒಲವಿನ ಅದು..ಚೆಲುವಿನ ಇದು...
ಪಿಸು ಮಾತು...ಒರೆ ನೋಟ
ನಲಿವು, ಆಸೆ, ನಂಬಿಕೆ....
ಉಲ್ಲಾಸದ ಲಹರಿ...
ಪ್ರೇಮದ ಪ್ರತಾಪ...

ಯಾವುದೊ ಕಾಣದ ಸೂತ್ರಕ್ಕೆ ಸಿಕ್ಕಂತೆ
ನಗುತ್ತ ಎದ್ದು ಹೂಯ್ತೊಂದು ಹಕ್ಕಿ...

ಒಡಲೊಳಗೆ ಕದಲುತ್ತ...
ಮನದೊಳಗೆ ಕರಗುತ್ತಾ...
ನಭದಿಂದ ಧರೆಗಿಳಿದ
ಇನ್ನೊಂದು ಹಕ್ಕಿ..
ಕಾಯುತ್ತಿದೆ..
ಮತ್ತೊಂದು ಬೆಳಗಿಗಾಗಿ...
ಅದೇ ಬೆಳಕಿಗಾಗಿ...

ನಾನೂ ಕಾಯುತ್ತಿದ್ದೇನೆ ನಾಳಿನ ಬೆಳಗಿಗಾಗಿ..
ಪುಟ್ಟ ಹಕ್ಕಿಗಳ ಮಿಲನಕ್ಕಾಗಿ..
ಮಧುರ ಚಿಲಿಪಿಲಿಗಾಗಿ..

ಕೇಳ ಬಾರದಿತ್ತೆ ಈ ಪ್ರಶ್ನೆ...??

ಹದಿನಾಲ್ಕು ವರುಷ
ಅಯೋಧ್ಯೆಯ ಸೊಸೆಯಾಗಿ...
ಲಕ್ಷ್ಮಣನ ಸತಿಯಾಗಿ..
ಕಟಾಂಜನದ ಮೇಲೆ ಕೈ ಇಟ್ಟು..
ತವರುಮನೆಯ ಸುಖವ ನೆನೆದುಕೊಂಡೇ..
ಮದುವೆಯ ಮುದದ ನೆನಪಲ್ಲಿ ಮನವ ತಣಿದುಕೊಂಡೆ
ಗಿಳಿ ಗೊರವಂಕಗಳೊಡನೆ ಕನಸ ಹಂಚಿಕೊಂಡೆ...
ಆಗೊಮ್ಮೆ ಈಗೊಮ್ಮೆ ಈ ಮದುವೆಯ ವಜ್ರದುಂಗುರವ ತಿಂದು
ಇಹವ ತೊರೆಯಬೇಕೆಂದುಕೊಂಡೆ..
ಆದರೀ ಉಂಗುರದ ಒಡೆಯನ ಬಿಸುಪು, ನೆನಪೇ ನನ್ನ ಹಿಡಿದಿಟ್ಟಿತ್ತು...
ಹದಿನಾಲ್ಕು ವರ್ಷಗಳ ನಂತರ
ಕಟಾಂಜನದ ಮೇಲೆ ಕೈ ಇಟ್ಟು ಒರಗಿ
ನೋಡುತ್ತಿದ್ದೇನೆ ಲಕ್ಷ್ಮಣನನ್ನು
ಕೊಂಚ ಕೃಶ ಶರೀರ ,ಒಂದಿನಿತೂ ಕುಂದದ ಕಣ್ಣ ಹೊಳಪು
ಇವರೇ ಅಲ್ಲವೇ ನನ್ನ ಕೈ ಹಿಡಿದು ಆಯೋಧ್ಯೆಗೆ ಕರೆತಂದವರು....
ಮೈಯಲ್ಲಿ ಏನೋ ಬಿಗಿತ..
ಕೈಯಲ್ಲಿ ಕಂಪನ..
ಮನದಲ್ಲಿ ತವಕ...
ಗಂಡನನ್ನು ಕಾಯುತ್ತಿರುವ
ಈಗಷ್ಟೇ ಮದುವೆಯಾದ ಹೆಣ್ಣು ನಾನು
ಹದಿನಾಲ್ಕು ವರ್ಷ ಕಳೆದದ್ದು ದೇಹಕ್ಕೆ ಮಾತ್ರ...
ಆದರೆ....
ಲಕ್ಷ್ಮಣನಿಗೆ ರಾಮನ, ಮಹಾಸತಿ ಸೀತೆಯ
ಪ್ರೇಮ, ವಿರಹ, ಮಿಲನಗಳ
ಕಾಡಿನ ಕಥೆ, ವ್ಯಥೆಯದೆ ವಿಷಯ...
ವನವಾಸ ರಕ್ಕಸಯುದ್ಧ ಅವನನ್ನು ಪ್ರೌಡನನ್ನಗಿಸಿದೆ ..
ಅಣ್ಣ ಅತ್ತಿಗೆಯರ ಸೇವೆ, ದೇವರ ಧಾನ್ಯ, ವನವಾಸ ಅವನನ್ನು ನಿರ್ಲಿಪ್ತನನ್ನಾಗಿಸಿದೆ
ಇಂದಿಗಿಂತ ಆ ಕಾಯುತ್ತಿದ್ದ ಹದಿನಾಲ್ಕು ವರ್ಷವೇ ಹಿತ ಎನಿಸುತ್ತಿದೆ..
ಹಿಡಿದಿಡಲಾರದೆ ಕೇಳಿ ಬಿಟ್ಟೆ
"ಈ ಹದಿನಾಲ್ಕು ವರ್ಷ ನನ್ನ ನೆನಪೇ ಆಗಲಿಲ್ಲವೇ ಲಕ್ಷ್ಮಣ "
ಸ್ತಂಭಿಬುತನಾದ ಲಕ್ಷ್ಮಣ .....
ಕಣ್ಣoಚಲ್ಲಿ ನೀರತುಂಬಿ ನಾ ಕೇಳಿದ ಪರಿಗೆ...
ಅವನ ಕಣ್ಣಲ್ಲಿ ಚದಪದಿಕೆಯೇ ...ಇಲ್ಲ ತಪ್ಪಿತಸ್ಥ ಭಾವವೇ...
ಅಯೋಧ್ಯೆಯ ಸೊಸೆಯಾಗಿ...
ಲಕ್ಷ್ಮಣನ ಮಡದಿಯಾಗಿ...
ಸೀತೆಯ ತಂಗಿಯಾಗಿ...
ನಾ ಕೇಳಿದ್ದು ತಪ್ಪೇನೋ ..
ಆದರೆ...ಊರ್ಮಿಳೆಯಾಗಿ, ಹೆಣ್ಣಾಗಿ,ವಿರಹಿಯಾಗಿ
ನಾ ಕೇಳಿದ್ದು ತಪ್ಪೇ......?????

ಅಲೆಯೊಂದರ ಸ್ವಗತ


ಅವನು  ಬಿರುಸಿನ ಕಡಲ ಕಿನಾರೆ...
ಅವನ ಪ್ರೇಮ ಕನ್ನಿಕೆ  ನಾನು...

ಅದೋ ಅಲ್ಲಿರುವ ಅನಂತ ದಿಗಂತದಾಚೆ ನನ್ನ ಉಗಮ....
ಅವನ ಚಿನ್ನದ ಮರಳ ಮಡಿಲಲ್ಲಿ ನನ್ನ ಅವನ ಸಂಗಮ...

ನನ್ನ ಏರು ಉನ್ಮಾದಕ್ಕೆ ಅವನ ಸಂಯಮವೇ ಉತ್ತರ....ನನ್ನ ತುಡುಗುತನಕ್ಕೆ ಅವನ ಘಾಂಬೀರ್ಯದ ಮಂತ್ರ..
ಅವನಿಗಾಗಿ ಕಡಲಾಳದಿಂದ ನಾನು ಹೊತ್ತು ತರುವೆ ಮುತ್ತು..
.ಅದಕ್ಕೂ ಅವನ ಮೌನ  ನಗುವಿನ ಗತ್ತು...

ಕತ್ತಲು ಧರೆಯ ಅಪ್ಪಿದಾಗ....ಅವನು ನಿದ್ರೆಗೆ  ಜಾರಿದಾಗ....
ನಾನು ಹಾಡುತ್ತೇನೆ ಅವನಿಗಾಗಿ......
ಹಾಡಾಗಿ ಬಿಡುತ್ತೇನೆ ಅವನಿಗಾಗಿ....
ನನ್ನ ಹಾಡು ಎಂದು ಮುಗಿಯದ ಹಾಡು....
ನಾನು ಅವನ ಪ್ರೇಮಿ....
ಅವನಿಗಾಗಿ ಹಾಡುತ್ತೇನೆ...
ಅವನು ಮೌನವಾಗೇ ನನಗಾಗಿ ಮಿಡಿಯುತ್ತಾನೆ...

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...