Thursday 30 November 2017

ಕಥೆ ಹೇಳಿ ತುಂಬಾ ದಿನಗಳಾಗಿತ್ತು ಅಲ್ವೇ  ಇಲ್ಲೊಂದು ಕಥೆಯಿದೆ ನೋಡಿ 
ಒಂದೂರು, ಊರಲ್ಲಿ ಒಂದೇ ಬಾವಿ , ಕುಡಿಯುವ ನೀರಿಗೆ ಎಲ್ಲಾ ಅಲ್ಲಿಂದಲೇ ನೀರು ತೆಗೆದುಕೊಳ್ತಾ ಇದ್ರು. 
ಒಮ್ಮೆ ಆ ಬಾವಿಯೊಳಗೆ ಒಂದು ನಾಯಿ ಬಿದ್ದು ಹೋಯ್ತು. ನೋಡಿದ್ರೋ ಅಥವ ನೋಡಲಿಲ್ಲವೋ -ಒಟ್ಟಾರೆ ಆ ನಾಯಿಯನ್ನ ಯಾರೂ ಹೊರ ತೆಗೆಯಲಿಲ್ಲ. ನಾಯಿ ಅಲ್ಲೇ ಸತ್ ಹೋಯ್ತು. ಒಂದೆರಡು ದಿನಗಳಾದ ಮೇಲೆ ನೀರು ನಾರತೊಡಗಿತು. ಬಳಸಲು ಅನರ್ಹವಾಗ್ತಾ ಹೋಯ್ತು. ಆದರೂ ನಾಯಿಯನ್ನ ಎತ್ತಬೇಕೆಂದು ಯಾರಿಗೂ ಅನಿಸಲಿಲ್ಲ ! ಜನ ಕುಡಿಯುವ ನೀರಿಗೆ ಒದ್ದಾಡತೊಡಗಿದರು. ಕಡೆಗೆ ಊರ ಹೊರಗಿನ ದೇಗುಲದ ಬಳಿಯಿದ್ದ ಹಿರಿಯ ಸನ್ಯಾಸಿಯೊಬ್ಬರನ್ನ ಪರಿಹಾರ ಕೇಳಿದ್ರು. ಸನ್ಯಾಸಿ 'ಒಂದಷ್ಟು ಗಂಗಾ ಜಲ ತಂದು ನೀರಿಗೆ ಹಾಕಿ, ನೀರಿನ ಪಾವಿತ್ರ ಹಿಂದಕ್ಕೆ ಬರುತ್ತದೆ ' ಅಂದ. ಜನ ಹಾಗೆ ಮಾಡಿದ್ರು. ಆದರೂ ನೀರು ಕುಡಿಯಲು ಯೋಗ್ಯವಾಗಲಿಲ್ಲ. ಜನ ಮತ್ತೆ ಸನ್ಯಾಸಿಯನ್ನ ಕೇಳಿದಾಗ ಒಂದಷ್ಟು ಹೋಮ, ಹವಾನ ಮಾಡಿಸಿ' ಅಂದ . ಜನ ಅದನ್ನೂ ಮಾಡಿದರು.ನೀರು ಶುದ್ಧವಾಗಲಿಲ್ಲ. ಮತ್ತೊಮ್ಮೆ ಕೇಳಿದಾಗ ಸನ್ಯಾಸಿ 'ನೀರಿಗೆ ಒಂದಷ್ಟು ಸುಣ್ಣ ಹಾಕಿ ಮತ್ತೆ ತಿಳಿಯಾಗಬಹುದು' ಅಂದ . ಜನ ಮತ್ತೆ ಹಿಂದಿರುಗಿ ಬಂದಾಗ ಸನ್ಯಾಸಿ ಅಚ್ಚರಿಗೊಂಡ . 'ಇನ್ನೂ ನೀರು ತಿಳಿಯಾಗಲಿಲ್ಲವೇ?' ಎಂದಾಗ ಜನರು 'ಇಲ್ಲಾ ' ಎಂದರು. ಸನ್ಯಾಸಿ 'ಅಲ್ಲಾ, ನೀವು ಸತ್ತ ನಾಯಿಯನ್ನ ಹೊರ ತೆಗೆದಿರಿ ತಾನೇ"? ಎಂದು ಪ್ರಶ್ನಿಸಿದ. ಈಗ ಜನ 'ನೀವು ಹೇಳಲೇ ಇಲ್ಲವಲ್ಲ ಸ್ವಾಮೀ ' ಎಂದರು .ಸನ್ಯಾಸಿ ನಕ್ಕುಬಿಟ್ಟ . 'ಕೊಳೆಯನ್ನೇ ತೆಗೆಯದೆ ಶುದ್ದಿ ಮಾಡಲು ಹೇಗೆ ಸಾಧ್ಯ' ಎಂದ . ಮೊದಲು ಸತ್ತ ನಾಯಿಯನ್ನ ಹೊರಹಾಕಲು ಹೇಳಿದ ....
ಮನದ ಮಲಿನವನ್ನ ತೆಗೆಯದೆ ಮನಸ್ಸಿಗೆ ಶಾಂತಿ ಎಲ್ಲಿಂದ ಅಲ್ವೇ? ಹಚ್ಚಿದ ಕಡ್ಡಿ ಬೇರೆಯವರನ್ನಸುಡುವ ಮುನ್ನ ತನ್ನನ್ನು ತಾನೇ ಸುಟ್ಟುಕೊಂಡಿರುತ್ತದೆ ಅದಕ್ಕೆ ಅರಿವಿಲ್ಲದೆ !
ಹಿರಿಯ ಗೆಳೆಯರೊಬ್ಬರು ಕಳಿಸಿದ್ರು. ಅನುವಾದಿಸಿ ಹಂಚಿಕೊಂಡೆ ಅಷ್ಟೇ 

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...