Thursday 30 November 2017

ಅಂದೆಂದೋ ನನ್ನ 
ನೋಯಿಸಿದ್ದವರು 
ನನ್ನೆದಿರು ಬಂದು 
ಅಸಹಾಯಕರಂತೆ ನಿಂತಾಗ 
ನಾ ಅನುಭವಿಸಿದ 
ಯಾರಿಗೂ ಕಾಣದಂತೆ
ಸೆರಗಿನೊಳಗೆ ಬಚ್ಚಿಟ್ಟಿದ್ದ ನೋವೆಲ್ಲಾ 
ಒಮ್ಮೆಗೇ ಇಣುಕಿಬಿಡುತ್ತದೆ....... 
ಅಂದು 
ಒತ್ತಟ್ಟಿಗೆ 
ಮುಚ್ಚಿಟ್ಟಿದ್ದ ಅಸಹನೆಯೆಲ್ಲಾ 
ಇಂದು ಹೊರತೂರಿಬಿಡಲೇ ಅನಿಸುವಾಗ
ಇದು 
ಅಂದಿನ ನನ್ನದೇ ಅಸಹಾಯಕತೆಯ 
ಮತ್ತೊಂದು ರೂಪವೇನೋ ಅನಿಸಿ
ಅಳುವಿಗೆ ಭುಜ ನೀಡಿಬಿಡುತ್ತೇನೆ .... 
ಅವರ ಮೊಗದ ಅಪರಾಧೀಭಾವ ಕಂಡು 
ನನ್ನ ಒಳಮನ ಸಂತ್ವಾನಗೊಳ್ಳುತ್ತಿದೆಯೇೆ?? !!!! 
ಅಲ್ಲೆಲ್ಲೋ ನನ್ನ ಮನಸ್ಸು ಹೇಳುತ್ತದೆ 
ನೀ ಮೇಲೆ ಕಾಣುವಷ್ಟು ಒಳ್ಳೆಯವಳಲ್ಲ !!
ನೀ ಒಳ್ಳೆಯವಳಲ್ಲ .!!!!
ಹೌದೇನೋ 
ಆದರೂ 
ನಾನೂ ಮನುಷ್ಯಳೇ ತಾನೇ ಎಂದು ತಿಪ್ಪೆ ಸಾರಿಸಿಬಿಡುತ್ತೇನೆ .. 
ಒಳ್ಳೆಯವಳೆಂಬ ಮುಖವಾಡ ತೊಟ್ಟು ..... !!

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...