Wednesday 9 August 2017

ನೆನ್ನೆ ಹೂ ತರಲು ನಮ್ಮ ಕೆ ಆರ್ ಮಾರುಕಟ್ಟೆಗೆ ಹೋಗಿದ್ವಿ . ಹೂವಿನ ಬೆಲೆ ಸ್ವಲ್ಪ ಜಾಸ್ತಿನೇ ಇತ್ತು. ಮಂಜುಗೆ ಹೇಳ್ದೆ ' ಈಗ್ಲೇ ಹಿಂಗಾದ್ರೆ ಇನ್ನ ಹಬ್ಬಕ್ಕೆ ಅಂತೂ ಕೇಳೋದೇ ಬೇಡವೇನೋ ಅನ್ನೋ ಅಷ್ಟು ಜಾಸ್ತಿ ಆಗುತ್ತೆ ಅಲ್ವ ಮಂಜು' . 'ಒಂದು ಬ್ಯಾಗ್ ಹೋಲಿಸಿ ಕೊಡ್ತೀನಿ ಬಿಡವ್ವಾ ' ಅಂದ್ರು.... ರೇಗಿಹೋಯ್ತು ! 
ನಮ್ಮ ರಸ್ತೆಗೆ ಬೆಳಿಗ್ಗೆಬೆಳಿಗ್ಗೆ ಒಬ್ರು "ಲೇಡಿ' ವಾಕಿಂಗ್ಗೆ ಬರ್ತಾರೆ . ಹೆಗಲಿಗೆ ಒಂದು ಚೀಲ ತಗುಲಿಸಿಕೊಂಡು ಹೋಗ್ತಾರೆ. ಯಾರೂ ಇಲ್ಲದೆ ಇದ್ರೆ ಯಾರ ಮನೆಯ ಮುಂದೆ ಹೂ ಇದೆಯೋ ಅಲ್ಲಿಂದ "ಕೇವಲ" ಒಂದೋ ಎರಡೋ ಕಿತ್ಕೊಂಡು ಟಕ್ ಅಂತ ಚೀಲಕ್ಕೆ ಹಾಕಿ ಏನೂ ನಡೆದೇ ಇಲ್ಲವೇನೋ ಎನ್ನುವಂತೆ ವಾಕಿಂಗ್ ಮುಂದುವರೆಸುತ್ತಾರೆ . ಅದೆಷ್ಟು ಚೆಂದದ reflex action ಅಂತೀರಾ ... ಮೂರು ಬೀದಿಯ ವಾಕಿಂಗ್ ಮುಗಿಸೋ ಹೊತ್ತಿಗೆ ಆವತ್ತಿನ ಪೂಜೆಗೊ, ಷೋಗೆ ಇಡೋದಕ್ಕೋ ಹೂವಿನ ವ್ಯವಸ್ಥೆ ಆಗಿಹೋಗಿರುತ್ತೆ . ಬ್ಯಾಗ್ ತಂದ ಕಾರಣ ಹಾಲು ತೆಗೆದುಕೊಳ್ಳಲು ಅನಿಸೋ ಹಾಗೆ ಕಡೆಗೆ ಬ್ಯಾಗಲ್ಲಿ ಮೂಲೆಯ ಡೈರಿಯಿಂದ ಹಾಲು ಸೇರುತ್ತದೆ! ಮತ್ತೆ ಮೂರು ರಸ್ತೆಗಳ ಆಚೆಯ ಆಕೆಯ ಅಪಾರ್ಟ್ಮೆಂಟ್ ಸೇರಿಕೊಳ್ಳುತ್ತಾರೆ . (ನಾ ಲೇಡಿ ಅಂದಿದ್ದು ಯಾಕೆ ಅಂತ ಗೊತ್ತಾಯ್ತಲ್ವಾ !!) ಮಂಜುನಾಥ ಪ್ರಭುಗಳು ಆ ಸಮಯದಲ್ಲಿ ಡ್ಯೂಟಿಗೆ ಹೋಗುವ ಮೊದಲು ಕಾರು ಒರೆಸಿ ಹೂ ಹಾಕ್ತಾ ಇರ್ತಾರೆ... ಆಕೆಗೆ ಕಾರಿನ ಮರೆಯಲ್ಲಿರೋರು ಕಾಣೋದಿಲ್ಲ ! ಒಮ್ಮೆ ಹಾಗೇ ಕೀಳುವಾಗ ಇವರಿದ್ದಿದ್ದನ್ನ ನೋಡಿ ಮುಜುಗರಗೊಂಡು 'ಯಾವ ಹೂವು ಅಂತ ನೋಡಿದೆ ಅಷ್ಟೇ ಸಾರ್' ಅನ್ದರಂತೆ ! ನನ್ನ ಪತಿದೇವರು ಸುಮ್ನೆ ಹಲ್ಲು ಬಿಟ್ಟರಂತೆ !! (ಇನ್ನೇನು ಮಾಡೋಕೆ ಆಗುತ್ತೆ ! ಹೆಣ್ಣು ಮಕ್ಕಳನ್ನ ಬೈಯೋಕೆ ಆಗುತ್ತಾ ಅಂತಾರೆ!!! ಅಲ್ವ ಮತ್ತೆ!!) ...
ನನಗೆ ರೇಗಿದ್ದು ಯಾಕೆ ಅಂತ ಗೊತ್ತಾಯ್ತಲ್ವಾ ))))).

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...