Saturday 18 June 2011

ಶಬರಿ


















ನಿನ್ನೊಡನೆ ನಾನು..
ನನ್ನೊಡನೆ ನೀನು ..
ಎಂದ ಅವರು ಅವರ ಹಾದಿಯಲ್ಲೇ ..
ಕೊನೆಯವರೆಗೂ ಸಾಗಬೇಕಿತ್ತು

ನಡುವೆ ಹಾದಿ ಕವಲಾಯ್ತು
ಅವನ ಹಾದಿ ಅವನದಾಯ್ತು.
ಅವಳ ದಾರಿ ಅವಳದು
ಬೆಳಕು ಕಳೆದು ಹೋಯ್ತು ..
ಗುರಿ ಮುಟ್ಟುವ ಮೊದಲೆ ಪಯಣ ಕೊನೆಯಾಯ್ತು

ಆಕೆಗೆ ಅವನಲ್ಲಿದ್ದ ಪ್ರೀತಿಯ ಹಂಬಲ
ಅವಳನ್ನು ಶಬರಿಯನ್ನಾಗಿಸಿತು
ವರುಷಗಳುರುಳಿದರೂ
ಕಂಬನಿ ನಿಲ್ಲದಾಯ್ತು
ನೆನಪುಗಳು ಮಾಸದಾಯ್ತು...

ಎಲ್ಲಾ ಕಂಬನಿಗಳಿಗೂ ಅಣೆಕಟ್ಟ ಹುಡುಕಬೇಕು..
ಎಲ್ಲಾ ನೆನಪುಗಳಿಗೂ ಸಮಾಧಿ ಕಟ್ಟಲೆಬೇಕು
ಆದರೆ ಸಮಾಧಿಗೂ ಅಣೆಕಟ್ಟಿಗೂ ಹೊಂದುವ
ಕಲ್ಲು ಅವನಲ್ಲೇ ಉಳಿದು ಹೋಯಿತು
ನನಪುಗಳು ಕಂಬನಿಗಳು ಅವಳ ಸ್ವತ್ತಾದವು
ಆದರು ಅವಳು ಕಾಯುತಿದ್ದಾಳೆ ಶಬರಿಯಾಗಿ..
ಅವನಿಗಾಗಿ..

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...