Thursday 16 June 2011

ಸುಪ್ತಗಾನ

 ಅಲ್ಲಿ ಮಳೆಯಂತೆ
ಬಿಡದೆ ಸುರಿವ ಮಳೆಯಂತೆ
ಹನಿ ಹನಿಯಲ್ಲೂ ಇಣುಕುತ್ತಿರುವುದು  ನನ್ನ ನೆನಪೇ ಅಂತೆ
 ಮುಸ್ಸಂಜೆ ಮಬ್ಬುಗತ್ತಲಲ್ಲಿ 
ದೇವರಿಗೊಂದು ದೀಪ ಬೆಳಗುವಲ್ಲಿ
ಕಂಡ ನೆರಳಲಿ ಹುಡುಕಿದ್ದು ನನ್ನ ಚಿತ್ರವನಂತೆ ...
ಚಂದ್ರನೇ ಇಲ್ಲದ ಆಗಸದಲ್ಲಿ..
ಸಣ್ಣ ಹನಿ ಬೀಳುವಲ್ಲಿ.
ಧ್ವನಿಸಿದ್ದು  ನನ್ನ ಕಾಲಂದುಗೆಯ ಸದ್ದಂತೆ ..

ಆದರೆ ...
ಇಲ್ಲಿ ಮಳೆ ಇಲ್ಲ ...
ನಸುಗತ್ತಲ ಇಳಿಸಂಜೆಯಲ್ಲಿ..
ದೇವರ ಮುಂದೊಂದು ಹಣತೆ ಬೆಳಗುತ್ತಾ
ಮೋಡದಲ್ಲಡಗಿದ ಚಂದಿರನ ಹುಡುಕುತ್ತ ...
ಮುಂಬಾಗಿಲ ಬಳಿಯ ಹೆಜ್ಜೆಯ ದನಿಗೆ ಕಾಯುತ್ತ...
ನಿನ್ನ ನೆನಪಿಗೊಂದು ರಾಗಮಾಲಿಕೆ ಬರೆಯುತ್ತಿರುವ
ಮನದಲ್ಲಿ ಮಾತ್ರ
ನಿನ್ನ ಸುಪ್ತಗಾನದ ಸದ್ದು....
ಇಳೆಗೆ ಕಳೆಯ ತಂದ ಮಳೆಯ ಸದ್ದು!!!!

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...