Thursday, 2 February 2017

ನೆನ್ನೆ ಕೃತಿ, ಮಂಜು,ನಾನು ಒಂದಷ್ಟು ಕೆಲಸಗಳ ನಿಮಿತ್ತ ಹೊರಗೆ ಹೋಗಿದ್ವಿ .ಕೆಲಸ ಮುಗ್ಯೋ ವೇಳೆಗೆ ಮಧ್ಯಾಹ್ನ ಆಗ್ಹೋಯ್ತು , ಸರಿ ಪುಟ್ಟಿನೂ ನಮ್ ಜೊತೇನೆ ಇದ್ದಾಳಲ್ಲ ಅಲ್ಲೇ ಎಲ್ಲಾದ್ರೂ ಊಟ ಮಾಡೋಣ ಇನ್ ಮನೆಗೆ ಹೋಗಿ ಮಾಡೋ ಅಷ್ಟ್ರಲ್ಲಿ ಲೇಟ್ ಆಗುತ್ತೆ ಅಂತ ಅಲ್ಲೇ ಒಂದ್ ಕಡೆ ಊಟಕ್ಕೆ ಹೋದ್ವಿ . (ನನಗೆ ಮಂಜುಗೆ ಇಂತಹ ಹೋಟೆಲ್ಲೇ ಬೇಕು ಅಂತೇನಿಲ್ಲ . ಯಾವುದಾದ್ರೂ ಸಣ್ಣ ಪೆಟ್ಗೆ ಅಂಗಡಿ ಸಿಕ್ಕಿದ್ರು ಟೀನೋ ಜ್ಯೂಸೊ ಕುಡಿದು ಮನೆಗೆ ಬಂದ್ ಬಿಡ್ತೀವಿ with no prejudice.. ಆದ್ರೆ ಪುಟ್ಟಿ ಇದ್ಲಲ್ಲ , ಅದೂ ಇತ್ತೀಚೆಗೆ ಅವಳು ನಮ ಜೊತೆ ಬರೋದು ಅಪರೂಪ ಅಂತ ಹೋಟೆಲ್ಗೆ ಹೋದ್ವಿ ) ಸರಿ ಪುಟ್ಟಿ ಊಟ ತಗೊಂಡಳು, ಮಂಜು ಪಲಾವ್ ತಗೊಂಡ್ರು, ನಾ ಮೊಸರನ್ನ(ಅದು ನನ್ನ fav ಮಧ್ಯಾಹ್ನದ ಊಟ) ತಗೊಂಡೆ .. ಈ ತರಕಾರಿನಾ ? ಇದು ಬೇಡ ಅದು ಬೇಡ ಅಂತಲೇ ಒಂಚೂರು ತಿಂದ್ಳು. ಈ ಸ್ವೀಟ್ ನೀ ತಿನ್ನು ಅಂದ್ಳು , ಮೊಸರು ಅವರಪ್ಪನಿಗೆ ಕೊಟ್ಲು .. ಅಂತೂ ತಿಂದ್ಳು !!
ರಾತ್ರಿ ಊಟ ಮಾಡ್ತಾ ಇದ್ವಿ 'ಮಧ್ಯಾಹ್ನ ತಿಂದ ಆ ಸ್ವೀಟ್ ಅಲ್ಲಿ ಸ್ವೀಟೆ ಇರ್ಲಿಲ್ಲ ಕಣ್ ಮಗ' ಅಂದೇ ಪುಟ್ಟಿಗೆ .." ಅದ್ಕೆ ನಾ ನಿನಗೆ ಕೊಟ್ಟಿದ್ದು !!!' ಅಂದ್ಳು. 'ಅಯ್ಯೋ ಕಪಿ, ಟೇಸ್ಟ್ ಮಾಡಿ ಕೊಟ್ಯಾ !!? ನಾನು ನನ್ ಗಂಡ ಹೋಟೆಲ್ಗೆ ಊಟಕ್ಕೆ ಹೋದ್ರೆ, ನನ್ ಗಂಡ ಊಟ ತಗೊಂಡ್ರೆ ಮೊದಲು ಸ್ವೀಟ್, ಸೊಪ್ಪಿನ ಪಲ್ಯ ಇದ್ರೆ ನನಗೆ ಕೊಟ್ಬಿಡ್ತಾನೆ ಗೊತ್ತಾ, ನೀ ಸರಿ ಇಲ್ಲಾ ಮಗ " ಅಂದೆ 'U kno Maa, ಮಹಾರಾಣಿ ಊಟ ಮಾಡೋಕೆ ಮೊದ್ಲು ಯಾರಾದ್ರೂ ಊಟ ಸರಿ ಇದ್ಯಾ , ವಿಷಗಿಷ ಹಾಕಿದ್ದಾರೆ ಅಂತ ಪರೀಕ್ಷೆ ಮಾಡಿ ಕೊಡ್ತಾರೆ, ನೀ ಹಂಗೆ ನನಗೆ , i Love U kano " ಅಂತ ಕಿವಿ ಮೇಲೆ ಹೂವಿಟ್ಲು.. " ನಿನ್ನ ಗಂಡಂಗೆ ಸ್ವೀಟ್ಸ್ ಇಷ್ಟ ಇಲ್ಲ ಅದ್ಕೆ ಮೊದ್ಲೇ ಕೊಟ್ಟಬಿಡ್ತಾನೆ ಬಿಡು ಅದೇನ್ ಮಹಾ 'ಅಂದ್ಳು 
ಮಾತಾಡೋಕೆ ಇರೋ ಅಷ್ಟ್ ಬುದ್ದಿ ಓದೋದ್ರಲ್ಲಿ ತೋರಿಸಿದ್ರೆ ನನ್ ಐಕ್ಳು ಇಷ್ಟ್ ಹೊತ್ತಿಗೆ ಎಲ್ಲೋ ಇರ್ತಿದ್ವು ..... 
ಮಾತನಾಡುವುದು ಕೂಡಾ ಕಲೆ ಅಂತೆ . ನನಗಂತೂ ಬರೋದಿಲ್ಲ .. ಇವಕ್ಕೆ ಬಂದಿದೆ ಅಂತ ಖುಷಿ ಪಡ್ಬೇಕು ಅಷ್ಟೇಯಾ :))))))

Wednesday, 1 February 2017

ಚಿಕ್ಕವರಿದ್ದಾಗ ಬಸ್, ರೈಲು, ಅಥವಾ ಕಾರಲ್ಲಿ ಹೋಗೋವಾಗ ಗಿಡಮರಗಳು, ರಸ್ತೆ , ಅಲ್ಲೆಲೋ ಕಾಣುವ ವಿಂಡ್ಮಿಲ್, ಎಲ್ಲಾ ಹಿಂದಕ್ಕ್ಕೆ ಹೋದಂತೆ ಅನಿಸ್ತಾ ಇತ್ತು. ಹಾಗೆಲ್ಲ ಅದು ಹಿಂದೆ ಹೋದಂತೆ ಅದೇನೋ ವಿಸ್ಮಯ !! ಅದ್ಯಾಕೆ ಹಾಗೆ ಹಿಂದಕ್ಕೆ ಹೋಗ್ತಾ ಇದೆ ಅಂತ. 'ನಾವ್ ಮುಂದಕ್ಕೆ ಹೋಗ್ತಾ ಇದೀವಲ್ಲ ಅದಕ್ಕೆ ಹಾಗೆ ಅನಿಸುತ್ತೆ ಮಗ ' ಅಂತ ಅಮ್ಮ ಹೇಳಿದ್ರೂ ಅದೇನೋ ಅರ್ಥವಾಗದಂತೆ. ಒಂದಷ್ಟು ದೊಡ್ಡವರಾಗಿ ವಿಜ್ಞಾನ ಓದ್ತಾ ಓದ್ತಾ ಮನಸ್ಸು ಅದಕ್ಕೆ ತೆರದುಕೊಳ್ತಾ ಹೋಯ್ತು.
ಚಾಮುಂಡಿ ಬೆಟ್ಟಕ್ಕೆ ಹೋಗ್ತಾ, ಕಾರ್ ಡ್ರೈವ್ ಮಾಡ್ತಾ ಮಾಡ್ತಾ, ಮಂಜು ಅಂದೆಂದೋ ಲೂನಾದಲ್ಲಿ ಚಾಮುಂಡಿಬೆಟ್ಟಕ್ಕೆ ಕರ್ಕೊಂಡು ಹೋಗಿದ್ದನ್ನ ಸ್ವಾರಸ್ಯವಾಗಿ ರೋಮ್ಯಾಂಟಿಕ್ ಆಗಿ ಹೇಳ್ತಾ ಇದ್ರೆ ಬೆಟ್ಟದಿಂದ ಇಳಿಯುವಾಗ ಸಿಗುವ ಅದೇ ಗಿಡಮರಗಳಂತೆ ಹಿಂದಕ್ಕೆ ಹೋದ ಕೆಲವು ಸಮಯಗಳೂ ಬರುವಂತಿದ್ದರೆ ಎನಿಸಿದ್ದು ಸುಳ್ಳಲ್ಲ !! And then he said 'ನಾ ರೆಡಿ !!ಲೂನದಲ್ಲಿ ತಾನೇ ಕರ್ಕೊಂಡ್ ಹೋಗ್ತೀನಿ ಬಿಡು!! ಆಗ ಕೂಡ ಎಲ್ರೂ 'ಇದೇನ್ ಹಿಂಗ್ ಸುತ್ತುತ್ತವೆ ಇವೆರಡು ಅಂತ ನಮ್ಮನ್ನೇ ನೋಡ್ತಿದ್ರು !! ಈಗ್ಲೂ ನಮ್ಮನ್ನೇ ನೋಡ್ತಾರೆ ಇವ್ರಿಗೇನ್ ಬಂತು "ಈಗ" ಲೂನಾದಲ್ಲಿ ಸುತ್ತೋಕೆ ಅಂತ'!!! And I smile as ever:)))))))))))))
ಒಂದು ಹಳೆಯ ಕನ್ನಡ ಚಲನ ಚಿತ್ರ ಸಾಕ್ಷಾತ್ಕಾರ. ಅನೇಕ ದಿಗ್ಗಜರು ಆ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ .. ಪುಟ್ಟಣ ಕಣಗಾಲ್, ನಾಗೇಂದ್ರ ರಾಯರು, ಪೃಥ್ವಿ ರಾಜ್ ಕಪೂರ್ , ರಾಜಕುಮಾರ್, ಜಮುನ, ಬಾಲಣ್ಣ , ವಜ್ರಮುನಿ, ಪಿ. ಬಿ. ಶ್ರೀನಿವಾಸ್, ಸುಶೀಲ , ಎಮ್. ರಂಗರಾವ್, ಕಣಗಾಲ್ ಪ್ರಭಾಕರ ಶಾಸ್ತ್ರಿ ಇತ್ಯಾದಿ .... ಹಾಡುಗಳು ಹಾಗು ಚಿತ್ರ ಮನೆಯ ಮಕ್ಕಳ ಜೊತೆ ಮುಜುಗರ ಇಲ್ಲದೆ ಕುಳಿತು ನೋಡಬಹುದು ... ಟಿವಿ ಅಲ್ಲಿ ಬಂದಾಗೆಲ್ಲ ತಪ್ಪದೇ ನೋಡೋ ಚಿತ್ರದಲ್ಲಿ ಇದೂ ಒಂದೂ .......ಈಗ ಇಲ್ಲಿ ಇದನ್ನು ಹೇಳೋದಕ್ಕೆ ಕಾರಣ ಅಂದ್ರಾ ...ಈ ಚಿತ್ರದಲ್ಲಿ ಪೃಥ್ವಿ ರಾಜ್ ಕಪೂರ್ ಒಂದು ಡೈಲಾಗ್ ಹೇಳುತ್ತಾರೆ .... 'ನನ್ನ ಮನೆಯ ಬಾಗಿಲು ಬರುವವರಿಗೆ ಸದಾ ಕಾಲ ಸ್ವಾಗತ (ತೆರೆದಿರುತ್ತದೆ ).... ಹೋಗುವವರಿಗೆ ನಮಸ್ಕಾರ ...!!" ಹೀಗೆ ಅರ್ಥ ಬರುವ ಮಾತುಗಳು ...... 
ಈ ಮಾತುಗಳು ಎಷ್ಟು ಇಷ್ಟ ಆಗುತ್ತೆ ಅಂದ್ರೆ ...... wen in such situations, ..........ಬಹಳಷ್ಟು ಸಾರಿ ನನಗೆ ನಾನೇ ಈ ಮಾತುಗಳನ್ನ ಹೇಳಿಕೊಳ್ಳೋದು ಇದೆ ... be it in a friendship or between relatives.... ಹಾಗೆ ನನಗೆ ನಾನೇ ಸಮಾಧಾನ ಮಾಡಿಕೊಳ್ಳೋದೂ ಇದೆ .... ಒಂದು ಸಿನಿಮಾ ಮಾತು ನಿಜಕ್ಕೂ ಇಷ್ಟು ಪ್ರಭಾವ ಬೀರಬಲ್ಲುದೇ ??? ಗೊತ್ತಿಲ್ಲ ...
.But I say it to myself for a few times and wen i am right................

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...