Wednesday 13 July 2016

ಬೆಳಿಗ್ಗೆ ಬೆಳಿಗ್ಗೆ ಕಸದ ಗಾಡಿಯವನು ಬಂದಿದ್ದ. ದಿನ ಬಿಟ್ಟು ದಿನ ಬರುವ ಅವನ ಆಟೋ ಅದೆಷ್ಟು ತುಂಬಿ ಹೋಗಿರುತ್ತದೆ ಅಂದ್ರೆ, ಅರ್ಧ ಕಸ ದಾರಿಯಲ್ಲೇ ಚೆಲ್ಲಿ ಹೋಗೊ ಅಷ್ಟು .... ನಾವು ಸಣ್ಣವರಿದ್ದಾಗ ಕಸ ಒಂದು ಸಮಸ್ಯೆನೇ ಆಗಿರಲಿಲ್ಲ . ಹಾಲು ಹಾಕೋಕೆ ಬರ್ತಾ ಇದ್ದ ರಂಗಪ್ಪ ಒಂದು ಬಕೆಟ್ ಇಟ್ಟಿದ್ದ.. ನಮ್ಮ ಹಾಗೆ ಅವನು ಹಾಲು ಹಾಕೋ ಒಂದಷ್ಟು ಮನೆಯವರೆಲ್ಲ ಆ ಬಕೆಟ್ಗೆ ತರಕಾರಿ ಸಿಪ್ಪೆ, ಅಕ್ಕಿ ತೊಳೆದ ನೀರು, ಅಡುಗೆ ಮನೆಯ ತ್ಯಾಜ್ಯ ಎಲ್ಲಾ ಹಾಕ್ತಾ ಇದ್ರು .. ಅವನು ಹಾಲು ಕರೆಯೋ ಅಷ್ಟರಲ್ಲಿ ಹಸು ನೆಮ್ಮದಿಯಾಗಿ ಅದೆಲ್ಲ ಕುಡಿದು ನಿಂತಿರ್ತಾ ಇತ್ತು.. ಹರಿದ ಪೇಪರ್ ಇತ್ಯಾದಿ ಕಸ ಒಲೆ ಸೇರ್ತಾ ಇತ್ತು...ಇನ್ನ ಒಲೆಯ ಬೂದಿ ಗಿಡದ ಮೇಲೆ ಎರಚಿದರೆ ಹುಳ ಬರೋದಿಲ್ಲ ಅಂತ ಮತ್ತೆ ಪಾತ್ರೆ ತೊಳೆಯೋದಕ್ಕೆ ಉಪಯೋಗಿಸ್ತಾ ಇದ್ರು . ಮನೆಯ ಸಾಮಾನು ತರೋಕೆ ಒಂದು ಚೀಲ ಇರ್ತಾ ಇತ್ತು , ಪೇಪರ್ ಕವರ್ ಅಲ್ಲಿ ಕಟ್ಟಿಕೊಡ್ತಾ ಇದ್ದ. ಬಟ್ಟೆ ಅಂಗಡಿಯಲ್ಲಿ ಕೂಡ ಒಂದು ಖಾಕಿ ಬಣ್ಣದ ಕವರ್ಗೆ ಬಟ್ಟೆ ಹಾಕ್ತಾ ಇದ್ರು . ಅದನ್ನ ಬಹಳಷ್ಟು ಸಾರಿ ಪುಸ್ತಕಕ್ಕೆ wrapper ಹಾಕಿದ್ದೂ ಇದೆ. ನಾವು ಬೇರೆ ಊರಿಗೆ ಬಂದ ಮೇಲೆ ಅಲ್ಲಿ ಹಸುವಿನ ಹಾಲಿನ ಬದಲು ಡೈರಿ ಹಾಲು ತರುವುದಕ್ಕೆ ಶುರು ಮಾಡಿದಾಗ ಅಮ್ಮ ತರಕಾರಿ ತ್ಯಾಜ್ಯನ ಗಿಡಗಳಿಗೆ ಹಾಕ್ತ ಇದ್ಲು.. ಉಳಿದ (ಉಳಿ(ಸಿ)ದರೆ!!!) ಅನ್ನ ಇತ್ಯಾದಿ ಬಾಗಿಲ ಬಳಿಯ ಕಲ್ಲ ಮೇಲೆ ಹಾಕಿದ್ರೆ ರಸ್ತೆಯ ನಾಯಿ ಬಂದು ತಿನ್ಕೊಂಡ್ ಹೋಗ್ತಾ ಇತ್ತು .. ಈಗ ಅಡುಗೆ ಮನೆಯ ವೇಸ್ಟೇ ಎಷ್ಟು ಅಂದ್ರೆ ಹಾಕೋದಕ್ಕೆ ಗಿಡಗಳೇ ಇಲ್ಲ .. ಇರೋ ಒಂದೆರಡು ಕುಂಡಗಳಿಗೆ ಅಷ್ಟೆಲ್ಲ ಹಿಡಿಯೋ ಜಾಗ ಇಲ್ಲ .. ಇನ್ನ ಮನೆಮನೆಯಲ್ಲೂ ಒಂದೊಂದು ನಾಯಿ ಬೊಗಳೋದಕ್ಕೆ ಬೀದಿಯಲ್ಲಿ ನಾಯಿಗಳೇ ಬರೋದಿಲ್ಲ ಉಳಿದದ್ದು ಹಾಕೋದಕ್ಕೆ !! ಪೇಪರ್ ತರದ ಕಸ ಹಾಕೋದಕ್ಕೆ ಒಲೆನೇ ಇಲ್ಲಾ !! ಇನ್ನ ಮನೆ ಸಾಮಾನು ತಂದ ಆ ಪ್ಲಾಸ್ಟಿಕ್ ಕವರ್ ಈ ಕಸ ಹಾಕೋಕೆ ಉಪಯೋಗಿಸ್ತಾರೆ..ಪುಟ್ಟಿ ಡ್ರಾಪ್ ಮಾಡೋಕೆ ಹೋದಾಗ ದಾರಿಯಲ್ಲಿ ಹಸು ಕಸದ ಜೊತೆ ಪ್ಲಾಸ್ಟಿಕ್ ಕೂಡ ತಿಂತಾ ಇತ್ತು .. !!! ಹಾಗಾದರೆ civilization ಅನ್ನೋ ನೆಪದಲ್ಲಿ ನಮ್ಮನ್ನ ನಾವು ಎತ್ತ ಕೊಂಡೊಯ್ಯುತ್ತಾ ಇದ್ದೇವೆ !!?? Feeling ಒಂದಷ್ಟು ದಿನಗಳಾದ ಮೇಲೆ ಮನುಷ್ಯರಿಗಿಂತ ಸಮಸ್ಯೆಗಳೇ ಹೆಚ್ಚಾಗಿ ಬಿಡುತ್ತದೆಯೇ ?!

1 comment:

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...