Saturday 30 July 2016

ಏನ ಹೇಳಲಿ ಈ ಅನುಬಂಧದ ಬಗೆ...
ಪ್ರೀತಿ- ಕಲಹ,
ನಗು -ಅಳು
ಜೀವ-ಭಾವ,
ಸುಖ- ದುಖ
ಹಂಚಿಕೊಂಡೆವು ನಮ್ಮೊಳಗೇ...
ನೀ ಅತ್ತಾಗ ನನ್ನ ಕಣ್ಣಲಿ ಕಂಬನಿ
ನಾ ನಕ್ಕಾಗ ನಿನ್ನ ತುಟಿಯಲ್ಲಿ ನಗೆಯ ಇಬ್ಬನಿ..
ಬರಿ ಪ್ರೀತಿ ಮಾತ್ರವೇ ಇರಲಿಲ್ಲ ನಮ್ಮಲಿ..
ನೀ ಹೊಡೆದ ಪೆಟ್ಟಿನ ಗುರುತು ಇದೆ ಇನ್ನೂ ನನ್ನ ಹಣೆಯಲ್ಲಿ...
ನಾ ನನ್ನ ಕನಸ ಹಂಚಿಕೊಂಡೆ ನಿನ್ನೊಡನೆ...
ನೀ ನಿನ್ನ ಗುಟ್ಟ ಬಿಟ್ಟು ಕೊಟ್ಟೆ ನನ್ನೊಡನೆ...
ದಿನಗಳೆದಂತೆ,
ನಮ್ಮ ನಡುವೆ ಹೊಸ ಬಂಧ, ಬಂಧುಗಳು ..
ನನ್ನ ನಾ ಕೇಳಿಕೊಂಡೆ
ಎಲ್ಲಿ ಹೋದವು ಆ ದಿನಗಳು...
ಎಷ್ಟು ದೂರ ಇದ್ದರೇನು....
ಎಷ್ಟು ದಿನಗಳಾದರೇನು
ಮರೆಯಲಾದೀತೇ ಆ ಮಧುರ ನೆನಪುಗಳನ್ನು
ತೊರೆಯಲಾದೀತೇ ನಮ್ಮ ಬಂಧವನ್ನು
ಬೇಡಿ, ಹುಡುಕಿ ಪಡೆದ ಗೆಳೆತನವಲ್ಲ ಇದು...
ತೊಟ್ಟಿಲಿನಿಂದ ಗೋರಿಯವರೆಗೆ...
ತಾಯ ಗರ್ಭದಿಂದ ಭೂತಾಯಿಯ ಗರ್ಭದವರೆಗೆ...
ಬೇಡದೆಯೇ , ಹುಡುಕದೆಯೇ ಒಲಿದು ಬಂದ
ಒಡಹುಟ್ಟುವಿಕೆ...
ಏನ ಹೇಳಲಿ ಈ ಅನುಬಂಧದ ಬಗೆ...

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...