Saturday 30 July 2016

ನ್ನ ಫ್ರೆಂಡ್ ಇದ್ದಾರೆ..ಡಾ. ಕಿಶೋರ್ ಅಂತ, ಮಾಲ್ಡಿವ್ಸ್ ನವರು...ಒಂದು ಸಣ್ಣ ಕಥೆ ಕಳಿಸಿದ್ದರು....ಅದರ ಅನುವಾದ...
ವರುಷಗಳ ಹಿಂದೆ ಮಾಲ್ಡಿವ್ಸ್ ದ್ವೀಪ ಚೆಂದದ ಗಿಡಮರಗಳಿಂದ ತುಂಬಿ ನಳನಳಿಸುತ್ತ ಇತ್ತು...
ಸುಂದರ ದ್ವೀಪಕ್ಕೆ ಆಗಾಗ ಕಿನ್ನರಿಯರು, ಗಂಧರ್ವರು ಬಂದು ಹೋಗುತ್ತಾ ಇದ್ದರು...
ಸುಂದರ ಕಡಲ ಕಿನಾರೆಗೆ ಪ್ರತಿ ಹುಣ್ಣಿಮೆಯ ರಾತ್ರಿ ಕಿನ್ನರಿಯೋಬ್ಬಳು ಬಂದು ಸಮಯ ಕಳೆದು ಹೋಗುತ್ತಾ ಇದ್ದಳು...
ಪಕ್ಕದ ರಾಜ್ಯದ ರಾಜ್ಕುಮಾರನೋಬ್ಬನ ಹಡಗು ಅಲೆಗಳ ಹೊಡೆತಕ್ಕೆ ಸಿಕ್ಕಿ ಮುಳುಗಿ ಹೋಯಿತು..ರಾಜಕುಮಾರ ಸಾಗರ ಕಿನಾರೆಗೆ ಬಂದು ಬಿದ್ದ....
ಅಂದು ರಾತ್ರಿ ಅಲ್ಲಿಗೆ ಬಂದ ಕಿನ್ನರಿ ರಾಜಕುಮಾರನ ನೋಡಿದಳು...ಆತನೂ ಅವಳ ನೋಡಿದ ...ಇಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದರು ..ಬೆಳದಿಂಗಳು ಅವರ ಪ್ರೀತಿಗೆ ಸಾಕ್ಷಿಯಾಯಿತು......
ಬೆಳಗಿನ ರವಿ ಕಿರಣ ಅವನ ಕಣ್ಣ ತೆರೆಸುವ ಹೊತ್ತಿಗೆ ಕಿನ್ನರಿ ಮಾಯವಾಗಿದ್ದಳು...ರಾಜಕುವರ ಅವಳಿಗಾಗಿ ಹುಡುಕಿದ ..ಆಕೆ ಸಿಗಲೇ ಇಲ್ಲ......ಮನದ ತುಂಬಾ ಭರವಸೆಯ ಹೊತ್ತ ಅವನು ಅಲ್ಲೇ ಸಿಗುವ ಹಣ್ಣು ಹಂಪಲು ತಿಂದು ಬದುಕ ಸಾಗಿಸಿದ್ದ....
ಅಂದು ಹುಣ್ಣಿಮೆ....ರಾತ್ರಿಯಾಗುತ್ತಿದಂತೆ ಕಿನ್ನರಿ ಸಾಗರ ಗರ್ಭದಿಂದ ಬಂದಳು..ರಾಜಕುವರನ ಸಂಭ್ರಮಕ್ಕೆ ಮಿತಿಯೇ ಇರಲಿಲ್ಲ....ಕಿನ್ನರಿ ಕೂಡ ಅರ್ಪಣಾ ಭಾವದಿಂದಲೇ ಬಂದಿದ್ದಳು.....ಮತ್ತೊಂದು ಹುಣ್ಣಿಮೆಯ ಸುಂದರ ರಾತ್ರಿ....ಬೆಳದಿಂಗಳ ಸಾಕ್ಷಿ............ಬೆಳಕಿನ ಕಣ್ಣು ತೆರೆವ ಹೊತ್ತಿಗೆ ಕಿನ್ನರಿ ಹೋಗೆ ಬಿಟ್ಟಿದ್ದಳು.....
ಹಗಲು ರಾತ್ರಿ....ಮತ್ತೊಂದು ಹುಣ್ಣಿಮೆ....ಅದೇ ಬೆಳದಿಂಗಳು ..ಅದೇ ಅಲೆಗಳು ....ಅದೇ ಪ್ರೀತಿ...!!!!ಸುಂದರ ದಿನಗಳು....
ಒಂದು ದಿನ ರಾಜಕುಮಾರನ ಹುಡುಕ್ಕುತ್ತ ಬಂದ ಹಡಗು ಅವನ ಹಿಂಜರಿಕೆಯ ವಿರೋಧದ ನಡುವೆಯೂ ಅವನನ್ನ ಅವನ ರಾಜ್ಯಕ್ಕೆ ಕರೆದೊಯ್ದಿತ್ತು....
ಹುಣ್ಣಿಮೆಯ ರಾತ್ರಿ ಇನಿಯನ ಅರಸುತ್ತಾ ಬಂದ ಕಿನ್ನರಿಗೆ ಬರಿದಾದ ಕಡಲ ಕಿನಾರೆ ದಂಗುಬಡಿಸಿತ್ತು...ಅವನಿಗಾಗಿ ಹುಡುಕಿಯೇ ಹುಡುಕಿದಳು....ಬದುಕೇ ಬರಿದ್ದಾಯ್ತೆ ????
ಬೆಳಕು ಮೂಡುವ ವೇಳೆಗೆ ಹೊರಡುವ ಸಮಯ ಸನಿಹವಾದಂತೆ ಕಣ್ಣಿಂದ ಒಂದು ಪುಟ್ಟ ಹನಿ ಜಾರಿ ಬಿತ್ತು...ಬೀಳುವ ಮೊದಲೇ ರವಿಯ ಕಿರಣ ಸೋಕಿ ಸುಂದರ ಸುಮವಾಯ್ತು...ಆ ಹೂವು ಅವನಿಗಾಗಿ ಹುಡುಕುವಂತೆ ಹಗಲಿರುಳು ಕಾಯ್ದು ಬಾಡುತ್ತಿತ್ತು....
ಮತ್ತೊಂದು ಹುಣ್ಣಿಮೆ...ಮತ್ತೆ ಕಿನ್ನರಿಯ ಹುಡುಕಾಟ....ಅವಳ ಕಣ್ಣ ಹನಿ ....ಇನ್ನೊಂದು ಸುಮಾ....
ಮತ್ತೊಂದು ಹುಣ್ಣಿಮೆ...............ಇನ್ನೊಂದು ಸುಂದರ ಹೂ..
ನಲ್ಲನ ಹುಡುಕುತ್ತಾ ಕಿನ್ನರಿ ಇಂದಿಗೂ ಕಡಲ ತದಿಗೆ ಬರುತ್ತಾಳೆ.....ಪ್ರೀತಿಯ ಅರ್ಥ ತಿಳಿಸಿದ ಅವನಿಗಾಗಿ ಕಣ್ಣ ಹನಿ ಮಿಡಿಯುತ್ತಾಳೆ...ಸುಂದರ ಹೂವೊಂದು ಅರಳುತ್ತದೆ ....
ಇದು ಇಂದಿಗೂ ನಡೆದೇ ಇದೆ....
ಇಬ್ಬರನ್ನೂ ನೋಡದ ಜನ ಆ ಪ್ರೀತಿಯ ಹೂವ ನೋಡುತ್ತಾರೆ....ಸೌಂದರ್ಯವ ಸವಿಯುತ್ತಾರೆ....ಹೆಪ್ಪುಗಟ್ಟಿದ ಪ್ರೀತಿಯ ದನಿ ಕೇಳಿದಂತೆ ಮನವರಳಿಸುತ್ತಾರೆ ......
"ಪ್ಹಾಲುಮ....ಸುಂದರ ಒಂಟಿ ಹೂವು" ಆ ಹೂವಿನ ಹೆಸರು ......:))))ಫಾಲುಮಾ......ಕಣ್ಣ ಹನಿಯ ಹೂವು ..:))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...