Friday 1 July 2011








ಅವಳು 
ಶಕುಂತಲೆ....
ತನ್ನದಲ್ಲದ ತಪ್ಪಿಗೆ..
ಹೆತ್ತವರಿಗೆ ಹೊರೆಯಾಗಿ
ತೊರೆಯಲ್ಪಟ್ಟ ಶಕುಂತಲೆ....
ತನ್ನದಲ್ಲದ ತಪ್ಪಿಗೆ 
ಶಾಪಕ್ಕೆ ಗುರಿಯಾದ ಶಕುಂತಲೆ...
ತನ್ನದಲ್ಲದ ತಪ್ಪಿಗೆ 
ಶಚ್ಚಿತೀರ್ಥದಾಳದಲ್ಲಿ ಉಂಗುರ ಕಳೆದುಕೊಂಡು
ತುಂಬುಸಭೆಯಲ್ಲಿ 
ಪುಟ್ಟ ಕಂದನ ಬಸಿರಲ್ಲಿ ಹೊತ್ತು ..
ಪತಿಯಿಂದ ತ್ಯಕ್ತಳಾದ ಶಕುಂತಲೆ... 

ನಾನು ಶಕುಂತಲೆ..
ಶಚ್ಚಿತೀರ್ಥದ ಮುಂದೆ ನಿಂತಿರುವೆ...
ನನ್ನದಲ್ಲದ ತಪ್ಪಿಗೆ ಪುಟ್ಟ ಕಂದನ ಒಡಲಲ್ಲಿ ಹೊತ್ತು...
ದುಷ್ಯಂತ..ಬರುವನೋ..ಬಾರನೋ ಎಂದಲ್ಲ..
ಶಾಪಹಾಕಿದ ದುರ್ವಾಸರಿಗೆ ಮನದಲ್ಲಿ ಶಪಿಸುತ್ತಲು ಅಲ್ಲ...
ಕಣ್ವನಾಶ್ರಮದೆಡೆಗೆ ಹೋಗಲೋ ಬೇಡವೋ ಎಂದಲ್ಲ...
ಹೆತ್ತು ಪೊರೆಯಲಾರದೆ ಬಿಟ್ಟು ಹೋದ ಹೆತ್ತವರ ಹುಡುಕುತ್ತಲು ಅಲ್ಲ...
ನಾಳೆ ಹುಟ್ಟುವ ನನ್ನ ಕಂದನಿಗೆ ಹೇಗೆ ಬದುಕ ನೀಡಲಿ ಎಂದು....
ನನಗಾದಂತೆ ಅವನಿಗಾಗದಿರಲಿ ಎಂದು..
ನನ್ನದಲ್ಲದ ತಪ್ಪಿಗೆ ನಾನು ನೋವುಡಂತೆ 
ಅವನು ನಲುಗದಿರಲಿ ಎಂದು....
ಧೃಡವಾಗಿ ಬದುಕಾಗಿ....ಬದುಕಲಿಕ್ಕಾಗಿ...
ಏಕೆಂದರೆ....
ನಾನು ಶಕುಂತಲೆ....ಇಂದಿನ ಶಕುಂತಲೆ...

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...