Saturday, 16 April 2016

'ಇವನು ನನ್ನ ಫಸ್ಟ್ ಫ್ರೆಂಡ್ ಕಣ್ ಮಗ ಮತ್ತು ಬೆಸ್ಟ್ ಫ್ರೆಂಡ್ ಕೂಡ '.... ಆ ಕಿವಿಯಿಂದ ಈ ಕಿವಿಯವರೆಗೆ ನಗುತ್ತ ಮಕ್ಕಳ ಹತ್ತಿರ ಹೇಳಿದೆ .... ಅವನೂ ಅಷ್ಟೇ ಸಂತಸದಿಂದ ನಕ್ಕ.
ಕೈ ಹಿಡಿದು ಕೊಂಡ್ವಿ , ಹರಟಿದ್ವಿ , ಮಾತಾಡ್ತಾ ಮಾತಾಡ್ತಾ ಮಕ್ಕಳಿಗೆ ಹೇಳಿದೆ 'ಅಪ್ಪಂಗೆ (ಮಂಜುಗೆ) ಎರಡನೇ ಸಾರಿ ಕಾಲು ಏಟಾದಾಗ ಇವನು ಅವತ್ತು ಆಂಬುಲೆನ್ಸ್ ಕಳಿಸದೆ ಇದಿದ್ದರೆ , ನೆನಪಿಸಿಕೊಳ್ಳೋದಕ್ಕೂ ಭಯ ಆಗುತ್ತೆ . ಅಂದಿನ ನೆನಪಾದಾಗ ನಿನ್ನದೇ ನೆನಪು ಕಣೋ ಪ್ರತಾಪ್... ಹೇಗೆ ಮರೆಯೋಕೆ ಆಗುತ್ತೆ ನೀನು ಮಾಡಿದ ಸಹಾಯ 'ಅಂದೆ . (ಆಗ ಕಾವೇರಿ ಗಲಾಟೆ ಸಮಯ. ಮಂಜುಗೆ ಎರಡನೇ ಸಾರಿ ಅದೇ ಕಾಲಿಗೆ ಏಟಾದಾಗ ಇಲ್ಲಿನ ಡಾಕ್ಟರ 'ಬೆಂಗಳೂರಿನ Manipal northsideಗೆ ಹೊರಟುಬಿಡಿ. ಹೇಗೂ ಅವರೇ ಅಲ್ವ ನಿಮ್ಮನ್ನ ಮೊದಲು ನೋಡಿದ್ದು . ಅದೇ best 'ಅಂದ್ಬಿಟ್ರು ..ಆಂಬುಲೆನ್ಸ್ಗಳು ಸಿಗದೇ ಅಂದಿನ ಪರದಾಟ ನೆನೆದಾಗ ಈಗಲೂ ಭಯ ಅನಿಸುತ್ತದೆ. ಖಾಸಗಿ ಗಾಡಿಗಳನ್ನ ಬಿಡುತ್ತಲೇ ಇರಲಿಲ್ಲ. ಬಸ್ ಇಲ್ಲ, ಟ್ರೈನ್ ಇಲ್ಲ, ಮಾಡಿದ ಫೋನ್ಗಳಿಗೆ ಲೆಕ್ಕವೇ ಇಲ್ಲ!!! ಅವತ್ತೇ ನನಗೆ ತಿಳಿದಿದ್ದು ದುಡ್ಡು ಅನ್ನೋದು ಎಷ್ಟು ಅನುಪಯುಕ್ತ ಆಗಿಬಿಡಬಲ್ಲದು ಅಂತ )
ಗೆಳೆಯ ನುಡಿದ, 'ಒಯ್ ನೀನೊಂದು, ನನ್ನ ನೆನಪಿಸಿಕೊಳ್ಳೋಕೆ , ಮಕ್ಕಳಿಗೆ ಹೇಳೋಕೆ ಇದೇ ವಿಷ್ಯನಾ ನಿನಗೆ ಸಿಗೋದು?? ನೀನು ತಂದು ಕೊಡುತ್ತಿದ್ದ ಕೊಬ್ಬರಿ ಮಿಠಾಯಿ , ನಾನು ತಂದುಕೊಡುತ್ತಿದ್ದ ಆ binaca tooth paste ಒಳಗಿನ ಗೊಂಬೆ, ಅಮ್ಮನ ಮಗ್ಗುಲಲ್ಲಿ ಇಬ್ಬರೂ ಮಲಗಿ ಕಥೆ ಕೇಳಿದ್ದು , ನಿನ್ನ ಮೊಗ್ಗಿನ ಜಡೆ ಎಳೆದು ಜಡೆ ಕೈಗೆ ಬಂದಾಗ ನೀನು ಅತ್ತಿದ್ದು, ನಾನು ಜಡೆನ ಅಂಟಿಸ್ತೀನಿ ಅಮ್ಮನಿಗೆ ಹೇಳಬೇಡ ಅಂತ ಗೊಗರೆದಿದ್ದು , ಇವೆಲ್ಲ ನೆನಪಿಸಿಕೊಳ್ಳೋದು ಬಿಟ್ಟು ಏನೇನೋ ಹೇಳ್ತಿಯ ನೀನು....ಬದಲಾಗೋದಿಲ್ಲ ಬಿಡು ನೀನು' ಅಂದ .
ನಿಜ ಗೆಳೆಯ, ಅಷ್ಟೆಲ್ಲಾ ಪ್ರೀತಿ, ನಂಬಿಕೆ, ವಿಶ್ವಾಸದ ಗೆಳೆತನದ ನಡುವೆ ಇದೂ ನೆನಪಿಸಿಕೊಳ್ಳದೆ ಹೋದರೆ, ನಾನು 'human' ಅನ್ನಿಸಿಕೊಳ್ಳೋದಿಲ್ಲಾ ಅಲ್ವೇ.!!! ಏನೇ ಹೇಳು ,ನಿನ್ನನ್ನು ಹೀಗೂ ನೆನಪಿಸಿಕೊಂಡರೆ ನನಗೆ ಖುಷಿ .. .ನಿನ್ನಂತವರ ಸಂಖ್ಯೆ ಸಹಸ್ರವಾಗಲಿ ....:)))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...