Saturday 6 June 2015

ಮೆಲ್ಲಗಿಳಿದು ಇಳೆಯ ಚುಂಬಿಸಿ ಸದ್ದಿಲ್ಲದೇ ಹೊರಟ ವರುಣ
ಹೇಳಲಾರೆ ಮಿಲನದ ಗುಟ್ಟು ಎಂಬಂತೆ ನಿಂತಳು ಇಳೆ
ಆದರೆ ....
ಆ ಗರಿಕೆಯ ತುದಿಯ ಹನಿ ...
ಆ ಹಸಿರೆಲೆಯ ರಂಗು....
ಆ ಪುಟ್ಟ ಗುಲಾಬಿಯ ಉಸಿರು....
ಅವನಾಗಮನವ ಉಸುರಿ ಬಿಟ್ಟಿತು ............

ಅವ ಬಂದು ಹೋದ ಕುರುಹುಗಳ ಅಳಿಸಿಬಿಟ್ಟೆ ಎಂದಳು
ಆದರೆ...
ಕಣ್ಣ ತುದಿಯ ಮಿಂಚು....
ತುಟಿಯಂಚಿನ ಹುಸಿನಗು.........
ಮೊಗದ ನರುಗೆಂಪು.....
ನಸುಕಂಪಿಸುವ ಬೆರಳು ....
ಮುದುರಿದ ಸೆರಗಿನ ಅಂಚು ಅವಳ ಗುಟ್ಟನ್ನ ರಟ್ಟಾಗಿಸಿತು...  :))))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...