Saturday 16 May 2015

ಹೀಗೊಂದು ಕಥೆ
ನನಗೇ ತಿಳಿಯದೆ ತುಂಬಾ ಪ್ರೀತಿಸಿಬಿಟ್ಟೆ ನಿನ್ನನ್ನ .. ಎಂದೂ ಯಾರನ್ನೂ ಹಚ್ಚಿಕೊಳ್ಳದ ನಾ ನಿನ್ನ ಗೆಳೆತನ ಬಯಸಿದೆ, ನಿನ್ನ ಸಾಂಗತ್ಯ ಅರಸಿದೆ .  ನೀ ಬರುವೆ ಎಂದೊಡನೆ ಮನದ ತುಂಬಾ ಬಾನ ನೀಲಿ .. ನೀ ಬಂದೆ, ನನಗಾಗಿ ಅದೆಷ್ಟೇ  ಶ್ರಮವಾದರೂ ನೀ ಬಂದೆ ..ಅದೆಷ್ಟು ಮಾತು ... ಆಡಿದ ಅಷ್ಟೆಲ್ಲಾ  ಮಾತುಗಳು ಮನದ ಹೊತ್ತಿಗೆಯಲ್ಲಿ ಅಳಿಸಲಾರದೆ ಉಳಿದುಬಿಟ್ಟವು ..  ಮತ್ತೆ ನೀ ಹೋಗಲೇಬೇಕಿತ್ತು....  ನೀ ಹೊರಟೆ ... ಆಡದೆ ಉಳಿದ ಮಾತು ಮೌನದ ಮೊರೆ ಹೊಕ್ಕಿತು ...ಮೌನ ಬದುಕಿನ ಅದೆಷ್ಟೋ ವರುಷಗಳವರೆಗು ಯಾರಿಗೂ ಕಾಣದ ಕಂಬನಿಯಾಗೆ ಉಳಿದುಹೋಯ್ತು .......ಹಾಗೆ ಹಾಗೇ ಉಳಿದುಬಿಟ್ಟೆವು ಭೂಮಿಬಾನಿನಂತೆ ... ಕ್ಷಿತಿಜದ ಅಂಚಲ್ಲಿ ತಾಕಿಯೂ ತಾಕದಂತೆ ....... 

1 comment:

  1. Touched touched, ಕ್ಷಿತಿಜದ ಅಂಚಲ್ಲಿ ತಾಕಿಯೂ ತಾಕದಂತೆ ...

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...