Thursday, 13 July 2017

ಮೊನ್ನೆ ಮಂಜು ಡ್ಯೂಟಿಗೆ ಅಕ್ಸೆಸ್ಸ್ ತಗೊಂಡು ಹೋಗಿದ್ರು . ಅತ್ಯಾವಶಕವಾಗಿ ಹೊರಗೆ ಹೋಗಲೇ ಬೇಕಿತ್ತು ಅಂತ ಸ್ಕೂಟಿ ತೆಗೆದುಕೊಂಡು ಹೋದೆ . (ಈ ಸ್ಕೂಟಿ ಒಂದ್ ತರ ಸೈಕಲ್ ಇದ್ ಹಂಗೆ!!) .. ಹೋಗಿ ಕೆಲ್ಸ ಮುಗಿಸಿ ಬರ್ತಾ ಇದ್ದೆ . ಒಂದು ಮಾರುತಿ ವ್ಯಾನು (ಶಾಲಾವಾಹನ ) ಹಿಂದೇನೇ ಬರ್ತಾ ಇತ್ತು .. ಒಂದೇ ಸಮ ಹಾರ್ನ್ ಕೂಡ ಹೊಡಿತಾ ಇದ್ದ ಆ ಚಾಲಕ . ನಾನು ಅತ್ಲಾಗೆ ಮುಂದೆ ಹೋಗ್ತಾನೇನೋ, ಮಕ್ಕಳನ್ನ ಕೂರಿಸಿಕೊಂಡು ಯಾಕ್ ಹಿಂಗ್ ಆಡ್ತಾರೋ ಅಂತ ಬೈಕೊಂಡು ಪಕ್ಕಕ್ಕೆ ಹೋದೆ . ಅವ್ನೂ ಪಕ್ಕನೇ ಬಂದ . ಮೊದ್ಲೇ ನಾ ಸ್ವಲ್ಪ ಟೆನ್ಶನ್ ಪಾರ್ಟಿ. ಗಾಡಿ ಕಲ್ತು/ಓಡಿಸಿ ೨೫ ವರ್ಷ ಆದ್ರೂ ಗಾಡಿ ಓಡಿಸುವಾಗ ಒಂದಷ್ಟು "ಟೆನ್ಶನ್ ಕೈಲಿ ಹಿಡಿದುಕೊಂಡಿರ್ತಿನಿ!!!!" 'ತಥ್ , ಅದೇನ್ ಜನನೋ ಏನೋ , ಸ್ವಲ್ಪನೂ ಬುದ್ದಿನೇ ಇಲ್ಲ " ಅಂದ್ಕೊಂಡು ಗಾಡಿ ನಿಧಾನ ಮಾಡಿ ಗುರಾಯಿಸಿದೆ ....
'ಏನ್ ಮೇಡಂ ಚೆನ್ನಾಗಿದೀರಾ " ಅಂದ್ರು ಆ ಡ್ರೈವ್ ಮಾಡ್ತಾ ಇದ್ದ ವ್ಯಕ್ತಿ .
ತಕ್ಷಣಕ್ಕೆ ಗುರುತು ಸಿಗದೇ ಹೋದ್ರು (ನನಗೆ ಒಂದ್ ತರ ಅಮ್ನೇಶಿಯಾ !!!) ಒಂದೆರಡು ಕ್ಷಣಗಳಲ್ಲಿ ಹೊಳೆಯಿತು ಅವ್ರು ಜಾನ್, ಕಾರ್ತಿ ಸಣ್ಣವನಿದ್ದಾಗ ಅವರ ವ್ಯಾನ್ ಅಲ್ಲೇ ಶಾಲೆಗೆ ಹೋಗ್ತಾ ಇದ್ದ ಅಂತ .!! 'ಓಹ್ ಜಾನ್ , ಹೇಗಿದ್ದೀರಾ, ಮಕ್ಕಳು-ಮನೆಯವ್ರು ಹೇಗಿದ್ದಾರೆ ? ಸಾರಿ ಒಂದ್ ನಿಮಿಷ ಸ್ವಲ್ಪ ಕನ್ಫ್ಯೂಸ್ ಆಯ್ತು ಜಾನ್ ' ಅಂದೆ .
" ಪರವಾಗಿಲ್ಲ ಮೇಡಂ ಎಷ್ಟ್ ದಿನಗಳಾಯ್ತು (ವರುಷಗಳೇ ಆಗಿತ್ತೇನೋ) ನೋಡಿ, ನೋಡಿದೆ ಅಲ್ವ ಅದ್ಕೆ ಮಾತನಾಡಿಸೋಣ ಅಂದ್ಕೊಂಡೆ  ಕಾರ್ತಿ ಹೇಗಿದ್ದಾನೆ ಮೇಡಂ, ಏನ್ ಓದ್ತಾ ಇದ್ದಾನೆ ? " ಅಂದ್ರು ..
" ಇನ್ನು ಕಾರ್ತಿ ಹೆಸ್ರು ನೆನಪಿದ್ಯಾ ಜಾನ್ , ಅವ್ನು ಈಗ ದೊಡ್ಡವನಾಗಿದ್ದಾನೆ ಎಂಜಿನಿಯರಿಂಗ್ ಮಾಡ್ತಾ ಇದ್ದಾನೆ ಮಂಡ್ಯದಲ್ಲಿ .." ಅಂದೆ ..
ಅದ್ ಹೆಂಗೆ ಮರಿಯೊಕ್ಕಾಗುತ್ತೆ ಮೇಡಂ, ಡ್ರೈವರ್ಗೂ ಟೀ ಕುಡಿಸಿ ಕಳಿಸ್ತಾ ಇದ್ದ ಮನೆಯನ್ನ !!" ಅಂದ್ರು ...(ಒಮ್ಮೊಮ್ಮೆ ಕಾರ್ತಿಯನ್ನ ಕೊನೆಯಲ್ಲಿ ಡ್ರಾಪ್ ಮಾಡುವಾಗ ಮಂಜು ಒತ್ತಾಯ ಮಾಡಿ ಟೀ ಕುಡಿಸಿ ಕಳಿಸ್ತಾ ಇದ್ರೂ ಜಾನ್ಗೆ... )
ಅಷ್ಟ್ರಲ್ಲಿ ವ್ಯಾನ್ ಅಲ್ಲಿ ಇದ್ದ ಚಿಲ್ಟಾರಿ ಒಬ್ಬ .. 'I have a friend called kartik' ಅಂದ ಕೆನ್ನೆ ಗಿಂಡಿ ನಕ್ಕೆ
"ಸಾರ್ ಹೇಗಿದ್ದಾರೆ ? ಮಗಳು ಏನ್ ಒದ್ತಾ ಇದ್ದಾಳೆ ?" ಅಂತೆಲ್ಲ ಕೇಳಿದ್ರು .. ಅದಕ್ಕೆ ಉತ್ತರಿಸಿ "ಮನೆಗೆ ಬನ್ನಿ ಜಾನ್ ' ಅಂದೆ ..
"ಬರ್ತೀನಿ ಮೇಡಂ ಸಾರ್ ಗೆ ಕೇಳ್ದೆ ಅಂತ ಹೇಳಿ ' ಅಂದ್ರು "ಥ್ಯಾಂಕ್ಸ್ ಜಾನ್' ಅಂದೆ "ಬರ್ತೀನಿ ಮೇಡಂ " ಅಂತ ಹೊರಟರು ....
ಮನಸ್ಸು ನೀಲಿನೀಲಿ ಆ ಬಾನಿನಂತೆ...)
ಕಿತ್ನಾ ಹಸೀನ್ ಹೈ ಜಿಂದಗಿ ...... ಲೈಫ್ ಐಸ್ ಬ್ಯೂಟಿಫುಲ್...It is in our hands to Make It Beautiful ಅನಿಸೋಹಾಗೆ
ಸುಂಸುಮ್ನೆ ಹಂಚಿಕೊಳ್ಬೇಕು ಅನಿಸ್ತು 
ಭಾನುವಾರ ಅಂದ್ರೆ ನಮ್ ಮನೆದೇವ್ರು ನಾನೂ ಊರು ಸುತ್ತೋಕೆ ಹೋಯ್ತಿವಿ .. ಮಕ್ಕಳು ಮನೆಯಲ್ಲೇ ಇರ್ತಾರೆ . ಆವತ್ತು ರಜ ಅಂತ ತಡವಾಗಿ ಏಳ್ತಾರೆ . ಈ ಮಂಜು ಮನೆಯಲ್ಲಿದ್ರೆ ಮಕ್ಕಳಿಗೆ ಬೇಗ ಏಳಿ ಅಂತ "ಭಜನೆ"ಮಾಡ್ತಾರೆ ಅಂತಲೇ ಸುತ್ತೋಕೆ ಹೋಗೋದು.. (ಇವರಿಗೇನೋ ನಿದ್ರೆ ಬರೋದಿಲ್ಲ ಅವಾದ್ರೂ ಒಂದಷ್ಟು ಮಲಗಲಿ ಅಂತ) 
ನೆನ್ನೆ ಚುಂಚನಗಿರಿಗೆ ಹೋಗೋದು ಅಂತ ನಮ್ ಮನೆದೇವ್ರು ಹೇಳಿದ್ರು ..ಬಸ್ ಅಲ್ಲೇ ಹೋಗೋಣ ಅಂದ್ರು ( ನನಗೆ ಈ ಬಸ್ ಪಯಣ ಅಂದ್ರೆ ಆಗ್ಬರಕ್ಕಿಲ್ಲ .. ಒಸಿ ಹಂಗೆಯಾ ಒಂದ್ ತರಾ nauseated ತರ ).. ಗಾಡಿ ಓಡಿಸ್ತಾ ಇದ್ರೆ ನಿನ್ನ ಮುಖ ನೋಡದೆ ರಸ್ತೆನೇ ನೋಡ್ತಾ ಓಡಿಸಬೇಕು ಅದ್ಕೆ ಕಣಮ್ಮ ಅಂತ ಕಿವಿ ಮೇಲೆ ನಮ್ಮ ಬೃಂದಾವನ ತೋಟವನ್ನೇ ಇಟ್ರು !! ನಾನೂ ಒಂದ್ ಚೂರು ಓಡಿಸ್ತೀನಿ ನಿನಗೆ ಜಾಸ್ತೀ ಆಯಾಸ ಆಗೋದಿಲ್ಲ ಕಣಪ್ಪ ಅಂತ ಮಸ್ಕ ಹೊಡೆದರೆ ....... ನೀ ಗಾಡಿ ಓಡಿಸಿದರೆ ನಾವು ಬಾಲಗಂಗಾಧರಸ್ವಾಮಿನ (ತೀರಿ ಹೋದ ಮಠಾಧೀಶರು) ನೋಡಬೇಕು ಅಷ್ಟೇ , ನಾ ಓಡಿಸಿದರೆ ನಿರ್ಮಲಾನಂದ ಸ್ವಾಮಿಗಳನ್ನ(ಈಗಿನ ಮಠಾಧೀಶರು) ನೋಡಬಹುದು .. Choice is yours ಅನ್ನೋದೇ .... 
ಅದೇನ್ ಪುಣ್ಯ(!!!) ಮಾಡಿ ಕಟ್ಕೊಂಡ್ ಬಿಟ್ನೋ ಕಾಣೆ ))))))))
ಈ ಬಾರಿ ಮದುವೆಗಳು ತುಂಬಾನೇ ಜಾಸ್ತಿ. ಕೆಲವೊಂದು ದಿನಗಳಲ್ಲಿ ಒಂದೇ ದಿನ ೨-೩ ಸಮಾರಂಭಗಳಿಗೆ ಹೋಗಲೇಬೇಕಾದ ಅನಿವಾರ್ಯತೆ. ಮೊನ್ನೆ ನಮ್ಮ ಬೇಕರಿ ಸಂಜಣ್ಣ ಹೇಳ್ತಾ ಇದ್ರೂ 'ಈ ಮದ್ವೆ ಸೀಸನ್ ಮುಗಿದ್ರೆ ಸಾಕು ಅನಿಸಿಬಿಟ್ಟಿದೆ ! 100 ರೂಪಾಯಿ ಮುಯ್ಯಿ ಹಾಕೋಕೆ 1000 ರೂಪಾಯಿ ಖರ್ಚ್ ಮಾಡಿಕೊಂಡು ಹೋಗಿಬರಬೇಕು ನೋಡಿ ಅಕ್ಕ" ಅಂತ 
ನೆನ್ನೆ ಮೊನ್ನೆ ಎರಡು ದಿನ ತುಂಬಾನೇ ಬೇಕಾದವರ ಮನೆಯ ಎರಡು ಮದ್ವೆಗಳು. ಎರಡೂ ತೀರಾನೇ ವಿಭಿನ್ನ ಸಾಂಸಾರಿಕ ಹಿನ್ನಲೆಯುಳ್ಳವರ ಮನೆಗಳ ಮದುವೆ.
ಒಂದು ಮದುವೆ ಛತ್ರದಲ್ಲಿ..ಊರಿನ ನೆಂಟರ ಹುಡುಗನ ಮದುವೆ. ಆತನ ಗೆಳೆಯರು ಕೇಕ್ ತಂದು ಕತ್ತರಿಸಿ (!!) ಅದೆಷ್ಟೋ ಜನ ಕಾಯ್ತಾ ಇದ್ರೂ ಫೋಟೋ ಸೆಷನ್ಸ್ ಗಳನ್ನ ಮಾಡಿಸಿಕೊಂಡು ಕೆಲವರು ಬೇಸತ್ತು ರೇಗಿದ ಮೇಲೆ ಬಂದು ನಿಂತ್ರು . ನಿಲ್ಲೋದೇ ತಡ ಕೆಲವರು ಊಟಕ್ಕೆ ದೌಡಾಯಿಸಿದರೆ ಮತ್ತೊಂದೆಡೆ "ಮುಯ್ಯಿ" ಕೊಡೋರ ಸಾಲು !! (ನನಗೆ ಎರಡೂ ಸ್ವಲ್ಪ ಅಲ್ಲೆರ್ಜಿನೇ . ತುಂಬಾ ಆತ್ಮೀಯರಾದ್ರೆ ನೀರು ಹಾಕುವ ದಿನವೇ ನಾನು ಮಂಜು ಹೋಗಿ ಅದೇನ್ ಕೊಡೋದಿದೆಯೋ ಕೊಟ್ಬಿಡ್ತಿವಿ . ಇಲ್ಲಾ ಅಂದ್ರೆ ಒಂದಷ್ಟು ತಡವಾಗಿಯೇ ಹೋಗಿ ಮಾತನಾಡಿಸಿಕೊಂಡು ಬರೋದು ವಾಡಿಕೆ .. ಇನ್ನು ಊಟದ ಪಜೀತಿಯಂತೂ ಹೇಳೋದೇ ಬೇಡ. ಕೆಲವೊಮ್ಮೆ ನಮ್ಮ ಹಿಂದೆಯೇ ನಿಂತಿರ್ತಾರೆ !! ತಿನ್ನೋಕೆ ಮುಜುಗರ ಆಗೋ ಹಂಗೆ ನಮ್ ಕಡೆಯಂತೂ ಈ ಬೀಗರ ಔತಣಕ್ಕೆ ಮುಗಿ ಬೀಳೋದು ನೋಡಿಯೇ ತಿಳಿಬೇಕು!!) ಮಂಜು "ಜಾಗ ಹಿಡಿದ ಮೇಲೆ" ನಾ ಹೋದೆ .. ಅದೇನ್ ಊಟ ಅಂತೀರಾ ಮೂರು ಪಲ್ಯ , ಕೋಸಂಬರಿ, ಎರಡೆರಡು ಸಿಹಿ, ಇತ್ಯಾದಿ ಇತ್ಯಾದಿ .. ಊರಿನವರು ಕುಳಿತ ಎಲೆಗಳು ಎಲ್ಲಾ ಖಾಲಿಯಾಗಿದ್ರೆ .. ನಮ್ಮ ನಗರ ಮಂದಿ ಕುಳಿತ ಎಲೆಗಳು ಅರೆಬರೆ ತಿಂದು ಉಳಿಸಿದ್ದವು  ಹಾಗೆಂದು ಈ ಹುಡುಗನ ಮನೆಯವರು ತುಂಬಾನೇ ಅನುಕೂಲಸ್ಥರೇನೂ ಅಲ್ಲ . ಖರ್ಚು ಮಾಡೋದು ಹುಡುಗಿಯ ಮನೆಯವರಲ್ವಾ ಅನ್ನೋ ಅಹಂ/ಉದಾಸೀನ ಅಷ್ಟೇ !!!
ಎರಡನೆಯ ಮದುವೆ ಒಂದು ಸ್ಟಾರ್ ಹೋಟೆಲ್ ಅಲ್ಲಿ .ಹುಡುಗಿ ಒಂದು ಒಳ್ಳೆಯ ಕಡೆ ಕೆಲಸದಲ್ಲಿದೆ . ಹುಡುಗ ಕೂಡ ಚೆಂದದ ಕೆಲಸದಲ್ಲಿದ್ದಾನೆ . ದೇವಸ್ಥಾನದಲ್ಲಿ ಮದುವೆ ಮುಗಿಸಿಕೊಂಡು ಹೋಟೆಲ್ ಅಲ್ಲಿ ಊಟಕ್ಕೆ ಹೇಳಿದ್ದಾರೆ .ಮದುವೆ ಮುಗಿದ ಕೂಡಲೇ ಕೊಬ್ಬರಿಸಕ್ಕರೆ ಹಂಚಿ ಸಿಹಿ/ಖುಷಿ ಹಂಚಿಕೊಂಡು ಹೋಟೆಲ್ಗೆ ಬಂದ್ರು . ಊಟ ಕೂಡ ಹಿತಮಿತ . ರುಚಿರುಚಿಯಾದ್ರೂ ಚೆಲ್ಲುವಷ್ಟಲ್ಲ .. ಹುಡುಗ ಹುಡುಗಿ ಹಾಗೂ ಮನೆಯವರಿಗೆ ದುಡ್ಡಿನ ಬೆಲೆ ತಿಳಿದಂತೆ . ಒಂದು ಪಂಕ್ತಿಯವರು ಊಟ ಮಾಡುವಾಗ ಊಟದ ಮನೆಯ ಬಾಗಿಲು ಮುಚ್ಚಿ ಎಲ್ಲಾ ತೆಗೆದು ಶುಚಿ ಮಾಡುವರೆಗೂ-ಮಾಡಿ ಮತ್ತೆ ಕರೆಯುವವರೆಗೂ ಊಟಕ್ಕೆ ಯಾರೂ ಸುಳಿಯಲೇ ಇಲ್ಲ !!
ಮೊದಲೆಲ್ಲಾ ಅಮೆರಿಕನ್ ಕಲ್ಚರ್ ಅಂತ ಅದನ್ನ ಹಿಂಬಾಲಿಸ್ತಾ ಬಹಳ ಮಂದಿ ನಾವುಗಳು(!!) ಈಗ ಮತ್ತೆ ನಮ್ಮದೇ ಸಂಸ್ಕೃತಿ ಚೆಂದ ಎಂದು ಅದನ್ನೇ ಹಿಂಬಾಲಿಸುವ ಹಂತ ತಲುಪಿದ್ದೇವೆ . ಮದ್ವೆ ಆಗೋದು ಒಂದೇ ಸಾರಿ ನಿಜವೇ .. ಆದರೆ ಇಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದು ಅರಿವುದು ನಮ್ಮ ಕೈಲೆ ಇದೆ ಅಷ್ಟೇ..
ಆದ್ರೂ ಒಂದಂತೂ ಚೆಂದ ಕಣ್ರೀ. ಎರಡೂ ಮದ್ವೆಯಲ್ಲೂ ಪುಟ್ಟ ಮಕ್ಕಳ ಅಮ್ಮಂದಿರು/ಅಜ್ಜಿಯಂದಿರು ಬಟ್ಟಲಲ್ಲಿ ಅನ್ನ ಹಿಡಿದು ತಮ್ಮ ಚಿಲ್ಟಾರಿಗಳಿಗೆ "ಮಮ್ಮು" ತಿನಿಸ್ತಾ ಇದ್ದದ್ದು  ಒಂದೆಡೆ 'ಲೇ ಅಮ್ಮಿ , ಒಂದ್ ಬಟ್ಲಗೆ ಒಸಿ ಅನ್ನ ಹಾಕೋಡಮ್ಮಿ , ಮಗಿಗೆ ಉಣ್ಣಿಸಿಬುಡ್ತಿನಿ " ಅಂದ್ರೆ ,ಮತ್ತೊಂದೆಡೆ "ಒಂದು ಬೋವೆಲ್ಗೆ ಒಂಚೂರು ವೈಟ್ ರೈಸ್ ಹಾಕಿ ಕೊಡ್ತೀರಾ ಪ್ಲೀಸ್ ಮಗುಗೆ ಊಟ ಮಾಡಿಸೋಕೆ " ಅಂತಿದ್ರು ಅಷ್ಟೇ ))
ಮನಸ್ಸು ನೀಲಿ ನೀಲಿ ಆ ಬಾನಿನಂತೆ ))Feeling ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ )))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...