Thursday, 23 March 2017

ಪಕ್ಕದ ಮನೆಯಲ್ಲಿ ಹಿರಿಯ ದಂಪತಿಯಿದ್ದಾರೆ . ಆ ಹಿರಿಯಾಕೆ ಬೆಳಿಗ್ಗೆ ನಾ ಬಾಗಿಲಿಗೆ ನೀರು ಹಾಕುವಾಗಲೋ ಅಥವ ಸಂಜೆ ಗಿಡಗಳನ್ನ ನೋಡುವಾಗಲೋ ಹೊರಗಿದ್ದರೆ ಮಾತನಾಡಿಸ್ತಾರೆ. ಊಟ ಆಯ್ತಾ ಸುನಿತಾ ಅನ್ನೋದ್ರಿಂದ ಹಿಡಿದು ಸಮಯ ಸಿಕ್ಕಾಗ ಕೆಲವೊಂದು ಅಡುಗೆಗಳನ್ನೂ ಮಾಡೋದು ಹೇಳಿಕೊಡ್ತಾರೆ .. ಮೊನ್ನೆ ಸಂಜೆ "ಮಹಿಳಾ ದಿನ ಅಂತೆ , ಆ FM ಅಲ್ಲಿ ಹೇಳ್ತಾ ಇದ್ರು ಹಾಡುಗಳೂ ಬರ್ತಾ ಇದೆ ಅಂದ್ರು .. 'ಹೊಂ ಮಾ, ಈವತ್ತು ಮಹಿಳಾ ದಿನ ಅಂತೆ ' ಅಂದೆ ... 'ಅಯ್ ಏನ್ ಹಾಕೊಂಡ್ರೆ ಏನು, ಏನ್ ಕೇಳಿದ್ರೆ ಏನು ಬಿಡಿ ಸುನೀತಾ, ಒಂದ್ ದಿನ ಅಷ್ಟೇ .. ಹೆಣ್ ಮಕ್ಲಿಗೆ , ಹೆಂಗಸರಿಗೆ ಮರ್ಯಾದೆ ಕೊಡದ ಕಡೆ ದೇವ್ರು ಸಾಥ್ ಕೊಡಲ್ಲ 'ಅಂದ್ರು .. ನಕ್ಕು 'ಇದ್ಯಕ್ಕಮ್ಮ ಹಿಂಗಂತೀರಾ ' ಅಂದೆ
'ಕೇಳ್ಕೊಳಿ, ಈ ಮಹಾಭಾರತದ ಭೀಷ್ಮ..ರಾಮಾಯಣದ ಜಟಾಯು ಇಲ್ವಾ , ಇವೆರಡು ಪಾತ್ರಗಳ ಸಾವು ಒಂದ್ ತರ ಒಂದೇ ತರ (same to same ಅಂದ್ರು) !!! ಜಟಾಯು ತಾಯಿಯಂತಹ ಸೀತೆಗಾಗಿ ಹೋರಾಡ್ತಾ ಹೋರಾಡ್ತಾ ಪೆಟ್ಟಾಗಿ ರಾಮನ ಬರುವುವಿಕೆಗಾಗಿ ಕಾಯ್ತಾನೆ , ರಾಮ ಬಂದಾಗ ಅವನ ತೊಡೆಯ ಮೇಲೆ ತಲೆಯಿಟ್ಟು ಪ್ರಾಣ ಬಿಡ್ತಾನೆ .. ಅವನ ಸಾವು ಭಗವಂತನ ತೊಡೆಯ ಮೇಲೆ ಆಗುತ್ತೆ ... ಭೀಷ್ಮ ಮಗಳಂತಹ ದ್ರೌಪದಿಯ ವಸ್ತ್ರಾಪಹರಣದ ಕಾಲದಲ್ಲಿ ಮೌನವಾಗಿ ಕಣ್ ಮುಚ್ಚಿ ಕುಳಿತುಕೊಳ್ತಾನೆ . ಮಹಾಭಾರತದ ಯುದ್ಧದಲ್ಲಿ ಕಡೆಗೆ ತನ್ನ ಸಾವಿಗೆ ತಾನೇ ಸಮಯ ಗೊತ್ತು ಮಾಡಿಕೊಂಡು ಶರಶ್ಯಯೆಯಲ್ಲಿ ಮಲಗಿ ಸಾವಿಗೆ ಕಾಯ್ತಾ ತನ್ನ ತಪ್ಪುಗಳಿಗೆ ಮರುಗುತ್ತಾ, ಪಶ್ಚಾತಾಪ ಪಡ್ತಾ ಸಾಯ್ತಾನೆ ಕಡೆಗೆ...ಯತ್ರ ನಾರ್ಯಸ್ತು ....... ಕೇಳಿಲ್ವಾ ' ಅಂದ್ರು
ಸುಮ್ನೆ ಹಂಚಿಕೊಳ್ಳಬೇಕು ಅನಿಸ್ತು .... :)))
'ಒಬ್ಬಳನ್ನ ಪ್ರೀತಿ ಮಾಡುವಾಗ ಮತ್ತೊಬ್ಬಳನ್ನ ಪ್ರೀತಿ ಮಾಡುವುದು ತಪ್ಪಾ ?' let me be very clear, ಆ ಒಬ್ಬಳು ನಮ್ಮನ್ನ ಪ್ರೀತಿ ಮಾಡದೆ ಇದ್ದಾಗ ಮತ್ತೊಬ್ಬಳನ್ನ ಪ್ರೀತಿ ಮಾಡುವುದು ತಪ್ಪಾ?. ನೀ ಯಾವಾಗ್ಲಾದ್ರೂ ಹಿಂಗೆ ಮಾಡಿದ್ದೀಯಾ .. ಅಪ್ಪ ನಿನ್ನನ್ನ ಹೆಂಗೆ propose ಮಾಡ್ತು ನೀ ಅಷ್ಟೊಂದು ಪ್ರೀತಿಸ್ತೀಯಲ್ಲಾ , ಇಷ್ಟ್ ವರ್ಷ ಆದ್ರೂ ಅಪ್ಪ ಹೆಂಗೆ ನಿನ್ನ ಅಷ್ಟು ಪ್ರೀತಿಸುತ್ತೆ ! ನೀ ಯಾರನ್ನಾದ್ರೂ ಲವ್ ಮಾಡಿದ್ಯಾ !? ಇಲ್ಲಾ ನಿಂಗೆ ಯಾರಾದ್ರೂ propse ಮಾಡಿದ್ರಾ ? ನನಗೂ ಕಾರ್ತಿಗೂ ೪ ವರ್ಷ ಗ್ಯಾಪ್ ಬೇಕಿತ್ತಾ ?
ವಯಸ್ಸಿಗೆ ಬಂದ ಮಕ್ಕಳನ್ನ ಗೆಳೆಯರ ತರ ನೋಡಬೇಕು ಅಂತ ನಡೆದುಕೊಂಡಿದ್ದರ ಪರಿಣಾಮ ... ಪುಣ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರಿಸಿ ಅಂತ ಅಂಕಗಳನ್ನ ಕೊಟ್ಟಿಲ್ಲ ..ಅದೆಷ್ಟ್ ಪುಣ್ಯ ಮಾಡಿರೋದಕ್ಕೆ ಇಂತಹವು ಹುಟ್ಟಿದ್ದಾವೊ ಕಾಣೆ !!!!!!!
ಒಬ್ಬ ಸಾಧು ಒಂದುಸಮುದ್ರ ದಂಡೆಯಲ್ಲಿ ಬೆಳಿಗ್ಗೆಬೆಳಿಗ್ಗೆ ಧ್ಯಾನ ಮಾಡಲು ಹೋಗ್ತಾನೆ . ತಟದಲ್ಲಿ ಒಬ್ಬ ವ್ಯಕ್ತಿ ಒಂದು ಹೆಂಗಸಿನ ತೊಡೆಯ ಮೇಲೆ ತಲೆಯಿಟ್ಟು ಮಲಗಿರ್ತಾನೆ , ಪಕ್ಕದಲ್ಲಿ ಒಂದೆರಡು ಬಾಟಲಿಗಳು ಇರ್ತಾವೆ.
ಸನ್ಯಾಸಿ ಅದನ್ನು ನೋಡಿ ' ಛೆ ಎಷ್ಟು ಕೆಟ್ ಹೋಯ್ತು ಪ್ರಪಂಚ . ಬೆಳಿಗ್ಗೆಬೆಳಿಗ್ಗೆ ಕುಡಿದು ಹೆಣ್ಣಿನ ತೊಡೆಯಲ್ಲಿ ಮಲಗಿದ್ದಾನಲ್ಲ' ಅಂತ ಹೇವರಿಸುತ್ತಾನೆ. 
ಅಷ್ಟ್ರಲ್ಲಿ ಒಬ್ಬಾಕೆ 'ಕಾಪಾಡಿ ಕಾಪಾಡಿ, ಮಗು ಮುಳುಗ್ತಾ ಇದೆ' ಅಂತ ಕೂಗುತ್ತಾಳೆ . ಮಲಗಿದ್ದ ವ್ಯಕ್ತಿ ಎಚ್ಚೆತ್ತು ಸಾಗರದೊಳಗೆ ಇಳಿದು ಮಗುವನ್ನ ಉಳಿಸುತ್ತಾನೆ .. 
ಈಗ ಸನ್ಯಾಸಿ ಗೊಂದಲಕ್ಕೊಳಗಾಗುತ್ತಾನೆ 'ಇವನ್ನನ್ನ ಒಳ್ಳೆಯವನು ಎನ್ನಲೋ ಕೆಟ್ಟವನು ಎನ್ನಲೋ !?'
ಆ ವ್ಯಕ್ತಿಯನ್ನೇ ಕೇಳಿಬಿಡೋಣ ಅಂತ ಹೋಗ್ತಾನೆ 'ಯಾರಪ್ಪ ನೀನು? ಏನ್ ಕೆಲಸ ಮಾಡ್ತೀಯ?ಇಷ್ಟ್ ಬೆಳಿಗ್ಗೆಬೆಳಿಗ್ಗೆ ಇಲ್ಲೇನು ಮಾಡ್ತಾ ಇದ್ದೀಯ' ಅಂತಾನೆ ..
ಆ ವ್ಯಕ್ತಿ ಹೇಳ್ತಾನೆ 'ಅಯ್ಯಾ , ನಾನೊಬ್ಬ ಬೆಸ್ತರವ , ಸುಮಾರು ತಿಂಗಳೇ ಆಗಿತ್ತು ಮನೆ ಬಿಟ್ಟು . ಇಂದಷ್ಟೇ ಸಾಗರನ ಮಡಿಲಿಂದ ಹೊರ ಬಂದೆ . ಅದೆಷ್ಟೋ ದಿನಗಳ ನಂತರ ನೆಲ ಕಂಡ ಸಂತಸಕ್ಕೆ , ಈಕೆ ತಂದ ನೀರು ಆಹಾರ ಸೇವಿಸಿ ಹಾಗೆ ಒರಗಿದ್ದೆ ಅಷ್ಟೇ .. ಯಾರೋ ನೀರಲ್ಲಿ ಮುಳುಗಿದ್ದ ಕಂಡು ಎಚ್ಚರಗೊಂಡು ರಕ್ಷಿಸಿದೆ ಅಷ್ಟೇ .. ಈಕೆ ನನ್ನ ತಾಯಿ '
ಸನ್ಯಾಸಿ ತಾ ಯೋಚಿಸಿದ ಪರಿಗೆ ನಾಚುತ್ತಾನೆ ....
ನರಸಿಂಗ ರಾವ್ ಸರ್ ಅವ್ರ ಗೋಡೆಯಲ್ಲಿತ್ತು , ಭಾವಾನುವಾದ ನನ್ನದು ಅಷ್ಟೇ
ಹಂಚಿಕೊಳ್ಳಬೇಕು ಅನಿಸ್ತು :))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...