Tuesday, 25 October 2016

ಲಕ್ಷ್ಮಿ ತನ್ನ ಪೂಜೆಯಿಂದ ತುಂಬಾ ಪ್ರಸನ್ನಗೊಂಡಿದ್ದಳು. ಜೊತೆಗೆ ಒಂದಷ್ಟು ಅಹಂ, ಜಂಬ ಕೂಡ ... 
ಗಂಡನಿಗೆ ಹೇಳಿದ್ಳು 'ನೋಡಿದ್ರಾ, ನಾ ಅಂದ್ರೆ ಹೆಂಗೆ, ನಾನು ಅಂದ್ರೆ ಬೇಡ ಅನ್ನೋರೇ ಇಲ್ಲ, ಪೂಜೆ, ಸೇವೆ, ನೈವೇದ್ಯ ಎಲ್ಲಾ ನೋಡಿದ್ರಾ? ದೇವಾನುದೇವತೆಗಳಲ್ಲಿ ನಾನೇ ಶ್ರೇಷ್ಠಳು!' 
ವಿಷ್ಣು ನಕ್ಕ .. 
'ಅದ್ಯಾಕೆ ಆ ನಗು? ನನ್ನ ಮಾತಲ್ಲಿ ನಂಬಿಕೆ ಇಲ್ವಾ ?ಅಲ್ಲಿ ನೋಡಿ ಭೂಮಿಯಲ್ಲಿ' ಅಂದ್ಳು 
ಅವಳು ಹೇಳಿದ್ದು ಯಾವುದು ಸುಳ್ಳಿರಲಿಲ್ಲ . ಭೂಮಿ ತುಂಬಾ ಅವಳಿಗಾಗಿ ನೈವೇದ್ಯ, ಹರಕೆ, ವೈಭವ ಓಹ್ ... ಅವಳನ್ನ ಬೇಡ ಎನ್ನುವವರೇ ಇಲ್ಲ .. ವಿಷ್ಣು ಕೂಡ ಹೆಂಡತಿಯ ಕಡೆ ಅಭಿಮಾನದಿಂದ ನೋಡಿದ . 
ಆದ್ರೂ ಆ ಅಹಂ...
ಹೆಂಡತಿಗೆ ಅಲ್ಲೊಂದು ಕಡೆ ನೋಡಲು ಹೇಳಿದ . ಅಲ್ಲೊಬ್ಬ ವ್ಯಕ್ತಿ ಸತ್ತಿದ್ದ.. "ಇವನಿಗೂ ನಿನ್ನ ಅಗತ್ಯ ಇದೆಯೇ ಪ್ರಿಯೆ ?" ಎಂದ
ಲಕ್ಷ್ಮಿ ಒಂದು ಕ್ಷಣ ವಿಚಲಿತಳಾದಳು .. ಮತ್ತೆ ಸ್ತಬ್ದಳಾದಳು ...
"ನಾನು" ಇರೋವರೆಗೂ ಮಾತ್ರ ನಿನ್ನ ಅಗತ್ಯ ಲಕ್ಷ್ಮಿ .. 'ನಾನು' ಅಂದ್ರೆ ಒಳಗಿನ ಉಸಿರು , 'ನಾನು' ಅಂದ್ರೆ ಜೀವಾತ್ಮ ........ ಮತ್ತೆ 'ನಾನು' ಅಂದ್ರೆ ಸ್ವಾರ್ಥ ಕೂಡ!!ಅಂದ .
ನೆನ್ನೆ ಮನೆಗೆ ಬಂದ ಹಿರಿಯರೊಬ್ಬರು ಹೇಳಿದ ಕಥೆ ...
ಹಂಚಿಕೊಳ್ಳಬೇಕು ಅನಿಸ್ತು
ಮುಡಿ ತೊಳೆದು ಸಿಕ್ಕಾದ ಜಡೆಯ ಬಿಡಿಸುವಂತೆ 
ಬದುಕ ಸಿಕ್ಕುಗಳ ಬಿಡಿಸುವಂತಾಗಿದ್ದರೆ ....... 
ಅಂದಾಗುತ್ತಿರಲ್ಲ 
ಮಹಾಭಾರತ ರಾಮಾಯಣಗಳು .... 
ಇಂದು ನಡೆಯುತ್ತಿರಲಿಲ್ಲ 
ಅದರ ಮುಂದುವರಿದ ಭಾಗಗಳು ಮತ್ತದರ ಉಪಕಥೆಗಳು ....
ಫೇಸ್ಬುಕ್ ಸೇರಿದ ಹೊಸದು. ಇಲ್ಲಿಯ ಫಾರ್ಮಾಲಿಟಿಸ್ಗಳು/ಔಪಚಾರಿಕತೆ ಗೊತ್ತಿಲ್ಲದ ಕಾಲ.. ಮೊದ್ಲೇ ಒಂದ್ ತರ ಬಾಳೆಹಣ್ಣಿನ ಗುಡಾಣದಲ್ಲಿ ಬೆಳೆದವಳು. ಪ್ರಪಂಚಕ್ಕೆ ತೆರೆದುಕೊಂಡಿರುವುದು ಕಡಿಮೆಯೇ. ಒಂಚ್ಚುರು ಚೆನ್ನಾಗಿ ಮಾತಾಡಿದ್ರೆ ಸಾಕು 'ಓಹ್ , ತುಂಬಾ ಒಳ್ಳೆಯವರು' ಅಂದ್ಕೊಳ್ತಾ ಇದ್ದೆ ಕೇಳೋದೇ ಸಾಕು ಅಂತ ಪೂರಾ bio-data ಕೊಟ್ಬಿಡ್ತಾ ಇದ್ದೆ ..ಅದೇನ್ ಪುಣ್ಯವೋ ಇಲ್ಲ ದೇವ್ರ ದಯೆನೋ ಏನೋ ಕಷ್ಟಕ್ಕೆ ಸಿಕ್ಕಿಕೊಂಡಿದ್ದು ಕಡಿಮೆಯೇ.. ಕೆಲವೊಂದು ಅನಪೇಕ್ಷಿತ ಸಣ್ಣ ಪುಟ್ಟ ಮುಜುಗರಗಳಿಗೆ ಒಳಗಾಗಿದಾಗ ಬೆನ್ನ ಹಿಂದೆಯೇ ಇದ್ದು ಜೊತೆ ನೀಡಿದ ಆಪತ್ಬಾಂಧವರು ಇಂದಿಗೂ ಅದೇ ಆತ್ಮೀಯತೆ ಉಳಿಸಿಕೊಂಡಿರುವುದು ಒಂದು ವರವೇನೋ ಎನ್ನುವಂತೆ...
ಮೊನ್ನೆ ಮೊನ್ನೆ ಗೆಳತಿಯೊಬ್ಬರು ಮೆಸೇಜ್ ಮಾಡಿ 'ನಿನಗೆ __ ಗೊತ್ತಾ ?' ಅಂದ್ರು. 'ಹ್ಮ್ , ಮೊದಲೊಮ್ಮೆ ಗೆಳೆಯರಾಗಿದ್ರು , ಒಂದೆರಡು ಬಾರಿ ಮಾತು ಕೂಡ ಆಡಿದ್ದೆ ,ಒಮ್ಮೆ ಮನೆಗೆ ಕೂಡ ಬಂದಿದ್ರು... ಈಗ ಇಲ್ಲ" ಅಂದೆ. 'ನನ್ನ ಹತ್ತಿರ ಮಾತಾಡ್ತಾ ಇರುವಾಗ ಹಾಗೆ ನಿನ್ನ ವಿಷ್ಯ ಬಂತು 'ಒಂದ್ ತರ ಅವರಿಗೆ(!) ಅಹಂಕಾರ ಜಾಸ್ತಿ ಅಂತ ಒಂದೆರಡು ಮಾತು ಹೇಳಿದ್ರು ಸುನಿ ' ಅಂದ್ರು ಆ ಗೆಳತಿ ... ನಕ್ಕು ಬಿಟ್ಟೆ..
ನನಗೆ ಯಾರ ಸರ್ಟಿಫಿಕೇಟ್ನಿಂದ ಖುಷಿ ಅಥವಾ ಬೇಸರ ಆಗೋದಿಲ್ಲ , ಕೆಲವೊಂದು ವಿಷಯಗಳನ್ನ ಹೇಳದೆ ಉಳಿದರೆ ಚೆಂದ.. ಹೇಳಿದರೆ ಮೊದಲು ನನ್ನ ವ್ಯಾಲ್ಯೂ ಕಡಿಮೆಯಾಗುತ್ತದೆ ('ಯಾಕೆ ಏನೂ ಗೊತ್ತಿಲ್ಲದವಳೇನ್ರಿ , ಊರಿಗೇ ಬುದ್ದಿ ಹೇಳ್ತಾಳೆ!!! ) ಅನ್ನೋದು ತಿಳಿಯದ ವಿಷಯವೇನಲ್ಲ ನನಗೆ..ಅತ್ತೆಯ ಮನೆಯಲ್ಲಿ ಬದುಕನ್ನ ಗೆದ್ದು ಸೈ ಅನಿಸಿಕೊಂಡವಳು ! :) ನಾನು ನನ್ನದೇ ಪರಿಧಿಯೊಳಗೆ ನನ್ನ ಮನೆ/ಮನಸ್ಸಿಗೆ ಮೋಸ ಮಾಡಿಕೊಳ್ಳದೆ ಮತ್ಯಾರಿಗೂ ನೋವಾಗದಂತೆ ಬದುಕಲು ಕಲಿತವಳು.. And i am happy.. ಇರುವ ಇರವ ಬೆಳಗುವ ಪರಿ ಕಲಿತಿದ್ದೇನೆ and it is enof... ಮತ್ತೊಬ್ಬರಿಗೆ ಹೇಳೋ ಅಷ್ಟು ದೊಡ್ಡವಳಲ್ಲ ಆದ್ರೆ ಹೇಳಿಸಿಕೊಳ್ಳೋ ಅಷ್ಟು ಚಿಕ್ಕವಳು rather ಸಣ್ಣವಳು/ಸಣ್ಣತನ ಕೂಡ ಅಲ್ಲ .... ಮತ್ತೊಬ್ಬರ ಬಗ್ಗೆ ಮಾತನಾಡುವಾಗ ಸಣ್ಣತನ ಬೇಡ....
I have lived my life, I've loved it, I've lost, I've missed, I've been hurt, I've trusted, I've made mistakes, but most of all, I've learned and keep learning.........:)))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...