Sunday, 21 September 2014


ಬೆಟ್ಟದಂಚಲ್ಲಿ ಹುಟ್ಟಿ
ಧುಮ್ಮಿಕ್ಕಿ ಹರಿವ ನದಿಯ ನೀರ
ಪುಟ್ಟ ಹನಿಯಲ್ಲೂ
ಅಲ್ಲೆಲ್ಲೋ ಇರುವ

ಶರಧಿಯ ಅಪ್ಪುವ ಹೆಬ್ಬಯಕೆ
ನೋಡೋ ಗೆಳೆಯ !!!

Wednesday, 17 September 2014


















ನಾ ರಾಧೆಯಾಗಬೇಕೆಂದರೆ
ನೀ ಕೃಷ್ಣನಾಗಬೇಕು
ಆದರೆ
ಒಮ್ಮೆ ನನಗಾಗಿ
ರಾಮನಂತ ಕೃಷ್ಣನಾಗಬಾರದೆ ಎಂದೆ
ನನ್ನ ಸೆರಗ ಅವನ
ಮುರಳಿಯ ಒಡಲಿಗೆ ಬಳಸಿ
ಮಾತು ತಪ್ಪಲಾರೆ ಎಂದು ವಚನವಿತ್ತಿದ್ದಾನೆ .....
ನಾ ರಾಧೆಯಾಗಿ ಕಾಯುತ್ತಿದ್ದೇನೆ .......:))))
ನಾ ರಾಧೆಯಾಗಬೇಕೆಂದರೆ ನೀ ಕೃಷ್ಣನಾಗಬೇಕು ಆದರೆ ಒಮ್ಮೆ ನನಗಾಗಿ ರಾಮನಂತ ಕೃಷ್ಣನಾಗಬಾರದೆ :))))))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...