Thursday, 9 November 2017

ಮೊನ್ನೆ ಮೊನ್ನೆ ಮನೆಗೆ ಬಂದ ಹಿರಿಯ ಗೆಳೆಯರೊಬ್ಬರೊಡನೆ ಮಾತಾಡ್ತಾ ಇದ್ವಿ . ಮಾತಿಗೆ ಮಾತು ಬಂದು ಮಕ್ಕಳನ್ನ ಬೆಳೆಸುವ ವಿಷ್ಯಕ್ಕೆ 'ಊರ ಬಾಗಿಲು ಕಾಯ್ದು ದೊಡ್ಡ ಬೋರೇಗೌಡ ಅನಿಸಿಕೊಂಡಂತೆ' ಅಂದ್ರು ಮಂಜು .
ಅದಕ್ಕಾ ಹಿರಿಯರು 'ಸಾಂಬನ ಕಥೆ ಗೊತ್ತಲ್ಲ? ಕೃಷ್ಣನ ಮಗ ಸಾಂಬನದು?" ಅಂದ್ರು ಮತ್ತೆ ಮುಂದುವರೆಸಿದರು "ಸಾಂಬ ಜಾಂಬವತಿ-ಕೃಷ್ಣನ ಮಗ. ತನ್ನ ತಂದೆಯ ವೇಷ ಧರಿಸಿ ತಂದೆಯ ಉಪಪತ್ನಿಯರನ್ನೇ ಮೋಸಗೊಳಿಸುತ್ತಾನೆ. ಕೋಪಗೊಂಡ ಅಪ್ಪ ಮಗನಿಗೆ ಚರ್ಮವ್ಯಾದಿಯ ಶಾಪ ನೀಡುತ್ತಾನೆ . ಸಾಂಬ ಸೂರ್ಯದೇವನಿಗೆ ದೇಗುಲಗಳನ್ನ ಕಟ್ಟಿಸಿ ಶಾಪ ವಿಮುಕ್ತಿಗೊಳ್ಳುತ್ತಾನೆ.(sun temple Konarak) 
ದುರ್ಯೋಧನನ ಮಗಳನ್ನ ಅಪಹರಿಸಿ ಸಿಕ್ಕಿಬಿದ್ದು ಯಾದವರಿಗೂ-ಕೌರವರಿಗೂ ಯುದ್ಧಕ್ಕೆ ಬೀಳುವಂತಾದಾಗ ಆತನ ದೊಡ್ಡಪ್ಪ ಬಲರಾಮ ನಿಂತು ರಾಜಿ ಮಾಡಿಸುತ್ತಾನೆ.
ಕಡೆಗೆ ಒಮ್ಮೆ ದೂರ್ವಾಸರು ಹಾಗು ಇತರ ಮುನಿಗಳು ದ್ವಾರಕೆಗೆ ಕೃಷ್ಣನ ದರ್ಶನಕ್ಕೆಬಂದಾಗ ಒನಕೆಯನ್ನ ಉದರಕ್ಕೆ ಸುತ್ತಿಕೊಂಡು ಗರ್ಭಿಣಿಯಂತೆ ನಟಿಸಿ 'ತನಗೆಂತ ಮಗು ಹುಟ್ಟುವುದೆಂದು ಅವರನ್ನ ಹಾಸ್ಯ ಮಾಡುವಂತೆ ಕೇಳಿದಾಗ ಕೋಪಗೊಂಡ ಮುನಿಗಳು ನಿನಗೊಂದು ಒನಕೆ ಹುಟ್ಟಲಿ, ಅದರಿಂದಲೇ ಯದುಕುಲ ಕೊನೆಯಾಗಲಿ ಅಂತ ಶಾಪ ನೀಡುತ್ತಾರೆ. ಕಡೆಗೊಂದು ದಿನ ಮುನಿಗಳ ಶಾಪದಂತೆ ಸಾಂಬ ಒನಕೆಕೆ ಜನ್ಮ ನೀಡುತ್ತಾನೆ . ಅದನ್ನೆಲ್ಲ ಚೂರು ಚೂರು ಮಾಡಿ ಯಮುನೆಯ ತಟದಲ್ಲಿ ಎಸೆದು ಬಿಡುತ್ತಾನೆ. ಯಾದವೀ ಕಲಹ ಶುರುಗುವಷ್ಟರಲ್ಲಿ ಈ ಒನಕೆಯ ಚೂರುಗಳು ದೊಡ್ಡ ಹುಲ್ಲಿನ ಜಂಡುಗಳಾಗಿ ಬೆಳೆದು ಯಾದವರು ಅವುಗಳಿಂದಲೇ ಆಯುಧ ಮಾಡಿ ಬಡಿದಾಡಿ ಸಾಯುತ್ತಾರೆ. ಕಡೆಗೆ ಕೃಷ್ಣ ಕೂಡ ನೊಂದು ಯಮುನೆಯ ತಟದಲ್ಲಿ ಆ ಹುಲ್ಲು ಜೊಂಡಿನ ನಡುವೆ ಮಲಗಿದ್ದಾಗ ಜರ ಎಂಬ ಬೇಟೆಗಾರ ಅವನನ್ನು ಯಾವುದೋ ಪ್ರಾಣಿ ಅಲ್ಲಿ ಮಲಗಿದೆಂದು ಭ್ರಮಿಸಿ ಬಾಣಹೂಡಿಬಿಡುತ್ತಾನೆ.. ಅಲ್ಲಿಗೆ ಯದುಕುಲದ ಪರಿಸಮಾಪ್ತಿಯಾಗುತ್ತದೆ ' ಅಂದ್ರು .
ಅಮ್ಮ ಅಪ್ಪನಾಗೋದು ಅಂದ್ರೆ ಕೇವಲ ದೈಹಿಕವಾಗಲ್ಲ ಮಾನಸಿಕವಾಗಿ ದೈವಿಕವಾಗಿ ಕೂಡ ಮಕ್ಕಳನ್ನ ಬೆಳೆಸಬೇಕೇನೋ. ಒಂದಷ್ಟು ಸಮಯ, ಒಂದಷ್ಟು ಪ್ರೀತಿ, ಒಂದಷ್ಟು ಅಪ್ಪನಾಗಿ, ಅಮ್ಮನಾಗಿ ಮಕ್ಕಳೊಡನೆ ಮಾತುಕತೆ ಅಗತ್ಯವೇನೋ ಅಲ್ವೇ ...
ಹಂಚಿಕೊಳ್ಳಬೇಕು ಅನಿಸ್ತು .... 

Wednesday, 9 August 2017

ೆಯಲ್ಲಿ ಒಂದು ಪುಟ್ಟ ಹುಡುಗಿ, ಕಾರ್ತಿಗಿಂತ ಒಂದ್ಮೂರು ವರ್ಷ ದೊಡ್ಡವಳೇನೋ, ಶಾಲೆಗೆ ಹೋಗುವಾಗ ದಿನಾ ಮಾತನಾಡಿಸ್ತಾ ಇದ್ದೆ. ಒಂದೆರಡು ತಿಂಗಳುಗಳ ನಂತರ ಗಾಡಿಯಲ್ಲಿ ನಾನು ಮಂಜು ಹೋಗುವಾಗ ಆ ಹುಡುಗಿ ತನಗಿಂತ ಒಂದಾರೇಳು ವರ್ಷದ ಹುಡುಗಿ ಜೊತೆ ಆಗಾಗ ಕಾಣಿಸ್ತಾ ಇತ್ತು. ಆ ದೊಡ್ಡ ಹುಡುಗಿ ಫೋನ್ ಅಲ್ಲಿ ಯಾರ ಜೊತೆಗೆ ಮಾತಾಡ್ತಾ ಇದ್ರೆ ಇದು ಪಕ್ಕದಲ್ಲಿ ನಿಂತಿರ್ತಾ ಇತ್ತು. ಆ ದೊಡ್ಡ ಹುಡುಗಿ ತನ್ನ safetyಗಾಗಿ ಇವಳನ್ನ ಜೊತೆಗೆ ಕರ್ಕೊಂಡು ಬಂದು ಜೊತೆ ನಿಲ್ಲಿಸಿಕೊಂಡು ಗಂಟಿಗಟ್ಟಲೆ ಮಾತಾಡ್ತಾ ಇತ್ತು ಅನಿಸುತ್ತೆ (ಯಾರ ಜೊತೆ, ಏನು ಮಾತಾಡ್ತಾ ಇದ್ದಳೋ ನನಗೆ ಅಪ್ರಸ್ತುತ .. ಆದರೆ ಹೋಗ್ತಾ ಬರ್ತಾ ಇದ್ದವರು ಆಕೆಯನ್ನ ನೋಡೋ ರೀತಿ ಇಷ್ಟ ಆಗ್ತಾ ಇರ್ಲಿಲ್ಲ ). ಈ ಹುಡುಗಿ ಪಕ್ಕದಲ್ಲೇ ಸುಮ್ನೆ ನಿಂತಿರ್ತಾ ಇತ್ತು . ಒಂದೆರಡ್ಮೂರು ಬಾರಿ ನೋಡಿದ ನಂತರ ಒಂದ್ ದಿನ ಎಂದಿನಂತೆ ಮಾತನಾಡಿಸಿದ ಹುಡುಗಿಯನ್ನ 'ಪುಟ್ಟ, ನಿನ್ನ ಅಲ್ಲಿ ನೋಡ್ದೆ , ಯಾಕ್ ಅಲ್ಲಿ ಇಲ್ಲಿ ನಿಂತ್ಕೊಳ್ತೀಯಪ್ಪ? ಅಪ್ಪ ಅಮ್ಮ ನೋಡಿದ್ರೆ ಬೇಜಾರ್ ಮಾಡ್ಕೊಳ್ತಾರೆ. ನಿನ್ ಫ್ರೆಂಡ್ಸ್ ಜೊತೇನೆ ಹೋಗು, ದೊಡ್ಡೋರ ಜೊತೆ ಯಾಕಪ್ಪ 'ಅಂದೆ . ಮನೆಯ ಹೊರಗೆ ಕಾಂಪೌಂಡ್ ಅಲ್ಲೇ ಇದ್ದ ಅವರಮ್ಮ "ಏನ್ ಸುನೀತಾ "ಅಂದ್ರು . 'ಏನಿಲ್ಲ ಟೆಸ್ಟ್ ಆಯ್ತಾ ಅಂತ ಕೇಳ್ತಾ ಇದ್ದೆ ಅಷ್ಟೇ' ಅಂದೆ.
ಅದೇ ಕೊನೆ ನಾ ಆ ಮಗುವನ್ನ ರಸ್ತೆ ಬದಿಯಲ್ಲಿ ನೋಡಿದ್ದು. ಮನೆಯ ಮುಂದೆ ತನ್ನ ಸಮಾನ ವಯಸ್ಸಿನ ಮಕ್ಕಳ ಜೊತೆ ಆಡ್ಕೊಂಡು, ಚೆಂದ ಅಂಕಗಳನ್ನ ತೆಗೆದು ಇಂಜಿನಿಯರಿಂಗ್ ಮುಗಿಸಿದ್ಳು. ಅಲ್ಲೆಲ್ಲೋ ಒಂದು ಕಡೆ ಕೆಲ್ಸಕ್ಕೆ ಕೂಡ ಹೋದ್ಳು . ಮೊನ್ನೆಮೊನ್ನೆ ಅವರಮ್ಮ 'ಮಗಳಿಗೆ ಮದ್ವೆ ಫಿಕ್ಸ್ ಆಯ್ತು ಸುನೀತಾ ' ಅಂತ ಸಂತಸ ಹಂಚಿಕೊಂಡ್ರು . ಪುಟ್ಟ ಹುಡುಗಿ ಈಗಿನ್ನು ಕಣ್ಣ ತುಂಬಿ ನಿಂತು 'ಇನ್ ಮೇಲೆ ಹೋಗೋಲ್ಲ ಆಂಟಿ' ಅಂದ ನೆನಪು . ಆಗಲೇ ಅದಕ್ಕೆ ಮದುವೆ  ಮತ್ತೊಂದು ನಾಲ್ಕುವರ್ಷಕ್ಕೆ ಅದರ ಮಗು ನನ್ನ 'ಅಜ್ಜಿ ' ಅನ್ನುವುದೇನೋ
ಮನಸ್ಸು ನೀಲಿನೀಲಿ ))
ಬದುಕು ತುಂಬಾ ಸುಂದರ, ನಾವು ಆರಿಸಿಕೊಳ್ಳುವ ಹಾಗೆ ....
ನೆನ್ನೆ ಹೂ ತರಲು ನಮ್ಮ ಕೆ ಆರ್ ಮಾರುಕಟ್ಟೆಗೆ ಹೋಗಿದ್ವಿ . ಹೂವಿನ ಬೆಲೆ ಸ್ವಲ್ಪ ಜಾಸ್ತಿನೇ ಇತ್ತು. ಮಂಜುಗೆ ಹೇಳ್ದೆ ' ಈಗ್ಲೇ ಹಿಂಗಾದ್ರೆ ಇನ್ನ ಹಬ್ಬಕ್ಕೆ ಅಂತೂ ಕೇಳೋದೇ ಬೇಡವೇನೋ ಅನ್ನೋ ಅಷ್ಟು ಜಾಸ್ತಿ ಆಗುತ್ತೆ ಅಲ್ವ ಮಂಜು' . 'ಒಂದು ಬ್ಯಾಗ್ ಹೋಲಿಸಿ ಕೊಡ್ತೀನಿ ಬಿಡವ್ವಾ ' ಅಂದ್ರು.... ರೇಗಿಹೋಯ್ತು ! 
ನಮ್ಮ ರಸ್ತೆಗೆ ಬೆಳಿಗ್ಗೆಬೆಳಿಗ್ಗೆ ಒಬ್ರು "ಲೇಡಿ' ವಾಕಿಂಗ್ಗೆ ಬರ್ತಾರೆ . ಹೆಗಲಿಗೆ ಒಂದು ಚೀಲ ತಗುಲಿಸಿಕೊಂಡು ಹೋಗ್ತಾರೆ. ಯಾರೂ ಇಲ್ಲದೆ ಇದ್ರೆ ಯಾರ ಮನೆಯ ಮುಂದೆ ಹೂ ಇದೆಯೋ ಅಲ್ಲಿಂದ "ಕೇವಲ" ಒಂದೋ ಎರಡೋ ಕಿತ್ಕೊಂಡು ಟಕ್ ಅಂತ ಚೀಲಕ್ಕೆ ಹಾಕಿ ಏನೂ ನಡೆದೇ ಇಲ್ಲವೇನೋ ಎನ್ನುವಂತೆ ವಾಕಿಂಗ್ ಮುಂದುವರೆಸುತ್ತಾರೆ . ಅದೆಷ್ಟು ಚೆಂದದ reflex action ಅಂತೀರಾ ... ಮೂರು ಬೀದಿಯ ವಾಕಿಂಗ್ ಮುಗಿಸೋ ಹೊತ್ತಿಗೆ ಆವತ್ತಿನ ಪೂಜೆಗೊ, ಷೋಗೆ ಇಡೋದಕ್ಕೋ ಹೂವಿನ ವ್ಯವಸ್ಥೆ ಆಗಿಹೋಗಿರುತ್ತೆ . ಬ್ಯಾಗ್ ತಂದ ಕಾರಣ ಹಾಲು ತೆಗೆದುಕೊಳ್ಳಲು ಅನಿಸೋ ಹಾಗೆ ಕಡೆಗೆ ಬ್ಯಾಗಲ್ಲಿ ಮೂಲೆಯ ಡೈರಿಯಿಂದ ಹಾಲು ಸೇರುತ್ತದೆ! ಮತ್ತೆ ಮೂರು ರಸ್ತೆಗಳ ಆಚೆಯ ಆಕೆಯ ಅಪಾರ್ಟ್ಮೆಂಟ್ ಸೇರಿಕೊಳ್ಳುತ್ತಾರೆ . (ನಾ ಲೇಡಿ ಅಂದಿದ್ದು ಯಾಕೆ ಅಂತ ಗೊತ್ತಾಯ್ತಲ್ವಾ !!) ಮಂಜುನಾಥ ಪ್ರಭುಗಳು ಆ ಸಮಯದಲ್ಲಿ ಡ್ಯೂಟಿಗೆ ಹೋಗುವ ಮೊದಲು ಕಾರು ಒರೆಸಿ ಹೂ ಹಾಕ್ತಾ ಇರ್ತಾರೆ... ಆಕೆಗೆ ಕಾರಿನ ಮರೆಯಲ್ಲಿರೋರು ಕಾಣೋದಿಲ್ಲ ! ಒಮ್ಮೆ ಹಾಗೇ ಕೀಳುವಾಗ ಇವರಿದ್ದಿದ್ದನ್ನ ನೋಡಿ ಮುಜುಗರಗೊಂಡು 'ಯಾವ ಹೂವು ಅಂತ ನೋಡಿದೆ ಅಷ್ಟೇ ಸಾರ್' ಅನ್ದರಂತೆ ! ನನ್ನ ಪತಿದೇವರು ಸುಮ್ನೆ ಹಲ್ಲು ಬಿಟ್ಟರಂತೆ !! (ಇನ್ನೇನು ಮಾಡೋಕೆ ಆಗುತ್ತೆ ! ಹೆಣ್ಣು ಮಕ್ಕಳನ್ನ ಬೈಯೋಕೆ ಆಗುತ್ತಾ ಅಂತಾರೆ!!! ಅಲ್ವ ಮತ್ತೆ!!) ...
ನನಗೆ ರೇಗಿದ್ದು ಯಾಕೆ ಅಂತ ಗೊತ್ತಾಯ್ತಲ್ವಾ ))))).

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...