Sunday, 24 July 2011

ಹೆಜ್ಜೆ ಗುರುತು

ನೀನಿಟ್ಟ ಮೊದಲ ಹೆಜ್ಜೆ ಗುರುತು
ಮನದಾಳದಲ್ಲಿ ಮಾಸದೆ ಉಳಿದಿದೆ ಒಲವೆ...

ಇಳೆಯ ಸೋಕಿದ ಮೊದಲ ಹನಿಯಾ ತೆರದಿ...
ಹೂವ ಚುಂಬಿಸಿದ ಮುಂಜಾನೆಯ ಇಬ್ಬನಿಯಂದದಿ
ಪುಟ್ಟ ಮಲ್ಲಿಗೆ ಹೂ ಬಿರಿದ ಅಂದದಿ...
ಸದ್ದೇ ಇಲ್ಲದ ಸುಳಿವೇ ನೀಡದ ಹೆಜ್ಜೆಯ ಗೆಜ್ಜೆನಾದ...
ನೂರಾರು ಹೆಜ್ಜೆಗಳ ನಡುವೆಯೂ ಉಲಿಯುತ್ತಲೇ ಇದೆ ....

 ನಿನ್ನ  ಹೆಜ್ಜೆಯ ಗೆಜ್ಜೆದನಿ
ಮೊಗದಲ್ಲೊಂದು ನಗುವ ಮೂಡಿಸಿ...
ಮನದಲ್ಲೊಂದು ಮಿಂಚ  ಹರಿಸಿ...
ತನುವಲ್ಲೊಂದು ಕಂಪನ ತರಿಸಿ..
ಉಲಿಯುತ್ತಲೇ ಇದೆ...

ಉಲಿವ ನಿನ್ನ ಗೆಜ್ಜೆಯೊಡನೆ  ನನ್ನ ಮನದ ಮೌನವೀಣೆ
ಪ್ರೇಮ ಸುಧೆಯ  ಹರಿಸಿದೆ ಎಲ್ಲವನ್ನು ಮರೆಸಿದೆ.
ಹೆಜ್ಜೆಯನ್ನು  ಉಳಿಸಿದೆ ....

Friday, 1 July 2011








ಅವಳು 
ಶಕುಂತಲೆ....
ತನ್ನದಲ್ಲದ ತಪ್ಪಿಗೆ..
ಹೆತ್ತವರಿಗೆ ಹೊರೆಯಾಗಿ
ತೊರೆಯಲ್ಪಟ್ಟ ಶಕುಂತಲೆ....
ತನ್ನದಲ್ಲದ ತಪ್ಪಿಗೆ 
ಶಾಪಕ್ಕೆ ಗುರಿಯಾದ ಶಕುಂತಲೆ...
ತನ್ನದಲ್ಲದ ತಪ್ಪಿಗೆ 
ಶಚ್ಚಿತೀರ್ಥದಾಳದಲ್ಲಿ ಉಂಗುರ ಕಳೆದುಕೊಂಡು
ತುಂಬುಸಭೆಯಲ್ಲಿ 
ಪುಟ್ಟ ಕಂದನ ಬಸಿರಲ್ಲಿ ಹೊತ್ತು ..
ಪತಿಯಿಂದ ತ್ಯಕ್ತಳಾದ ಶಕುಂತಲೆ... 

ನಾನು ಶಕುಂತಲೆ..
ಶಚ್ಚಿತೀರ್ಥದ ಮುಂದೆ ನಿಂತಿರುವೆ...
ನನ್ನದಲ್ಲದ ತಪ್ಪಿಗೆ ಪುಟ್ಟ ಕಂದನ ಒಡಲಲ್ಲಿ ಹೊತ್ತು...
ದುಷ್ಯಂತ..ಬರುವನೋ..ಬಾರನೋ ಎಂದಲ್ಲ..
ಶಾಪಹಾಕಿದ ದುರ್ವಾಸರಿಗೆ ಮನದಲ್ಲಿ ಶಪಿಸುತ್ತಲು ಅಲ್ಲ...
ಕಣ್ವನಾಶ್ರಮದೆಡೆಗೆ ಹೋಗಲೋ ಬೇಡವೋ ಎಂದಲ್ಲ...
ಹೆತ್ತು ಪೊರೆಯಲಾರದೆ ಬಿಟ್ಟು ಹೋದ ಹೆತ್ತವರ ಹುಡುಕುತ್ತಲು ಅಲ್ಲ...
ನಾಳೆ ಹುಟ್ಟುವ ನನ್ನ ಕಂದನಿಗೆ ಹೇಗೆ ಬದುಕ ನೀಡಲಿ ಎಂದು....
ನನಗಾದಂತೆ ಅವನಿಗಾಗದಿರಲಿ ಎಂದು..
ನನ್ನದಲ್ಲದ ತಪ್ಪಿಗೆ ನಾನು ನೋವುಡಂತೆ 
ಅವನು ನಲುಗದಿರಲಿ ಎಂದು....
ಧೃಡವಾಗಿ ಬದುಕಾಗಿ....ಬದುಕಲಿಕ್ಕಾಗಿ...
ಏಕೆಂದರೆ....
ನಾನು ಶಕುಂತಲೆ....ಇಂದಿನ ಶಕುಂತಲೆ...

ಇದೆ ಜೀವನ

ನನ್ನೊಳಗೊಂದು ಲೋಕವಿದೆ..
ನನ್ನ ಹೊರಗೊಂದು ಜಗವಿದೆ..
ಅಲ್ಲೊಂದು ತಾಳ...
ಇಲ್ಲೊಂದು ಮೇಳ
ಒಳಗೊಂದು ಅಳುವು
ಹೊರಗೆ ನಲಿವು...
ಒಂದೆಡೆ ಅಸ್ತಮಿಸುವ ಉದಯ...
ಮತ್ತೊಂದೆಡೆ ಉದಯಿಸುವ ಶಶಿ ...
ಹೊರಬೆಳಕಿನಿಂದ ಒಳ ತಮವ ಬೆಳಗಿಸಲೋ...
ಒಳ ಅರಿವೊಡನೆ ಹೊರ ಡಂಬವ ಅಳಿಸಲೋ...
ಅಲ್ಲಿ ಸೊರಗುವ ಬಳ್ಳಿ...
ಇಲ್ಲಿ ಬಿರಿಯುವ ಮೊಗ್ಗು...
ಅತ್ತ ಕಾರ್ಮೋಡ ...
ಇತ್ತ ಮಳೆಗೆ ಬಿರಿದ ಇಳೆ...
ಹೊರಗಿನ ತಾಳಕ್ಕೆ ಒಳಗಿನ ಮೇಳ .....
ಹೊರಗಿನ ತುಡಿತಕ್ಕೆ ಒಳಗಿನ ಬಡಿತ...
ಹೊರ ಲೋಕದ ದನಿಯಿಲ್ಲದೆ ಒಳ ಗೀತೆಗೆ ರಾಗವಿಲ್ಲ
ಹೊರ ನೋಟದ ಮಿಳಿತವಿಲ್ಲದೆ ಒಳಚಿತ್ರದ ಮಿಡಿತವಿಲ್ಲ...
ಇದೆ ಜೀವನ....ಇದುವೇ ಸಂಜೀವನ...

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...